ತನ್ನ ತವರು ಮುಂಬೈನ ಅಂಗಳಗಳಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಎದುರು ರೋಹಿತ್ ಶರ್ಮಾ ಬಳಗವು ಪರಾಭವಗೊಂಡಿತ್ತು. ಇದೀಗ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷೆಗೊಡ್ಡಲಿದೆ. ಇಬ್ಬರು ಮುಂಬೈಕರ್ ಇಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಮುಮಬೈ ತಂಡದ ನಾಯಕ ರೋಹಿತ್ ಮತ್ತು ಕೋಲ್ಕತ್ತ ಬಳಗದ ನಾಯಕ ಶ್ರೇಯಸ್ ಅಯ್ಯರ್ ಇಬ್ಬರೂ ಮುಂಬೈನವರಾಗಿದ್ದಾರೆ.