ಶೆಟ್ಟಿಹಳ್ಳಿಯ ಸರ್ವೆ ಸಂಖ್ಯೆ 11ರ 33 ಗುಂಟೆಯನ್ನು ಕೆ.ಇ.ಷಡಕ್ಷರಯ್ಯ ಎಂಬವರು ಕಬಳಿಸಿದ್ದರು. ಈ ಪ್ರಕರಣ ಆರು ತಿಂಗಳ ಹಿಂದೆ ದಾಖಲಾಗಿತ್ತು. ಚನ್ನಗಿರಿ ತಹಶೀಲ್ದಾರ್, ಸರ್ವೆಯರ್ ಹಾಗೂ ಕಂದಾಯ ನಿರೀಕ್ಷಕ ದಾಖಲೆಗಳನ್ನು ಒದಗಿಸಿ ಸಾಕ್ಷ್ಯ ನುಡಿದಿದ್ದರು. ನ್ಯಾಯಮೂರ್ತಿ ಎಚ್.ಎನ್. ನಾರಾಯಣ, ಬಿ.ಬಾಲಕೃಷ್ಣ ಹಾಗೂ ಬಿ.ಆರ್.ಜಯರಾಮರಾಜೇ ಅರಸ್ ಅವರ ಪೀಠವು ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ಪಾಟೀಲ ವಾದಿಸಿದ್ದರು.