<p><strong>ಅಹಮದಾಬಾದ್</strong>: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಬಾರಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತ ಗಳಿಸಿತು. ಇದರಿಂದಾಗಿ ಗುಜರಾತ್ ಟೈಟನ್ಸ್ ತಂಡವು ರಜತ್ ಪಾಟೀದಾರ್ ಬಳಗದ ಎದುರು ‘ಮುಯ್ಯಿ’ ತೀರಿಸಿಕೊಂಡಿತು.</p><p>ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟೈಟನ್ಸ್ ತಂಡ 4 ವಿಕೆಟ್ ಗಳಿಂದ ಗೆದ್ದಿತು. ಹೋದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿಯು ಗುಜರಾತ್ ತಂಡವನ್ನು ಸೋಲಿಸಿತ್ತು. ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡದ ಬೌಲರ್ಗಳು ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.</p><p>ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ ತಂಡವು 19.2 ಓವರ್ಗಳಲ್ಲಿ 155 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಅದಕ್ಕುತ್ತರವಾಗಿ ಗಿಲ್ ಬಳಗವು 15. 5 ಓವರ್ಗಳಲ್ಲಿ 6 ವಿಕೆಟ್ಗಳಿಗೆ 158 ರನ್ ಗಳಿಸಿತು. ಟೂರ್ನಿಯಲ್ಲಿ ಆರ್ಸಿಬಿಗೆ ಇದು ಮೂರನೇ ಸೋಲು.</p><p><strong>ಕಗಿಸೊ–ವಿರಾಟ್ ಮುಖಾಮುಖಿ: </strong>ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಗುಜರಾತ್ ವೇಗಿ ಕಗಿಸೊ ರಬಾಡ ಅವರ ಪೈಪೋಟಿಯು ಗಮನ ಸೆಳೆಯಿತು. ರಬಾಡ ಅವರ ಮೊದಲ ಓವರ್ನಲ್ಲಿ ಕೊಹ್ಲಿ ಭರ್ಜರಿ ಬೀಸಾಟವಾಡಿದರು. ಸತತ ಐದು ಬೌಂಡರಿಗಳನ್ನು ಬಾರಿಸಿದರು. ಅದೊಂದೇ ಓವರ್ನಲ್ಲಿ 21 ರನ್ಗಳು ದಾಖಲಾದವು. ಆದರೆ ನಾಯಕ ಶುಭಮನ್ ಗಿಲ್ ಅವರು ಇದರಿಂದ ವಿಚಲಿತರಾಗಲಿಲ್ಲ. ಇನಿಂಗ್ಸ್ನ ನಾಲ್ಕನೇ ಓವರ್ ಬೌಲಿಂಗ್ ಮಾಡಲು ಮತ್ತೆ ರಬಾಡ ಅವರಿಗೇ ಚೆಂಡು ಕೊಟ್ಟರು. ಇದು ಫಲಪ್ರದವಾಯಿತು. ಕೊಹ್ಲಿ (28; 13ಎ) ಮುನ್ನುಗ್ಗಿ ಹೊಡೆ ಯುವ ಯತ್ನದಲ್ಲಿ ಎಸೆತದ ಪುಟಿತವನ್ನು ಅಂದಾಜು ಮಾಡಲಿಲ್ಲ. ಇದರಿಂದಾಗಿ ರಶೀದ್ ಖಾನ್ ಅವರಿಗೆ ಕ್ಯಾಚ್ ಆದರು.</p><p>ಇದಕ್ಕೂ ಮುನ್ನ ಮೂರನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಅವರು ಜೇಕಬ್ ಬೆಥೆಲ್ ವಿಕೆಟ್ ಕಬಳಿಸಿದ್ದರು. ಕನ್ನಡಿಗ, ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ (40 ರನ್) ತಂಡಕ್ಕೆ ಮತ್ತೊಮ್ಮೆ ಆಸರೆಯಾದರು. ಬೌಲರ್ಗಳ ಪರಿಣಾಮಕಾರಿ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಈ ಕಾರಣದಿಂದಾಗಿ ತಂಡವು 7 ಓವರ್ಗಳಲ್ಲಿ 2 ವಿಕೆಟ್ಗಳಿಗೆ 71 ರನ್ ಗಳಿಸಿತ್ತು. ಎಡಗೈ ವೇಗಿ ಅರ್ಷದ್ ಖಾನ್ (22ಕ್ಕೆ3) ಮತ್ತು ಸ್ಪಿನ್ನರ್ ರಶೀದ್ ಖಾನ್ (19ಕ್ಕೆ2) ಅವರು ಉತ್ತಮ ದಾಳಿ ನಡೆಸಿದರು. ರಶೀದ್ ಅವರು ದೇವದತ್ತ ಮತ್ತು ಟಿಮ್ ಡೇವಿಡ್ (9ರನ್) ಅವರ ವಿಕೆಟ್ ಗಳನ್ನು ಕಬಳಿಸಿದ್ದು ಆರ್ಸಿಬಿ ರನ್ ಗಳಿಕೆಯನ್ನು ತಗ್ಗಿಸಿತು.</p><p>ಇದರಿಂದಾಗಿ ಆರ್ಸಿಬಿ ತಂಡವು 10.3 ಓವರ್ಗಳಲ್ಲಿ 6 ವಿಕೆಟ್ಗಳಿಗೆ 96 ರನ್ ಗಳಿಸಿತು. ನಾಯಕ ರಜತ್ ಪಾಟೀದಾರ್ (19 ರನ್) , ಜಿತೇಶ್ ಶರ್ಮಾ (1 ರನ್), ಟಿಮ್ ಡೇವಿಡ್ (9 ರನ್) ಮತ್ತು ಕೃಣಾಲ್ ಪಾಂಡ್ಯ ಅವರ ಬ್ಯಾಟ್ಗಳಿಂದ ರನ್ಗಳು ಹರಿಯಲಿಲ್ಲ.</p><p>ಗುಜರಾತ್ ತಂಡದ ಆಲ್ರೌಂಡರ್ ಜೇಸನ್ ಹೋಲ್ಡರ್ (29ಕ್ಕೆ2) ಅವರೂ ಆರ್ಸಿಬಿಗೆ ಪೆಟ್ಟುಕೊಟ್ಟರು. ಅವರು ಮೂರು ಅಮೋಘ ಕ್ಯಾಚ್ಗಳನ್ನೂ ಹಿಡಿದರು. ಕೊನೆಯ ಹಂತದ ಓವರ್ಗಳಲ್ಲಿ ರೊಮೆರಿಯೊ ಶೆಫರ್ಡ್ ಮತ್ತು ಭುವನೇಶ್ವರ್ ಕುಮಾರ್ ರನ್ಗಳ ಕಾಣಿಕೆ ನೀಡಿದರು. ಆದರೆ ವೆಂಕಟೇಶ್ ಅಯ್ಯರ್ 15 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಅಚ್ಚರಿ ಮೂಡಿಸಿದರು.</p><p>ಗುರಿ ಬೆನ್ನಟ್ಟಿದ ತಂಡಕ್ಕೆ ಗಿಲ್ (43; 18 ಎ, 4x3, 6x3) ಹಾಗೂ ಜೋಸ್ ಬಟ್ಲರ್ (39; 19 ಎ, 4x2, 6x4) ಅವರು ಆಸರೆಯಾದರು. ಒಂದು ಹಂತದಲ್ಲಿ ಆರ್ಸಿಬಿಯ ಭುವನೇಶ್ವರ್ ಕುಮಾರ್ ಅವರು 3 ವಿಕೆಟ್ ಗಳಿಸಿ ಗುಜರಾತ್ ತಂಡಕ್ಕೆ ಆತಂಕ ಮೂಡಿಸಿದ್ದರು. ಆದರೆ ಕೆಳಕ್ರಮಾಂಕದ ಬ್ಯಾಟರ್ಗಳು ತಮ್ಮ ಅಲ್ಪ ಕಾಣಿಕೆಗಳ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇಂಪ್ಯಾಕ್ಟ್ ಪ್ಲೇಯರ್ ರಾಹುಲ್ ತೆವಾಟಿಯಾ 17 ಎಸೆತಗಳಲ್ಲಿ ಔಟಾಗದೇ 27 ರನ್ ಗಳಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು.</p>.ಐಪಿಎಲ್ | ಗಿಲ್ ಬಳಗಕ್ಕೆ ರಜತ್ ಪಡೆ ಸವಾಲು ಇಂದು: ಜಯದ ಓಟದತ್ತ ಆರ್ಸಿಬಿ ನೋಟ.ಕಿಂಗ್ vs ಯುವರಾಜನ ಮುಖಾಮುಖಿ: ಗುಜರಾತ್ ವಿರುದ್ಧ ಹೇಗಿದೆ RCB ರೆಕಾರ್ಡ್?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್</strong>: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಬಾರಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತ ಗಳಿಸಿತು. ಇದರಿಂದಾಗಿ ಗುಜರಾತ್ ಟೈಟನ್ಸ್ ತಂಡವು ರಜತ್ ಪಾಟೀದಾರ್ ಬಳಗದ ಎದುರು ‘ಮುಯ್ಯಿ’ ತೀರಿಸಿಕೊಂಡಿತು.</p><p>ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟೈಟನ್ಸ್ ತಂಡ 4 ವಿಕೆಟ್ ಗಳಿಂದ ಗೆದ್ದಿತು. ಹೋದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿಯು ಗುಜರಾತ್ ತಂಡವನ್ನು ಸೋಲಿಸಿತ್ತು. ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡದ ಬೌಲರ್ಗಳು ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.</p><p>ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ ತಂಡವು 19.2 ಓವರ್ಗಳಲ್ಲಿ 155 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಅದಕ್ಕುತ್ತರವಾಗಿ ಗಿಲ್ ಬಳಗವು 15. 5 ಓವರ್ಗಳಲ್ಲಿ 6 ವಿಕೆಟ್ಗಳಿಗೆ 158 ರನ್ ಗಳಿಸಿತು. ಟೂರ್ನಿಯಲ್ಲಿ ಆರ್ಸಿಬಿಗೆ ಇದು ಮೂರನೇ ಸೋಲು.</p><p><strong>ಕಗಿಸೊ–ವಿರಾಟ್ ಮುಖಾಮುಖಿ: </strong>ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಗುಜರಾತ್ ವೇಗಿ ಕಗಿಸೊ ರಬಾಡ ಅವರ ಪೈಪೋಟಿಯು ಗಮನ ಸೆಳೆಯಿತು. ರಬಾಡ ಅವರ ಮೊದಲ ಓವರ್ನಲ್ಲಿ ಕೊಹ್ಲಿ ಭರ್ಜರಿ ಬೀಸಾಟವಾಡಿದರು. ಸತತ ಐದು ಬೌಂಡರಿಗಳನ್ನು ಬಾರಿಸಿದರು. ಅದೊಂದೇ ಓವರ್ನಲ್ಲಿ 21 ರನ್ಗಳು ದಾಖಲಾದವು. ಆದರೆ ನಾಯಕ ಶುಭಮನ್ ಗಿಲ್ ಅವರು ಇದರಿಂದ ವಿಚಲಿತರಾಗಲಿಲ್ಲ. ಇನಿಂಗ್ಸ್ನ ನಾಲ್ಕನೇ ಓವರ್ ಬೌಲಿಂಗ್ ಮಾಡಲು ಮತ್ತೆ ರಬಾಡ ಅವರಿಗೇ ಚೆಂಡು ಕೊಟ್ಟರು. ಇದು ಫಲಪ್ರದವಾಯಿತು. ಕೊಹ್ಲಿ (28; 13ಎ) ಮುನ್ನುಗ್ಗಿ ಹೊಡೆ ಯುವ ಯತ್ನದಲ್ಲಿ ಎಸೆತದ ಪುಟಿತವನ್ನು ಅಂದಾಜು ಮಾಡಲಿಲ್ಲ. ಇದರಿಂದಾಗಿ ರಶೀದ್ ಖಾನ್ ಅವರಿಗೆ ಕ್ಯಾಚ್ ಆದರು.</p><p>ಇದಕ್ಕೂ ಮುನ್ನ ಮೂರನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಅವರು ಜೇಕಬ್ ಬೆಥೆಲ್ ವಿಕೆಟ್ ಕಬಳಿಸಿದ್ದರು. ಕನ್ನಡಿಗ, ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ (40 ರನ್) ತಂಡಕ್ಕೆ ಮತ್ತೊಮ್ಮೆ ಆಸರೆಯಾದರು. ಬೌಲರ್ಗಳ ಪರಿಣಾಮಕಾರಿ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಈ ಕಾರಣದಿಂದಾಗಿ ತಂಡವು 7 ಓವರ್ಗಳಲ್ಲಿ 2 ವಿಕೆಟ್ಗಳಿಗೆ 71 ರನ್ ಗಳಿಸಿತ್ತು. ಎಡಗೈ ವೇಗಿ ಅರ್ಷದ್ ಖಾನ್ (22ಕ್ಕೆ3) ಮತ್ತು ಸ್ಪಿನ್ನರ್ ರಶೀದ್ ಖಾನ್ (19ಕ್ಕೆ2) ಅವರು ಉತ್ತಮ ದಾಳಿ ನಡೆಸಿದರು. ರಶೀದ್ ಅವರು ದೇವದತ್ತ ಮತ್ತು ಟಿಮ್ ಡೇವಿಡ್ (9ರನ್) ಅವರ ವಿಕೆಟ್ ಗಳನ್ನು ಕಬಳಿಸಿದ್ದು ಆರ್ಸಿಬಿ ರನ್ ಗಳಿಕೆಯನ್ನು ತಗ್ಗಿಸಿತು.</p><p>ಇದರಿಂದಾಗಿ ಆರ್ಸಿಬಿ ತಂಡವು 10.3 ಓವರ್ಗಳಲ್ಲಿ 6 ವಿಕೆಟ್ಗಳಿಗೆ 96 ರನ್ ಗಳಿಸಿತು. ನಾಯಕ ರಜತ್ ಪಾಟೀದಾರ್ (19 ರನ್) , ಜಿತೇಶ್ ಶರ್ಮಾ (1 ರನ್), ಟಿಮ್ ಡೇವಿಡ್ (9 ರನ್) ಮತ್ತು ಕೃಣಾಲ್ ಪಾಂಡ್ಯ ಅವರ ಬ್ಯಾಟ್ಗಳಿಂದ ರನ್ಗಳು ಹರಿಯಲಿಲ್ಲ.</p><p>ಗುಜರಾತ್ ತಂಡದ ಆಲ್ರೌಂಡರ್ ಜೇಸನ್ ಹೋಲ್ಡರ್ (29ಕ್ಕೆ2) ಅವರೂ ಆರ್ಸಿಬಿಗೆ ಪೆಟ್ಟುಕೊಟ್ಟರು. ಅವರು ಮೂರು ಅಮೋಘ ಕ್ಯಾಚ್ಗಳನ್ನೂ ಹಿಡಿದರು. ಕೊನೆಯ ಹಂತದ ಓವರ್ಗಳಲ್ಲಿ ರೊಮೆರಿಯೊ ಶೆಫರ್ಡ್ ಮತ್ತು ಭುವನೇಶ್ವರ್ ಕುಮಾರ್ ರನ್ಗಳ ಕಾಣಿಕೆ ನೀಡಿದರು. ಆದರೆ ವೆಂಕಟೇಶ್ ಅಯ್ಯರ್ 15 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಅಚ್ಚರಿ ಮೂಡಿಸಿದರು.</p><p>ಗುರಿ ಬೆನ್ನಟ್ಟಿದ ತಂಡಕ್ಕೆ ಗಿಲ್ (43; 18 ಎ, 4x3, 6x3) ಹಾಗೂ ಜೋಸ್ ಬಟ್ಲರ್ (39; 19 ಎ, 4x2, 6x4) ಅವರು ಆಸರೆಯಾದರು. ಒಂದು ಹಂತದಲ್ಲಿ ಆರ್ಸಿಬಿಯ ಭುವನೇಶ್ವರ್ ಕುಮಾರ್ ಅವರು 3 ವಿಕೆಟ್ ಗಳಿಸಿ ಗುಜರಾತ್ ತಂಡಕ್ಕೆ ಆತಂಕ ಮೂಡಿಸಿದ್ದರು. ಆದರೆ ಕೆಳಕ್ರಮಾಂಕದ ಬ್ಯಾಟರ್ಗಳು ತಮ್ಮ ಅಲ್ಪ ಕಾಣಿಕೆಗಳ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇಂಪ್ಯಾಕ್ಟ್ ಪ್ಲೇಯರ್ ರಾಹುಲ್ ತೆವಾಟಿಯಾ 17 ಎಸೆತಗಳಲ್ಲಿ ಔಟಾಗದೇ 27 ರನ್ ಗಳಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು.</p>.ಐಪಿಎಲ್ | ಗಿಲ್ ಬಳಗಕ್ಕೆ ರಜತ್ ಪಡೆ ಸವಾಲು ಇಂದು: ಜಯದ ಓಟದತ್ತ ಆರ್ಸಿಬಿ ನೋಟ.ಕಿಂಗ್ vs ಯುವರಾಜನ ಮುಖಾಮುಖಿ: ಗುಜರಾತ್ ವಿರುದ್ಧ ಹೇಗಿದೆ RCB ರೆಕಾರ್ಡ್?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>