ಪಾರದರ್ಶಕತೆ ಪ್ರೋತ್ಸಾಹಿಸಲು ಕ್ರಮ
‘ಪ್ರತಿ ತಿಂಗಳು ದಾಖಲಾದ ದೂರುಗಳು ಹಾಗೂ ಅವುಗಳನ್ನು ಇತ್ಯರ್ಥಗೊಳಿಸಿದ ಮಾಹಿತಿ ಆ್ಯಪ್ನಲ್ಲಿ ಲಭ್ಯವಿರಲಿದೆ. ತ್ವರಿತವಾಗಿ ದೂರುಗಳು ಪರಿಹಾರವಾದ ಆಧಾರದ ಮೇಲೆ, ಮೊದಲ ಹಾಗೂ ಕೊನೆಯ ಐದು ಸ್ಥಾನಗಳಲ್ಲಿರುವ ರೈಲ್ವೆ ನಿಲ್ದಾಣಗಳು, ಪ್ರತಿ ವಲಯದ ರಾಜಧಾನಿ, ಶತಾಬ್ದಿ ರೈಲುಗಳ ಮಾಹಿತಿ ನೀಡಲಾಗುವುದು. ಈ ಮೂಲಕ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಕಾಪಾಡಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.