<p>ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಆರ್ಸಿಬಿಯ ಸಾರ್ವಕಾಲಿಕ ಶ್ರೇಷ್ಠ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ.</p><p>ದಿನೇಶ್ ಕಾರ್ತಿಕ್ ಪ್ರಕಟಿಸಿರುವ ಸಾರ್ವಕಾಲಿಕ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿಗೆ ನಾಯಕನ ಪಟ್ಟ ನೀಡಿಲ್ಲ. ಬದಲಾಗಿ ರಜತ್ ಪಾಟೀದಾರ್ಗೆ ತಂಡದ ನಾಯಕತ್ವ ನೀಡಿದ್ದಾರೆ. ವಿರಾಟ್ಗೆ ಯಾಕೆ ತಂಡದಲ್ಲಿ ನಾಯಕನ ಪಟ್ಟ ನೀಡಿಲ್ಲ ಎಂಬುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ದಿನೇಶ್ ಅವರ ನೆಚ್ಚಿನ ಸಾರ್ವಕಾಲಿಕ 11ರ ಬಳಗದಲ್ಲಿ 7 ಮಂದಿ ಭಾರತೀಯ ಆಟಗಾರರಿದ್ದಾರೆ.</p><p>ಪಾಟೀದಾರ್ ನಾಯಕತ್ವದಲ್ಲಿ ಬೆಂಗಳೂರು ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 2026ರಲ್ಲಿಯೂ ಟ್ರೋಫಿ ಗೆಲ್ಲಲು ಸಿದ್ಧತೆಯನ್ನೂ ನಡೆಸುತ್ತಿದೆ. ‘ವಿರಾಟ್ ಕೊಹ್ಲಿ ಹಲವು ವರ್ಷಗಳ ಕಾಲ ಬೆಂಗಳೂರು ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ರಜತ್ ಪಾಟಿದಾರ್ ತಂಡಕ್ಕೆ ಕಪ್ ಗೆದ್ದುಕೊಟ್ಟ ನಾಯಕನಾಗಿದ್ದಾರೆ,’ ಎಂದು ಕಾರ್ತಿಕ್ ಹೇಳಿದ್ದಾರೆ. </p><p>ಇದೇ ಮಾರ್ಚ್ 28ರಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ಪಡೆಯನ್ನು ತವರಿನಲ್ಲಿ ಎದುರಿಸಲಿದೆ.</p><p><strong>ದಿನೇಶ್ ನೆಚ್ಚಿನ ತಂಡ ಹೀಗಿದೆ;</strong></p><ul><li><p>ಕ್ರಿಸ್ ಗೇಲ್</p></li><li><p>ಫಾಫ್ ಡು ಪ್ಲೆಸಿಸ್</p></li><li><p>ವಿರಾಟ್ ಕೊಹ್ಲಿ</p></li><li><p>ರಜತ್ ಪಾಟೀದಾರ್ (ನಾಯಕ)</p></li><li><p>ಎಬಿ ಡಿವಿಲಿಯರ್ಸ್</p></li><li><p>ಜಿತೇಶ್ ಶರ್ಮಾ (ವಿಕೆಟ್ ಕೀಪರ್)</p></li><li><p>ಕೃನಾಲ್ ಪಾಂಡ್ಯ</p></li><li><p>ಹರ್ಷಲ್ ಪಟೇಲ್</p></li><li><p>ಮೊಹಮ್ಮದ್ ಸಿರಾಜ್</p></li><li><p>ಯಜುವೇಂದ್ರ ಚಾಹಲ್</p></li><li><p>ಜೋಶ್ ಹೇಜಲ್ವುಡ್</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಆರ್ಸಿಬಿಯ ಸಾರ್ವಕಾಲಿಕ ಶ್ರೇಷ್ಠ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ.</p><p>ದಿನೇಶ್ ಕಾರ್ತಿಕ್ ಪ್ರಕಟಿಸಿರುವ ಸಾರ್ವಕಾಲಿಕ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿಗೆ ನಾಯಕನ ಪಟ್ಟ ನೀಡಿಲ್ಲ. ಬದಲಾಗಿ ರಜತ್ ಪಾಟೀದಾರ್ಗೆ ತಂಡದ ನಾಯಕತ್ವ ನೀಡಿದ್ದಾರೆ. ವಿರಾಟ್ಗೆ ಯಾಕೆ ತಂಡದಲ್ಲಿ ನಾಯಕನ ಪಟ್ಟ ನೀಡಿಲ್ಲ ಎಂಬುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ದಿನೇಶ್ ಅವರ ನೆಚ್ಚಿನ ಸಾರ್ವಕಾಲಿಕ 11ರ ಬಳಗದಲ್ಲಿ 7 ಮಂದಿ ಭಾರತೀಯ ಆಟಗಾರರಿದ್ದಾರೆ.</p><p>ಪಾಟೀದಾರ್ ನಾಯಕತ್ವದಲ್ಲಿ ಬೆಂಗಳೂರು ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 2026ರಲ್ಲಿಯೂ ಟ್ರೋಫಿ ಗೆಲ್ಲಲು ಸಿದ್ಧತೆಯನ್ನೂ ನಡೆಸುತ್ತಿದೆ. ‘ವಿರಾಟ್ ಕೊಹ್ಲಿ ಹಲವು ವರ್ಷಗಳ ಕಾಲ ಬೆಂಗಳೂರು ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ರಜತ್ ಪಾಟಿದಾರ್ ತಂಡಕ್ಕೆ ಕಪ್ ಗೆದ್ದುಕೊಟ್ಟ ನಾಯಕನಾಗಿದ್ದಾರೆ,’ ಎಂದು ಕಾರ್ತಿಕ್ ಹೇಳಿದ್ದಾರೆ. </p><p>ಇದೇ ಮಾರ್ಚ್ 28ರಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ಪಡೆಯನ್ನು ತವರಿನಲ್ಲಿ ಎದುರಿಸಲಿದೆ.</p><p><strong>ದಿನೇಶ್ ನೆಚ್ಚಿನ ತಂಡ ಹೀಗಿದೆ;</strong></p><ul><li><p>ಕ್ರಿಸ್ ಗೇಲ್</p></li><li><p>ಫಾಫ್ ಡು ಪ್ಲೆಸಿಸ್</p></li><li><p>ವಿರಾಟ್ ಕೊಹ್ಲಿ</p></li><li><p>ರಜತ್ ಪಾಟೀದಾರ್ (ನಾಯಕ)</p></li><li><p>ಎಬಿ ಡಿವಿಲಿಯರ್ಸ್</p></li><li><p>ಜಿತೇಶ್ ಶರ್ಮಾ (ವಿಕೆಟ್ ಕೀಪರ್)</p></li><li><p>ಕೃನಾಲ್ ಪಾಂಡ್ಯ</p></li><li><p>ಹರ್ಷಲ್ ಪಟೇಲ್</p></li><li><p>ಮೊಹಮ್ಮದ್ ಸಿರಾಜ್</p></li><li><p>ಯಜುವೇಂದ್ರ ಚಾಹಲ್</p></li><li><p>ಜೋಶ್ ಹೇಜಲ್ವುಡ್</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>