‘ಒಂದೇ ಬಾರಿ ನಿರ್ಣಯ ಕೈಗೊಳ್ಳುವ ಅವಕಾಶ ಇರುತ್ತದೆ. ಪದೇ ಪದೇ ಬದಲಾಯಿಸಲು ಬರುವುದಿಲ್ಲ. ಆದ್ದರಿಂದ ತೀರ್ಮಾನ ಮಾಡುವ ಮುನ್ನ ಬಹಳಷ್ಟು ಯೋಚನೆ ಮಾಡಿ ಮುಂದುವರಿಯಬೇಕು. ಮುಂದಿನ ಸಭೆಯವರೆಗೂ ನಮ್ಮ ಎಲ್ಲ ಸದಸ್ಯರು, ಪ್ರಸಾರಕ ಸಂಸ್ಥೆಗಳು, ಪಾಲುದಾರರು, ಸರ್ಕಾರಗಳು ಮತ್ತು ಆಟಗಾರರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸುತ್ತೇವೆ. ಆಮೇಲೆ ಎಲ್ಲರಿಗೂ ಸಮ್ಮತವಾಗುವಂತಹ ಒಳ್ಳೆಯ ಮತ್ತು ಗಟ್ಟಿಯಾದ ತೀರ್ಮಾನಕ್ಕೆ ಬರುತ್ತೇವೆ’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸವಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.