ಮುಂಬೈನಲ್ಲಿ ಶ್ರೀಲಂಕಾ ಎದುರು ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮೋಸದಾಟ ನಡೆದಿದ್ದು ಶ್ರೀಲಂಕಾ ಆಟಗಾರರು ಭಾರತಕ್ಕೆ ಪಂದ್ಯವನ್ನು ‘ಮಾರಿದ್ದರು’ ಎಂದು ಅಂದಿನ ಲಂಕಾ ಕ್ರೀಡಾ ಸಚಿವ ಮಹಿಂದಾನಂದ ಅಲುತ್ಗಮಗೆ ದೂರಿದ್ದರು. ಈ ಸಂಬಂಧ ಲಂಕಾ ಸರ್ಕಾರ ತನಿಖೆಗೆ ಆದೇಶ ನೀಡಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ತನಿಖೆಯನ್ನು ಕೈಬಿಡಲು ಶುಕ್ರವಾರ ನಿರ್ಧರಿಸಿದೆ. ಈ ನಿರ್ಧಾರ ಪ್ರಕಟಿಸಿದ ಕೆಲವೇ ತಾಸುಗಳಲ್ಲಿ ಐಸಿಸಿ ತನ್ನ ನಿರ್ಧಾರ ತಿಳಿಸಿದೆ.