ಶುಕ್ರವಾರದ ದಿನದಾಟದ ವೇಳೆ ಶ್ರೀಲಂಕಾದ ಆಟಗಾರರು ಚೆಂಡು ವಿರೂಪಗೊಳಿಸಿರಬಹುದು ಎಂದು ಅಂಗಳದ ಅಂಪೈರ್ಗಳಾದ ಇಯಾನ್ ಗೌಲ್ಡ್ ಮತ್ತು ಅಲೀಮ್ ದಾರ್ ಸಂದೇಹ ವ್ಯಕ್ತಪಡಿಸಿದ್ದರು. ಈ ಸಂಬಂಧ ಅವರು ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್ಗೆ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ್ದ ಶ್ರೀನಾಥ್, ಲಂಕಾ ತಂಡದಿಂದ ತಪ್ಪಾಗಿರುವುದು ಖಚಿತವಾದ ನಂತರ ವೆಸ್ಟ್ ಇಂಡೀಸ್ ತಂಡಕ್ಕೆ ಹೆಚ್ಚುವರಿಯಾಗಿ 5ರನ್ ನೀಡಿದ್ದರು.