ಬೆಳಗಾವಿ: ಮಳೆ ಕಾರಣದಿಂದಾಗಿ ಸುಮಾರು ಒಂದು ಗಂಟೆ ವಿಳಂಬವಾಗಿ ಭಾರತ 'ಎ' ಹಾಗೂ ಶ್ರೀಲಂಕಾ 'ಎ' ತಂಡ ನಡುವಣ ಏಕ ದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆರಂಭವಾಯಿತು.
ಸಮಯದ ಅಭಾವದಿಂದಾಗಿ ಪಂದ್ಯವನ್ನು 42 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ.
ಬಿರುಸಿನ ಬ್ಯಾಟಿಂಗ್:ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ 'ಎ' ತಂಡವು 11 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ. ಶುಭಮನ್ ಗಿಲ್ 5 ರನ್ ಗಳಿಸಿ, ಔಟಾದರು. ಅನಮೋಲ್ ಪ್ರೀತ್ ಸಿಂಗ್ ಹಾಗೂ ರುತುರಾಜ ಗಾಯಕವಾಡ್ ಕ್ರೀಸ್ ನಲ್ಲಿದ್ದಾರೆ.