ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ‘ಎ’ – ಶ್ರೀಲಂಕಾ ‘ಎ’ ತಡಗಳ ನಡುವಿನ ಪಂದ್ಯ ರದ್ದು

Last Updated 14 ಜೂನ್ 2019, 13:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಶುಕ್ರವಾರ ನಡೆದ 4ನೇ ಏಕ ದಿನ ಪಂದ್ಯವು ಮಳೆಯಿಂದಾಗಿ ರದ್ದಾಯಿತು.

ಬೆಳಿಗ್ಗೆಯೇ ಮಳೆಯಾದ ಕಾರಣ ಪಂದ್ಯ ಎರಡು ಗಂಟೆ(11.15) ವಿಳಂಬವಾಗಿ ಆರಂಭಗೊಂಡಿತು. ಟಾಸ್‌ ಗೆದ್ದ ಭಾರತ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. 36 ಓವರ್‌ಗೆ ಪಂದ್ಯವನ್ನು ಕಡಿತಗೊಳಿಸಲಾಗಿತ್ತು.

ಶ್ರೀಲಂಕಾವು 3.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಠಕ್ಕೆ 22 ರನ್‌ ಕಲೆ ಹಾಕಿತು. ನಿರೋಶನ್‌ ಡಿಕ್ವೆಲ್ಲಾ 11(7), ಸುಧೀರ ಸಮರವಿಕ್ರಮ 4 (4) ಮತ್ತು ಭಾನುಕ ರಾಜಪಕ್ಷೆ 5 (10) ರನ್‌ ಗಳಿಸಿದರು. ಎರಡನೇ ಓವರ್‌ನಲ್ಲಿ ತುಷಾರ್‌ ದೇಶಪಾಂಡೆ ಅವರ ಬಾಲ್‌ಗೆ ಹೊಡೆಯಲು ಹೋದ ಸುಧೀರ ಸಮರವಿಕ್ರಮ ಕ್ಯಾಚಿತ್ತು ಔಟಾದರು.

ಐದು ಏಕ ದಿನ ಸರಣಿಯಲ್ಲಿ ಭಾರತ ‘ಎ’ ತಂಡವು 2–1 ರಿಂದ ಮುನ್ನೆಡೆ ಕಾಯ್ದುಕೊಂಡಿದ್ದು, ಶನಿವಾರ(ಜೂನ್‌ 15) ನಡೆಯುವ ಫೈನಲ್‌ ಪಂದ್ಯವು ಕುತೂಹಲ ಕೆರಳಿಸಿದೆ.

ಶನಿವಾರ ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT