‘ಸೌರವ್ ತಂಡದ ನಾಯಕತ್ವ ವಹಿಸಿಕೊಂಡಾಗ ಭಾರತ ಕ್ರಿಕೆಟ್ ಕ್ಷೇತ್ರ ಮಗ್ಗಲು ಬದಲಿಸಿತು. ಭಾರತದ ಕ್ರಿಕೆಟ್ ಅನ್ನು ಉನ್ನತಮಟ್ಟಕ್ಕೆ ಬೆಳೆಸುವ ಯುವಪಡೆಯನ್ನು ಸಿದ್ಧಗೊಳಿಸುವತ್ತ ನಮ್ಮ ಚಿತ್ತ ಇತ್ತು. ಆ ಹಾದಿಯಲ್ಲಿ ದಾದಾ (ಸೌರವ್) ಪ್ರಯತ್ನ ದೊಡ್ಡದು. ಈ ಹಂತದಲ್ಲಿ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರಭಜನ್ ಸಿಂಗ್, ಆಶಿಶ್ ನೆಹ್ರಾ ಅವರಂತಹ ಪ್ರತಿಭಾವಂತರು ಲಭಿಸಿದರು. ಎಷ್ಟೇ ಪ್ರತಿಭೆಯಿದ್ದರೂ ಪ್ರೋತ್ಸಾಹ ನೀಡುವ ದಿಟ್ಟ ನಾಯಕತ್ವ ಬೇಕಾಗುತ್ತದೆ. ಯುವ ಆಟಗಾರರ ಬೆನ್ನಿಗೆ ಗಂಗೂಲಿ ನಿಂತರು’ ಎಂದರು.