ಭಾರತದಲ್ಲಿ ಅಪಾರ ಕ್ರಿಕೆಟ್ ಪ್ರತಿಭೆಗಳಿವೆ. ಸುನಿಲ್ ಗವಾಸ್ಕರ್ ಅವರು ಆಡುತ್ತಿದ್ದ ಕಾಲದಲ್ಲಿ ಅವರ ನಂತರ ಯಾರು ಎಂದು ಜನ ಯೋಚಿಸುತ್ತಿದ್ದರು. ಅವರ ನಂತರ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಬಂದರು. ತೆಂಡೂಲ್ಕರ್, ದ್ರಾವಿಡ್ ನಿವೃತ್ತರಾದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್ ತಂಡವನ್ನು ಸೇರಿಕೊಂಡರು. ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳಿವೆ. ಪ್ರತಿ ತಲೆಮಾರಿನಲ್ಲೂ ವಿಶ್ವ ತಂಡಗಳ ವಿರುದ್ಧ ಗೆಲುವು ತಂದುಕೊಡಬಲ್ಲ ಆಟಗಾರರನ್ನು ಭಾರತ ನೀಡಬಲ್ಲದು ಎಂದು ನಾನು ಭಾವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.