ಮುಂಬೈ ಪೊಲೀಸ್ನ ವಿಶೇಷ ತಂಡವು ಬುಧವಾರದಂದು ಆರೋಪಿ ರಾಮನಾಗೇಶ್ ಶ್ರೀನಿವಾಸ್ ಅಕುಬತಿನಿ ಎಂಬಾತನನ್ನು ಬಂಧಿಸಿದ್ದಾರೆ.
23 ವರ್ಷದ ರಾಮನಾಗೇಶ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪಾಕಿಸ್ತಾನ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿತ್ತು.
ಭಾರತದ ಸೋಲಿನ ಬೆನ್ನಲ್ಲೇ ಮೊಹಮ್ಮದ್ ಶಮಿ ಅವರ ಧರ್ಮವನ್ನು ಉಲ್ಲೇಖಿಸಿ ನಿಂದಿಸಲಾಗಿತ್ತು. ಶಮಿ ಬೆಂಬಲಕ್ಕೆ ನಿಂತಿದ್ದ ಕೊಹ್ಲಿ, ಇದು ಬೆನ್ನುಮೂಳೆ ಇಲ್ಲದವರು ಮಾಡುವ ಕೆಲಸ ಎಂದು ತಿರುಗೇಟು ನೀಡಿದ್ದರು. ಇದರಿಂದಾಗಿ ಕೊಹ್ಲಿ ವಿರುದ್ಧವೂ ನಿಂದನೆ ಎದುರಾಗಿತ್ತು.