‘ಎಲ್ಲ ದಿಗ್ಗಜ ಆಟಗಾರರೂ ಒಂದಲ್ಲ ಒಂದು ದಿನ ತಮ್ಮ ಕ್ರೀಡೆಗೆ ವಿದಾಯ ಹೇಳಲೇಬೆಕು. ಫುಟ್ಬಾಲ್ನಲ್ಲಿ ಮರಡೋನಾ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್, ಲಾರಾ, ಬ್ರಾಡ್ಮನ್ ಮತ್ತಿತರರು ನಿವೃತ್ತರಾದರು. ಅದೇ ರೀತಿ ಪ್ರತಿಯೊಬ್ಬರೂ ವಿದಾಯ ಹೇಳಲೇಬೇಕಾಗುತ್ತದೆ. ಅವರ ಸ್ಥಾನ ತುಂಬಲು ಯುವಕರು ಸಿದ್ಧರಾಗಿರಬೇಕು‘ ಎಂದು ಗಂಗೂಲಿ ಅವರು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.