IND vs ENG: ಶಾರ್ದೂಲ್ ಠಾಕೂರ್ಗೆ ಗಾಯ, 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯ

ಲಂಡನ್: ಸ್ನಾಯುಸೆಳೆತದಿಂದ ಬಳಲುತ್ತಿರುವ ಟೀಂ ಇಂಡಿಯಾದ ವೇಗಿ ಶಾರ್ದೂಲ್ ಠಾಕೂರ್ ಲಾರ್ಡ್ಸ್ನಲ್ಲಿ ಗುರುವಾರ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಶಾರ್ದೂಲ್ ಅನುಪಸ್ಥಿತಿಯಿಂದಾಗಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಾಟಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಮಳೆ ಸುರಿಯದೇ ಹೋಗಿದ್ದರೆ ಭಾರತಕ್ಕೆ ಜಯಿಸುವ ಅವಕಾಶ ಇತ್ತು. ಆದರೆ, ಪಂದ್ಯ ಡ್ರಾ ಆಯಿತು.
ಆ ಪಂದ್ಯದಲ್ಲಿ ವಿರಾಟ್, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ರವೀಂದ್ರ ಜಡೇಜ ಅವರ ಅಮೋಘ ಬ್ಯಾಟಿಂಗ್ ಕಳೆಗಟ್ಟಿತ್ತು. ಜಸ್ಪ್ರೀತ್ ಬೂಮ್ರಾ ಎರಡೂ ಇನಿಂಗ್ಸ್ಗಳಲ್ಲಿ ತಮ್ಮ ಸ್ವಿಂಗ್ ಮತ್ತು ಯಾರ್ಕರ್ಗಳ ಮೂಲಕ ಇಂಗ್ಲೆಂಡ್ ತಂಡವನ್ನು ಕಾಡಿದ್ದರು.
ಇದನ್ನೂ ಓದಿ... ರಾಜಕೀಯ ಜೀವನ ಅಂತ್ಯವೋ, ಹೊಸದಾಗಿ ಆರಂಭವೋ ವೇಣುಗೋಪಾಲ ನಿರ್ಧಾರ: ಆನಂದ್ ಸಿಂಗ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.