<p><strong>ನವದೆಹಲಿ:</strong> ಭಾರತದ ಟಿ-20 ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರು ಮುಂದಿನ ದಿನಗಳಲ್ಲಿ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಈ ನಡುವೆ ಟಿ20 ನಾಯಕತ್ವ ವಹಿಸಿಕೊಳ್ಳಲು ಅನೇಕ ಆಟಗಾರರು ಎದುರು ನೋಡುತ್ತಿದ್ದಾರೆ. </p><p>ಭಾರತ ತಂಡದಿಂದ ಸೂರ್ಯಕುಮಾರ್ ಅವರನ್ನು ಕೈಬಿಡಬೇಕು ಎಂದು ಐವರು ಆಯ್ಕೆಗಾರರು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ ಕ್ರಿಕೆಟ್ನ ಭವಿಷ್ಯದ ದೃಷ್ಟಿಯಿಂದ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದ್ದಾರೆ.</p><p>ಸೂರ್ಯಕುಮಾರ್ ಈ ವರ್ಷದ ಐಪಿಎಲ್ನಲ್ಲಿ 12 ಇನಿಂಗ್ಸ್ಗಳಿಂದ 148ರ ಸ್ಟೈಕ್ರೇಟ್ನಲ್ಲಿ ಕೇವಲ 210 ರನ್ ಗಳಷ್ಟೇ ಗಳಿಸಿದ್ದಾರೆ.</p><p><strong>ಶ್ರೇಯಸ್ ಅಯ್ಯರ್:</strong></p><p>ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಅನೇಕ ಆಟಗಾರರ ಹೆಸರುಗಳು ಮುನ್ನೆಲೆಗೆ ಬಂದಿವೆ. ವಿಶೇಷವಾಗಿ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಶ್ರೇಯಸ್ ಅಯ್ಯರ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಅವರು ತೆಗೆದುಕೊಳ್ಳುವ ತೀಕ್ಷ್ಣ ನಿರ್ಧಾರಗಳು, ತಂಡದ ಆಟಗಾರರ ಜೊತೆಗಿನ ಬಾಂಧವ್ಯ ಅವರನ್ನು ನಾಯಕತ್ವ ರೇಸ್ನಲ್ಲಿ ಅಗ್ರಸ್ಥಾನದಲ್ಲಿ ಇರಿಸಿದೆ. ಅದಾಗ್ಯೂ, ಅವರು ಕೋಚ್ ಗೌತಮ್ ಗಂಭೀರ್ ಅವರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುತ್ತಾರಾ? ಎಂಬುದು ಪ್ರಶ್ನೆಯಾಗಿದೆ.</p><p>ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 2024ರಲ್ಲಿ ಐಪಿಎಲ್ ಚಾಂಪಿಯನ್ ಮಾಡಿದ ಬಳಿಕ ಶ್ರೇಯಸ್ ಅವರನ್ನು ಹಿಂದಿಕ್ಕಿ ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಗಂಭೀರ್ ಅವರೇ ತೆಗೆದುಕೊಂಡಿದ್ದಕ್ಕೆ, ಅಯ್ಯರ್ ಬೇಸರ ಹೊರಹಾಕಿದ್ದರು. ಆ ಮುನಿಸು ಇಬ್ಬರ ನಡುವೆ ಇಂದಿಗೂ ಇರುವಂತೆ ಕಂಡು ಬರುತ್ತಿದೆ. </p><p><strong>ಶುಭಮನ್ ಗಿಲ್: </strong></p><p>ಈ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳಲು ಕೇಳಿ ಬರುತ್ತಿರುವ ಮತ್ತೊಂದು ಪ್ರಮುಖ ಹೆಸರು ಅಂದರೆ, ಅದು ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್. ಅವರು, ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈ ಬಾರಿ ಕೂಡ ಅವರ ತಂಡ ಪ್ಲೇ ಆಫ್ ತಲುಪಿದೆ. ಕ್ವಾಲಿಫೈಯರ್ 1ರಲ್ಲಿ ಆರ್ಸಿಬಿ ತಂಡವನ್ನು ಎದುರಿಸಲಿದೆ.</p><p>ಟಿ20 ವಿಶ್ವಕಪ್ಗೂ ಮುನ್ನ ಕಳಪೆ ಫಾರ್ಮ್ನಿಂದಾಗಿ ಶುಭಮನ್ ಗಿಲ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಸದ್ಯ, ಕಳಪೆ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಜಾಗದಲ್ಲಿ, ಗಿಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಈ ಬಾರಿಯ ಐಪಿಎಲ್ನಲ್ಲೂ 600ಕ್ಕೂ ಅಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಓಟದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.</p><p>ಶುಭಮನ್ ಗಿಲ್ ಹೊರತುಪಡಿಸಿ, ಕಳೆದ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್, ಸನ್ರೈಸರ್ಸ್ ಹೈದರಾಬಾದ್ ತಂಡದ ಯುವ ಬ್ಯಾಟರ್ ಇಶಾನ್ ಕಿಶನ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಅವರು ಹೆಸರು ಕೂಡ ಸೂರ್ಯಕುಮಾರ್ ಜಾಗದಲ್ಲಿ ಕೇಳಿಬರುತ್ತಿವೆ.</p><p>ಭಾರತ ಟಿ20 ತಂಡದ ನಾಯಕತ್ವ ಹಿಡಿಯಲು ಅನೇಕ ಆಟಗಾರರು ಸಿದ್ಧರಿದ್ದರೂ, ಸೂರ್ಯಕುಮಾರ್ ಯಾದವ್ ನಾಯಕರಾಗಿ ಮುಂದುವರೆಯುತ್ತಾರಾ? ಇಲ್ಲವಾ? ಎಂಬುದನ್ನು ಕೋಚ್ ಗೌತಮ್ ಗಂಭೀರ್ ಅವರೇ ನಿರ್ಧರಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತದ ಟಿ-20 ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರು ಮುಂದಿನ ದಿನಗಳಲ್ಲಿ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಈ ನಡುವೆ ಟಿ20 ನಾಯಕತ್ವ ವಹಿಸಿಕೊಳ್ಳಲು ಅನೇಕ ಆಟಗಾರರು ಎದುರು ನೋಡುತ್ತಿದ್ದಾರೆ. </p><p>ಭಾರತ ತಂಡದಿಂದ ಸೂರ್ಯಕುಮಾರ್ ಅವರನ್ನು ಕೈಬಿಡಬೇಕು ಎಂದು ಐವರು ಆಯ್ಕೆಗಾರರು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ ಕ್ರಿಕೆಟ್ನ ಭವಿಷ್ಯದ ದೃಷ್ಟಿಯಿಂದ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದ್ದಾರೆ.</p><p>ಸೂರ್ಯಕುಮಾರ್ ಈ ವರ್ಷದ ಐಪಿಎಲ್ನಲ್ಲಿ 12 ಇನಿಂಗ್ಸ್ಗಳಿಂದ 148ರ ಸ್ಟೈಕ್ರೇಟ್ನಲ್ಲಿ ಕೇವಲ 210 ರನ್ ಗಳಷ್ಟೇ ಗಳಿಸಿದ್ದಾರೆ.</p><p><strong>ಶ್ರೇಯಸ್ ಅಯ್ಯರ್:</strong></p><p>ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಅನೇಕ ಆಟಗಾರರ ಹೆಸರುಗಳು ಮುನ್ನೆಲೆಗೆ ಬಂದಿವೆ. ವಿಶೇಷವಾಗಿ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳಲು ಶ್ರೇಯಸ್ ಅಯ್ಯರ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಅವರು ತೆಗೆದುಕೊಳ್ಳುವ ತೀಕ್ಷ್ಣ ನಿರ್ಧಾರಗಳು, ತಂಡದ ಆಟಗಾರರ ಜೊತೆಗಿನ ಬಾಂಧವ್ಯ ಅವರನ್ನು ನಾಯಕತ್ವ ರೇಸ್ನಲ್ಲಿ ಅಗ್ರಸ್ಥಾನದಲ್ಲಿ ಇರಿಸಿದೆ. ಅದಾಗ್ಯೂ, ಅವರು ಕೋಚ್ ಗೌತಮ್ ಗಂಭೀರ್ ಅವರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುತ್ತಾರಾ? ಎಂಬುದು ಪ್ರಶ್ನೆಯಾಗಿದೆ.</p><p>ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 2024ರಲ್ಲಿ ಐಪಿಎಲ್ ಚಾಂಪಿಯನ್ ಮಾಡಿದ ಬಳಿಕ ಶ್ರೇಯಸ್ ಅವರನ್ನು ಹಿಂದಿಕ್ಕಿ ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಗಂಭೀರ್ ಅವರೇ ತೆಗೆದುಕೊಂಡಿದ್ದಕ್ಕೆ, ಅಯ್ಯರ್ ಬೇಸರ ಹೊರಹಾಕಿದ್ದರು. ಆ ಮುನಿಸು ಇಬ್ಬರ ನಡುವೆ ಇಂದಿಗೂ ಇರುವಂತೆ ಕಂಡು ಬರುತ್ತಿದೆ. </p><p><strong>ಶುಭಮನ್ ಗಿಲ್: </strong></p><p>ಈ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳಲು ಕೇಳಿ ಬರುತ್ತಿರುವ ಮತ್ತೊಂದು ಪ್ರಮುಖ ಹೆಸರು ಅಂದರೆ, ಅದು ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್. ಅವರು, ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈ ಬಾರಿ ಕೂಡ ಅವರ ತಂಡ ಪ್ಲೇ ಆಫ್ ತಲುಪಿದೆ. ಕ್ವಾಲಿಫೈಯರ್ 1ರಲ್ಲಿ ಆರ್ಸಿಬಿ ತಂಡವನ್ನು ಎದುರಿಸಲಿದೆ.</p><p>ಟಿ20 ವಿಶ್ವಕಪ್ಗೂ ಮುನ್ನ ಕಳಪೆ ಫಾರ್ಮ್ನಿಂದಾಗಿ ಶುಭಮನ್ ಗಿಲ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಸದ್ಯ, ಕಳಪೆ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಜಾಗದಲ್ಲಿ, ಗಿಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಈ ಬಾರಿಯ ಐಪಿಎಲ್ನಲ್ಲೂ 600ಕ್ಕೂ ಅಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಓಟದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.</p><p>ಶುಭಮನ್ ಗಿಲ್ ಹೊರತುಪಡಿಸಿ, ಕಳೆದ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್, ಸನ್ರೈಸರ್ಸ್ ಹೈದರಾಬಾದ್ ತಂಡದ ಯುವ ಬ್ಯಾಟರ್ ಇಶಾನ್ ಕಿಶನ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಅವರು ಹೆಸರು ಕೂಡ ಸೂರ್ಯಕುಮಾರ್ ಜಾಗದಲ್ಲಿ ಕೇಳಿಬರುತ್ತಿವೆ.</p><p>ಭಾರತ ಟಿ20 ತಂಡದ ನಾಯಕತ್ವ ಹಿಡಿಯಲು ಅನೇಕ ಆಟಗಾರರು ಸಿದ್ಧರಿದ್ದರೂ, ಸೂರ್ಯಕುಮಾರ್ ಯಾದವ್ ನಾಯಕರಾಗಿ ಮುಂದುವರೆಯುತ್ತಾರಾ? ಇಲ್ಲವಾ? ಎಂಬುದನ್ನು ಕೋಚ್ ಗೌತಮ್ ಗಂಭೀರ್ ಅವರೇ ನಿರ್ಧರಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>