<p>ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಒಂದೇ ಒಂದು ಪಂದ್ಯವನ್ನೂ ಆಡದೆ ಆವೃತ್ತಿಯನ್ನು ಪೂರ್ಣಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಮುಂದಿನ ಸೀಸನ್ ಆಡುತ್ತಾರಾ? ಇಲ್ಲವಾ? ಎಂಬ ಗೊಂದಲ ಅಭಿಮಾನಿಗಳಲ್ಲಿ ಕಾಡುತ್ತಿದೆ. ಈ ಪ್ರಶ್ನೆಗೆ ಸಿಎಸ್ಕೆ ತಂಡದ ನಾಯಕ ಋತುರಾಜ್ ಗಾಯಕವಾಡ್ ಅವರ ಬಳಿಯೂ ನಿಖರವಾದ ಉತ್ತರ ಇರಲಿಲ್ಲ.</p><p>ಎಂ.ಎಸ್. ಧೋನಿ ನಿವೃತ್ತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಾಯಕವಾಡ್, ‘ಧೋನಿ ಅವರು ಮುಂದೆ ಏನು ಮಾಡುತ್ತಾರೆ ಎಂಬುದು ನನಗೂ ತಿಳಿದಿಲ್ಲ. ಆದರೆ ಮೊದಲ ಬಾರಿಗೆ ಸಾಧ್ಯತೆ ಇದೆ ಎನಿಸುತ್ತಿದೆ’ ಎಂದಿದ್ದಾರೆ.</p><p>ಐಪಿಎಲ್ 2026ರ ಆವೃತ್ತಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 89 ರನ್ಗಳಿಂದ ಸೋಲುವ ಮೂಲಕ ಸಿಎಸ್ಕೆ ತಂಡವು ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯದ ಬಳಿಕ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕವಾಡ್, ಧೋನಿ ಅವರ ನಿವೃತ್ತಿಯ ಕುರಿತು ಕೇಳಿದ ಪ್ರಶ್ನೆಗೆ ನಿಖರ ಉತ್ತರ ನೀಡಲಿಲ್ಲ. </p><p>ಧೋನಿ ನಿವೃತ್ತಿಯಾಗುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನೀವು ಮತ್ತು ನಾನು ಇಬ್ಬರೂ ಅವರು ಏನು ಮಾಡುತ್ತಾರೆ ಎಂಬುದನ್ನು ಮುಂದಿನ ವರ್ಷ ತಿಳಿದುಕೊಳ್ಳಬಹುದು’ ಎಂದಿದ್ದಾರೆ.</p>.IPL 2026: ಗಾಯದ ಮೇಲೆ ಬರೆ, CSK ನಾಯಕ ಸೇರಿ ಎಲ್ಲಾ ಆಟಗಾರರಿಗೆ ಭಾರಿ ದಂಡ.ಅವರಿಗೆ ಇನ್ನೂ ಸ್ವಲ್ಪ ಸಮಯ ಬೇಕು: ಗಾಯಕವಾಡ್ ನಾಯಕತ್ವದ ಕುರಿತು CSK ಕೋಚ್ ಹೇಳಿಕೆ.<p>‘ಈ ಆವೃತ್ತಿಯುದ್ಧಕ್ಕೂ ಧೋನಿ ಅವರ ಅನುಪಸ್ಥಿತಿ ನಮ್ಮ ತಂಡವನ್ನು ಕಾಡಿದೆ. ಅವರು ಮುಂದಿನ ವರ್ಷದಿಂದ ತಂಡದಲ್ಲಿ ಆಡಲು ಸಾಧ್ಯವಾಗದೇ ಇದ್ದರೆ, ಅದು ತಂಡಕ್ಕೆ ತುಂಬಾ ದೊಡ್ಡ ನಷ್ಟ. ಅವರು ಎದುರಾಳಿಗಳಲ್ಲಿ ಭಯ ಹುಟ್ಟಿಸುವ ವ್ಯಕ್ತಿ. ಅವರು ಕ್ರೀಸ್ನಲ್ಲಿ ಇರುವವರೆಗೂ ಯಾವುದೇ ಹಂತದಲ್ಲೂ ಪಂದ್ಯದ ಫಲಿತಾಂಶ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಒಂದೇ ಒಂದು ಪಂದ್ಯವನ್ನೂ ಆಡದೆ ಆವೃತ್ತಿಯನ್ನು ಪೂರ್ಣಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಮುಂದಿನ ಸೀಸನ್ ಆಡುತ್ತಾರಾ? ಇಲ್ಲವಾ? ಎಂಬ ಗೊಂದಲ ಅಭಿಮಾನಿಗಳಲ್ಲಿ ಕಾಡುತ್ತಿದೆ. ಈ ಪ್ರಶ್ನೆಗೆ ಸಿಎಸ್ಕೆ ತಂಡದ ನಾಯಕ ಋತುರಾಜ್ ಗಾಯಕವಾಡ್ ಅವರ ಬಳಿಯೂ ನಿಖರವಾದ ಉತ್ತರ ಇರಲಿಲ್ಲ.</p><p>ಎಂ.ಎಸ್. ಧೋನಿ ನಿವೃತ್ತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಾಯಕವಾಡ್, ‘ಧೋನಿ ಅವರು ಮುಂದೆ ಏನು ಮಾಡುತ್ತಾರೆ ಎಂಬುದು ನನಗೂ ತಿಳಿದಿಲ್ಲ. ಆದರೆ ಮೊದಲ ಬಾರಿಗೆ ಸಾಧ್ಯತೆ ಇದೆ ಎನಿಸುತ್ತಿದೆ’ ಎಂದಿದ್ದಾರೆ.</p><p>ಐಪಿಎಲ್ 2026ರ ಆವೃತ್ತಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 89 ರನ್ಗಳಿಂದ ಸೋಲುವ ಮೂಲಕ ಸಿಎಸ್ಕೆ ತಂಡವು ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯದ ಬಳಿಕ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕವಾಡ್, ಧೋನಿ ಅವರ ನಿವೃತ್ತಿಯ ಕುರಿತು ಕೇಳಿದ ಪ್ರಶ್ನೆಗೆ ನಿಖರ ಉತ್ತರ ನೀಡಲಿಲ್ಲ. </p><p>ಧೋನಿ ನಿವೃತ್ತಿಯಾಗುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನೀವು ಮತ್ತು ನಾನು ಇಬ್ಬರೂ ಅವರು ಏನು ಮಾಡುತ್ತಾರೆ ಎಂಬುದನ್ನು ಮುಂದಿನ ವರ್ಷ ತಿಳಿದುಕೊಳ್ಳಬಹುದು’ ಎಂದಿದ್ದಾರೆ.</p>.IPL 2026: ಗಾಯದ ಮೇಲೆ ಬರೆ, CSK ನಾಯಕ ಸೇರಿ ಎಲ್ಲಾ ಆಟಗಾರರಿಗೆ ಭಾರಿ ದಂಡ.ಅವರಿಗೆ ಇನ್ನೂ ಸ್ವಲ್ಪ ಸಮಯ ಬೇಕು: ಗಾಯಕವಾಡ್ ನಾಯಕತ್ವದ ಕುರಿತು CSK ಕೋಚ್ ಹೇಳಿಕೆ.<p>‘ಈ ಆವೃತ್ತಿಯುದ್ಧಕ್ಕೂ ಧೋನಿ ಅವರ ಅನುಪಸ್ಥಿತಿ ನಮ್ಮ ತಂಡವನ್ನು ಕಾಡಿದೆ. ಅವರು ಮುಂದಿನ ವರ್ಷದಿಂದ ತಂಡದಲ್ಲಿ ಆಡಲು ಸಾಧ್ಯವಾಗದೇ ಇದ್ದರೆ, ಅದು ತಂಡಕ್ಕೆ ತುಂಬಾ ದೊಡ್ಡ ನಷ್ಟ. ಅವರು ಎದುರಾಳಿಗಳಲ್ಲಿ ಭಯ ಹುಟ್ಟಿಸುವ ವ್ಯಕ್ತಿ. ಅವರು ಕ್ರೀಸ್ನಲ್ಲಿ ಇರುವವರೆಗೂ ಯಾವುದೇ ಹಂತದಲ್ಲೂ ಪಂದ್ಯದ ಫಲಿತಾಂಶ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>