ಹುಬ್ಬಳ್ಳಿ:ತುಂತುರು ಮಳೆಯ ನಡುವೆಯೂ ಆಟ ಆಡುತ್ತಿರುವ ನ್ಯೂಜಿಲೆಂಡ್ ‘ಎ‘ ತಂಡವು ಚಹಾವಿರಾಮದ ವೇಳೆಗೆ 12.3 ಓವರ್ಗಳ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ.
ಆಗಾಗ ಕಾಡುತ್ತಿರುವ ತುಂತುರು ಮಳೆಯ ನಡುವೆಯೂ ಭಾರತ ತಂಡದ ವೇಗಿಗಳು ಉತ್ತಮ ಬೌಲಿಂಗ್ ನಡೆಸುತ್ತಿದ್ದಾರೆ.
ಮೂರು ಪಂದ್ಯಗಳ ಸರಣಿಯ ಪೈಕಿ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಿಂಚಿದ್ದ ಮುಕೇಶ್ ಕುಮಾರ್ಮೊದಲ ವಿಕೆಟ್ ಪಡೆದು ಸಂಭ್ರಮಿಸಿದರು.
9.5ನೇ ಓವರ್ನಲ್ಲಿ ಮುಕೇಶ್ ಕುಮಾರ್ ಬೌಲಿಂಗ್ನಲ್ಲಿ ಕಿವೀಸ್ನ ಆರಂಭಿಕ ಆಟಗಾರ ಜೋಕಾರ್ಟ್ (17 ರನ್, 47 ಎ, 3 ಬೌಂಡರಿ) ವಿಕೆಟ್ ಕೀಪರ್ ಕೆ.ಎಸ್.ಭರತ್ ಅವರಿಗೆ ಕ್ಯಾಚಿತ್ತರು.
ಬಳಿಕ ಮೈದಾನಕ್ಕೆ ಬಂದ ಡೇನ್ ಕ್ಲೇವರ್(1 ರನ್, 10 ಎಸೆತ) ಅವರನ್ನು ವೇಗಿ ಶಾರ್ದೂಲ್ ಠಾಕೂರ್ ಅವರು ಪೆವಿಲಿಯನ್ಗೆ ಕಳಿಸಿದರು.