ಭಾರತದ ಮೊದಲ ಇನಿಂಗ್ಸ್ನ 29ನೇ ಓವರ್ನಲ್ಲಿ ನಡೆದ ಘಟನೆ ಈ ಬೆಳವಣಿಗೆಗೆ ಕಾರಣವಾಗಿದೆ. ಆ ಓವರ್ನಲ್ಲಿ ಆ್ಯಂಡರ್ಸನ್ ಅವರು ಎಸೆದ ಚೆಂಡಿನ ಗತಿ ಅಂದಾಜಿಸುವಲ್ಲಿವಿರಾಟ್ ಕೊಹ್ಲಿ ವಿಫಲರಾದರು. ಚೆಂಡು ಅವರ ಪ್ಯಾಡ್ಗೆ ಬಡಿಯಿತು. ಆ್ಯಂಡರ್ಸನ್, ಎಲ್ಬಿಡಬ್ಲ್ಯು ನಿರ್ಧಾರಕ್ಕಾಗಿ ಅಂಪೈರ್ ಕುಮಾರ್ ಧರ್ಮಸೇನಾ ಅವರಿಗೆ ಮನವಿ ಮಾಡಿದರು. ಕುಮಾರ್, ನಾಟ್ಔಟ್ ಎಂದು ಸುಮ್ಮನಾದರು. ಕೂಡಲೇ ಅಸಮಾಧಾನ ವ್ಯಕ್ತಪಡಿಸಿದ ಜೇಮ್ಸ್ ಧರ್ಮಸೇನಾ ಅವರೊಂದಿಗೆ ವಾದಕ್ಕಿಳಿದರು.