ಭಾರತಕ್ಕೆ ತಲೆನೋವಾಗಿರುವುದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗ. ನಾಯಕ ಪ್ರಿಯಂ ಗರ್ಗ್, ದಿವ್ಯಾಂಶ್ ಸಕ್ಸೇನಾ, ತಿಲಕ್ ವರ್ಮಾ, ವಿಕೆಟ್ ಕೀಪರ್ ಧ್ರುವ ಜುರೆಲ್ ಮತ್ತು ಸಿದ್ದೇಶ್ ವೀರ್ ಅವರು ಆಸ್ಟ್ರೇಲಿಯಾ ಎದುರಿನ ಕ್ವಾರ್ಟರ್ ಫೈನಲ್ನಲ್ಲಿ ಬೇಗನೆ ವಿಕೆಟ್ ಒಪ್ಪಿಸಿದ್ದರು. ಇವರು ಲಯಕಂಡುಕೊಳ್ಳುವುದು ಅಗತ್ಯ.