ಆ ವರ್ಷ ಧೋನಿ ಬಳಗವು ಪ್ಲೇ ಆಫ್ ಕೂಡ ಪ್ರವೇಶಿಸದೇ ನಿರ್ಗಮಿಸಿತ್ತು. ಈಗ ಒಟ್ಟು 18 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಕ್ವಾಲಿಫೈಯರ್ ಕಣಕ್ಕಿಳಿ ಯುತ್ತಿದೆ. ತಂಡದ ಯುವ ಮತ್ತು ಅನುಭವಿಗಳು ಉತ್ತಮ ಫಾರ್ಮ್ನಲ್ಲಿ ರುವುದು ನಾಯಕನ ಆತ್ಮವಿಶ್ವಾಸ ಹೆಚ್ಚಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಋತುರಾಜ್ ಗಾಯಕವಾಡ್, ಫಫ್ ಡುಪ್ಲೆಸಿ, ಅಂಬಟಿ ರಾಯುಡು ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆದರೆ, ಸುರೇಶ್ ರೈನಾ ಮತ್ತು ಧೋನಿ ಬ್ಯಾಟಿಂಗ್ ಲಯ ಕಂಡುಕೊಂಡರೆ ತಂಡ ಮತ್ತಷ್ಟು ಬಲಿಷ್ಠವಾಗುತ್ತದೆ. ಮೋಯಿನ್ ಅಲಿ, ರವೀಂದ್ರ ಜಡೇಜ ಮತ್ತು ಶಾರ್ದೂಲ್ ಠಾಕೂರ್ ಆಲ್ರೌಂಡ್ ಆಟವೂ ತಂಡದ ಯಶಸ್ಸಿನಲ್ಲಿ ಪ್ರಮುಖ ವಾಗಿದೆ. ಆದರೆ ಲೀಗ್ ಹಂತದ ಕೊನೆಯ ಮೂರು ಪಂದ್ಯಗಳಲ್ಲಿ ಧೋನಿ ಬಳಗವು ಸೊತಿತ್ತು.