ಬೆಂಗಳೂರು: ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಆಡಳಿತ ಸಮಿತಿ ಸದಸ್ಯತ್ವಕ್ಕೆ ಮತ್ತು ಆಯ್ಕೆ ಸಮಿತಿಗೆ ಹಿರಿಯ ಕ್ರಿಕೆಟಿಗ ದೊಡ್ಡ ಗಣೇಶ್ ರಾಜೀನಾಮೆ ನೀಡಿದ್ದಾರೆ. ಗೋವಾ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಸಲುವಾಗಿ ಅವರು ಈ ಹುದ್ದೆಗಳನ್ನು ತೊರೆದಿದ್ದಾರೆ. ರಾಜ್ಯ ತಂಡದ ಮಾಜಿ ಆಟಗಾರ ಜೆ.ಅಭಿರಾಮ್ ಅವರನ್ನು ಆಯ್ಕೆ ಸಮಿತಿಗೆ ಸೇರಿಸಿಕೊಳ್ಳಲಾಗಿದೆ ಎಂದು ಕೆಎಸ್ಸಿಎ ವಕ್ತಾರ ವಿನಯ ಮೃತ್ಯುಂಜಯ ತಿಳಿಸಿದ್ದಾರೆ.