ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಪದಾರ್ಪಣೆ ಪಂದ್ಯದಲ್ಲೇ ದಾಖಲೆ; ತಂದೆ ನೆನೆದು ಕೃಣಾಲ್ ಕಣ್ಣೀರು

Last Updated 23 ಮಾರ್ಚ್ 2021, 15:14 IST
ಅಕ್ಷರ ಗಾತ್ರ

ಪುಣೆ: ಏಕದಿನ ಕ್ರಿಕೆಟ್‌ನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ವೇಗವಾಗಿ ಅರ್ಧಶತಕ ಸಿಡಿಸಿ ದಾಖಲೆ ಬರೆದ ಕೃಣಾಲ್‌ ಪಾಂಡ್ಯ, ಮೊದಲ ಇನಿಂಗ್ಸ್‌ ಮುಗಿದ ಬಳಿಕ ತಮ್ಮ ತಂದೆಯನ್ನು ನೆನೆದು ಕಣ್ಣೀರು ಹಾಕಿದರು.

ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನಿಗದಿತ 50ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು317ರನ್‌ ಕಲೆಹಾಕಿದೆ. ಈ ಪಂದ್ಯದಲ್ಲಿ ಶಿಖರ್‌ ಧವನ್‌ (98), ವಿರಾಟ್‌ ಕೊಹ್ಲಿ (56), ಕೆ.ಎಲ್‌. ರಾಹುಲ್‌ (ಅಜೇಯ 62) ಮತ್ತು ಕೃಣಾಲ್‌ ಪಾಂಡ್ಯ (ಅಜೇಯ 58) ಅರ್ಧಶತಕ ಸಿಡಿಸಿದರು.

ಈ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ಸದ್ಯ30 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 199 ರನ್‌ ಗಳಿಸಿದೆ. ಬಿರುಸಿನ ಬ್ಯಾಟಿಂಗ್‌ ನಡೆಸಿದ ಜಾನಿ ಬೈರ್ಸ್ಟ್ರೋವ್‌ ಮತ್ತು ಜೇಸನ್‌ ರಾಯ್‌ ಜೋಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 135 ರನ್‌ ಕೂಡಿಸಿದ್ದರು. ಈ ವೇಳೆ ಜೇಸನ್‌ ರಾಯಲ್‌ (46), ಬೆನ್‌ ಸ್ಟೋಕ್ಸ್‌ (1) ವಿಕೆಟ್‌ಗಳನ್ನು ಕಬಳಿಸಿದ ಕನ್ನಡಿಗ ಪ್ರಸಿದ್ಧ ಕೃಷ್ಣ, ಇಂಗ್ಲೆಂಡ್ನಾಗಾಲೋಟಕ್ಕೆ ಬ್ರೇಕ್‌ ಹಾಕಿದರು.

94ರನ್‌ ಗಳಿಸಿದ್ದ ಬೈರ್ಸ್ಟ್ರೋವ್‌.ನಾಯಕ ಮಾರ್ಗನ್‌ (22) ಮತ್ತು ಜಾಸ್‌ ಬಟ್ಲರ್‌ಗೆ‌ (2) ಶಾರ್ದೂಲ್‌ ಠಾಕೂರ್‌ ಪೆವಿಲಿಯನ್‌ ದಾರಿ ತೋರಿದರು.

ಸದ್ಯ ಸ್ಯಾಮ್‌ ಬಿಲ್ಲಿಂಗ್ಸ್‌ (15) ಮತ್ತು ಮೋಯಿನ್‌ ಅಲಿ(8)‌ ಕ್ರೀಸ್‌ನಲ್ಲಿದ್ದು, ಗೆಲ್ಲಲು ಇನ್ನು120 ಎಸೆತಗಳಲ್ಲಿ119ರನ್‌ ಗಳಿಸಬೇಕಿದೆ.

ವೇಗದ ಅರ್ಧಶತಕ
ಭಾರತ ತಂಡದ ಮೊತ್ತ5 ವಿಕೆಟ್‌ ನಷ್ಟಕ್ಕೆ205 ರನ್ ಆಗಿದ್ದಾಗ ರಾಹುಲ್‌ಗೆ ಜೊತೆಯಾದ ಕೃಣಾಲ್‌ ಕೇವಲ26 ಎಸೆತಗಳಲ್ಲಿಯೇ ಅರ್ಧಶತಕ ಸಿಡಿಸಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಪದಾರ್ಪಣೆ ಪಂದ್ಯದಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಒಟ್ಟಾರೆ31 ಎಸೆತಗಳನ್ನು ಎದುರಿಸಿದ ಅವರು7 ಬೌಂಡರಿ ಮತ್ತು2 ಸಿಕ್ಸರ್‌ ಸಹಿತ ಬರೋಬ್ಬರಿ56 ರನ್‌ ಸಿಡಿಸಿ ಅಜೇಯವಾಗಿ ಉಳಿದರು. ಕೃಣಾಲ್ ಜೊತೆ ಸೇರಿ ಇನ್ನೊಂದು ತುದಿಯಲ್ಲಿ ಗುಡುಗಿದ ರಾಹುಲ್‌,43 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್‌ ಮತ್ತು ಬೌಂಡರಿ ಸಹಿತ62ರನ್‌ ಚಚ್ಚಿದರು. ಹೀಗಾಗಿ ಭಾರತ ಬೃಹತ್‌ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ತಂದೆ ನೆನೆದು ಕಣ್ಣೀರು ಹಾಕಿದ ಕೃಣಾಲ್
ಮೊದಲ ಇನಿಂಗ್ಸ್‌ ಮುಕ್ತಾಯದ ಬಳಿಕ ಮುರುಳಿ ಕಾರ್ತಿಕ್‌ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಲು ಬಂದ ಕೃಣಾಲ್‌, ʼಇದು ನನ್ನ ತಂದೆಗಾಗಿ. ಇದು ತುಂಬಾ ಭಾವುಕವಾದದುʼ ಎಂದು ಹೇಳಿದರು. ಅಷ್ಟರಲ್ಲಿ ಗದ್ಗದಿತರಾದ ಅವರು ಮರು ಮಾತನಾಡಲು ಸಾಧ್ಯವಾಗದೆ ಬಿಕ್ಕಳಿಸಿದರು.

ಮುರುಳಿ ಅವರು, ಸ್ವಲ್ಪ ಸಾವರಿಕೊಂಡು ಬಳಿಕ ಮಾತನಾಡುವಂತೆ ತಿಳಿಸಿದರಾದರೂ ಕೃಣಾಲ್‌ಗೆ ಮಾತನಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಸೆರೆಯಾದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಅಗಿವೆ. ಕೃಣಾಲ್‌ ಬ್ಯಾಟಿಂಗ್‌ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿರುವ ಅಭಿಮಾನಿಗಳು,ಧೈರ್ಯ ತುಂಬಿದ್ದಾರೆ.‌

ಸಹೋದರ ಹಾರ್ದಿಕ್‌ ಪಾಂಡ್ಯ ಅವರೂ ಭಾರತ ತಂಡದ ಪರ ಈ ಪಂದ್ಯದಲ್ಲಿ ಆಡುತ್ತಿದ್ದು,ತಂದೆ ಹಿಮಾಂಶು ಪಾಂಡೆ ಅವರು ಇದೇ ವರ್ಷ ಜನವರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT