<p><strong>ರಾಯಪುರ</strong>: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿ ಸುವ ‘ಸಸ್ಪೆನ್ಸ್ ಥ್ರಿಲ್ಲರ್’ ಚಲನಚಿತ್ರದಂತಿದ್ದ<br>ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಭೇರಿ ಬಾರಿಸಿತು. ‘ಉದ್ಯಾನನಗರಿ’ಯಿಂದ ಇಲ್ಲಿಯ ಶಹೀದ್ ವೀರನಾರಾಯಣ ಕ್ರೀಡಾಂಗಣಕ್ಕೆ ಬಂದು ಸೇರಿದ್ದ ತನ್ನ ನೂರಾರು ಅಭಿಮಾನಿಗಳಿಗೆ ಭರ್ತಿ ಮನರಂಜನೆಯ ಜೊತೆಗೆ ಗೆಲುವಿನ ಕಾಣಿಕೆಯನ್ನೂ ನೀಡಿತು.</p><p>ಭಾನುವಾರ ಇಲ್ಲಿ ನಡೆದ ಐಪಿಎಲ್ ಪಂದ್ಯವು ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿತ್ತು. ಮುಂಬೈ ಇಂಡಿಯನ್ಸ್ ಎದುರು 2 ವಿಕೆಟ್ಗಳಿಂದ ಜಯಿಸಿದ ಹಾದಿ ಸಾಹಸಯಾತ್ರೆ ಯಂತಿತ್ತು. 167 ರನ್ಗಳ ಜಯದ ಗುರಿಯನ್ನು ಬೆನ್ನಟ್ಟಿದ್ದ ಹಾದಿಯಲ್ಲಿ ಆರ್ಸಿಬಿಯ ಪ್ರಮುಖ ಬ್ಯಾಟರ್ಗಳು ವಿಫಲರಾದರು. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ಟಿಮ್ ಡೇವಿಡ್ ಅವರು ಸೊನ್ನೆ ಸುತ್ತಿದ್ದು ತಂಡಕ್ಕೆ ಸಂಕಷ್ಟ ತಂದೊಡ್ಡಿತು. ಆದರೆ, ಕೃಣಾಲ್ ಪಾಂಡ್ಯ (73 ರನ್) ಅವರ ವೀರೋಚಿತ ಹೋರಾಟ ಎಲ್ಲರ ಮನಗೆದ್ದಿತು. ಎಡಗಾಲಿನ ಸ್ನಾಯುಸೆಳೆತದ ನೋವು ಅನುಭವಿಸುತ್ತ, ಬೀಳುತ್ತ, ಏಳುತ್ತ ಅವರು ಸಿಕ್ಸರ್ಗಳನ್ನು ಹೊಡೆದರು. ತಂಡದ ಗೆಲುವಿನ ಅವಕಾಶವನ್ನು ಜೀವಂತವಾಗಿಟ್ಟರು. ದೀಪಕ್ ಚಾಹರ್ (33ಕ್ಕೆ2) ಮತ್ತು ಕಾರ್ಬಿನ್ ಬಾಷ್ (26ಕ್ಕೆ4) ಅವರ ಕರಾರುವಾಕ್ ದಾಳಿಯ ನಡುವೆಯೂ ಕೃಣಾಲ್ ಆಟ ಚೇತೋಹಾರಿಯಾಗಿತ್ತು.</p><p>ಆದರೆ, 18ನೇ ಓವರ್ನಲ್ಲಿ ಅಲ್ಲಾಹ ಘಜನಫರ್ ಎಸೆತವನ್ನು ಕೃಣಾಲ್ ಸಿಕ್ಸರ್ ಗೆತ್ತುವ ಪ್ರಯತ್ನ ಮಾಡಿದರು. ಬೌಂಡರಿ ಲೈನಲ್ನಲ್ಲಿ ತಿಲಕ್ ವರ್ಮಾ ಸಾಹಸದಿಂದ ಹಿಡಿದ ಕ್ಯಾಚ್ಗೆ ಕ್ಯಾಚ್ಗೆ ಕೃಣಾಲ್ ಡಗ್ಔಟ್ ಸೇರಬೇಕಾಯಿತು.</p><p>ಕೊನೆಯ ಎರಡು ಓವರ್ಗಳಲ್ಲಿ 18 ರನ್ ಅಗತ್ಯವಿತ್ತು. ಆಗ ಜಸ್ಪ್ರೀತ್ ಬೂಮ್ರಾ 19ನೇ ಓವರ್ನಲ್ಲಿ ಕೇವಲ ಮೂರು ರನ್ ಬಿಟ್ಟುಕೊಟ್ಟರು. ಆರ್ಸಿಬಿಗೆ ಕೊನೆಯ ಓವರ್ ನಲ್ಲಿ 15 ರನ್ ಬೇಕಿತ್ತು. ಯುವ ಆಟಗಾರ ರಾಜ್ ಬಾವಾ ಈ ಓವರ್ ಬೌಲಿಂಗ್ ಮಾಡಿ ದರು. ಅವರು 3 ವೈಡ್,1 ನೋಬಾಲ್ ಹಾಕಿದರು. ಹೀಗಾಗಿ ಆರ್ಸಿಬಿಗೆ ಹೆಚ್ಚುವರಿ ರನ್ ಸಿಕ್ಕವು. ಇದೇ ಓವರ್ನಲ್ಲಿ ರೊಮಾರಿಯೊ ಶೆಫರ್ಡ್ ಔಟಾದಾಗ ಮುಂಬೈ ತಂಡದಲ್ಲಿ ಜಯದ ಆಸೆ ಚಿಗುರಿತ್ತು.</p><p>ಕ್ರೀಸ್ನಲ್ಲಿ ಜೊತೆಗೂಡಿದ ಭುವನೇಶ್ವರ್ ಕುಮಾರ್ ಮತ್ತು ರಸಿಕ್ ದಾರ್ ಅವರು ದಿಟ್ಟ ಆಟವಾಡಿದರು. ಓವರ್ನ ನಾಲ್ಕನೇ ಎಸೆತವನ್ನು ಸಿಕ್ಸರ್ಗೆ ತ್ತಿದ ಭುವಿ, ಐದನೇಯದ್ದರಲ್ಲಿ ಒಂದು ರನ್ ಓಡಿದರು. ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿದ್ದ ಸಂದರ್ಭದಲ್ಲಿ ರಸಿಕ್ ಚುರುಕುತನ ಮೆರೆದು ಗೆಲುವಿನ ಸಂಭ್ರಮ ಅಚರಿಸಿದರು. ಆರ್ಸಿಬಿ ಅಂಕಪಟ್ಟಿ ಯಲ್ಲಿ ಅಗ್ರಸ್ಥಾನ ಕ್ಕೇರಿತು. ಮುಂಬೈ ಪ್ಲೇಆಫ್ ರೇಸ್ನಿಂದ ಹೊರಬಿತ್ತು.</p><p><strong>ಭುವಿ ಬಿರುಗಾಳಿ: ಟಾಸ್ ಗೆದ್ದ ಬೆಂಗಳೂರು ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಡಿತು. ವೇಗಿ ಭುವನೇಶ್ವರ್ ಕುಮಾರ್ (4–0–23–4) ತಮ್ಮ ಅಮೋಘ ಬೌಲಿಂಗ್ ಮೂಲಕ ಮುಂಬೈ ತಂಡವನ್ನು 20 ಓವರ್ಗಳಲ್ಲಿ 7 ವಿಕೆಟ್ಗೆ 166 ರನ್ಗಳಿಗೆ ಕಟ್ಟಿಹಾಕಿದರು. ತಿಲಕ್ ವರ್ಮಾ (57; 42ಎ) ಮತ್ತು ನಮನ್ ಧೀರ್ (47; 32ಎ) ಅವರ ಆಟ ದಿಂದಾಗಿ ಈ ಮೊತ್ತ ಕಲೆಹಾಕಲು ಸಾಧ್ಯವಾಯಿತು.</strong></p><p>ಭುವಿ ಹಾಕಿದ ಮೊದಲ ಎಸೆತದಲ್ಲಿಯೇ ವಿಕೆಟ್ ಲಭಿಸುವ ಅವಕಾಶವೊಂದು ಇತ್ತು. ರಿಯಾನ್ ರಿಕೆಲ್ಟನ್ ಹೊಡೆದ ಚೆಂಡು ಗಾಳಿಯಲ್ಲಿ ಸಾಗಿತು. ಅದನ್ನು ಕ್ಯಾಚ್ ಮಾಡಲು ಮಿಡ್ಆಫ್ನಲ್ಲಿದ್ದ ರಜತ್ ಪಾಟೀದಾರ್ ಅವರು ಪಟ್ಟ ಪ್ರಯತ್ನ ಫಲಿಸಲಿಲ್ಲ. ಆದರೆ ಅದೇ ಓವರ್ನ ಕೊನೆಯ ಎಸೆತದಲ್ಲಿ ರಿಕೆಲ್ಟನ್ ಅವರು ರಜತ್ ಅವರಿಗೆ ಅದೇ ಜಾಗದಲ್ಲಿ ಸುಲಭ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಇದರೊಂದಿಗೆ ಭುವಿಯ ಬೇಟೆ ಆರಂಭವಾಯಿತು.</p><p>ತಮ್ಮ ಎರಡನೇ ಓವರ್ನಲ್ಲಿ ಅವರು ಹಾಕಿದ ನಕಲ್ ಬಾಲ್ಗೆ ರೋಹಿತ್ ಶರ್ಮಾ (22; 10ಎ) ದಂಡ ತೆತ್ತರು. ಆಫ್ಸ್ಟಂಪ್ ಹೊರಗಿದ್ದ ಚೆಂಡನ್ನು ಕೆಣಕಿದರು. ವಿಕೆಟ್ಕೀಪರ್ ಜಿತೇಶ್ ಶರ್ಮಾ ತಮ್ಮ ಬಲಕ್ಕೆ ನೆಗೆದು ಪಡೆದ ಆಕರ್ಷಕ ಕ್ಯಾಚ್ಗೆ ರೋಹಿತ್ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ ಫಿಟ್ ಇರದ ಕಾರಣ ನಾಯಕತ್ವ ವಹಿಸಿರುವ ಸೂರ್ಯಕುಮಾರ್ ಯಾದವ್ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚಿತ್ತರು. ಭುವಿ ಸಂಭ್ರಮಿಸಿದರು.</p><p>ಪವರ್ಪ್ಲೇ ನಂತರ ಕಾಶ್ಮೀರದ ಹುಡುಗ ರಸಿಕ್ ಸಲಾಮ್ ಎಸೆತದಲ್ಲಿ ತಿಲಕ್ ವರ್ಮಾ ಕೊಟ್ಟ ಸುಲಭ ಕ್ಯಾಚ್ ಅನ್ನು ಸುಯಶ್ ಶರ್ಮಾ ಕೈಚೆಲ್ಲಿದರು. 17ನೇ ಓವರ್ನವರೆಗೂ ವರ್ಮಾ ಅವರ ಆಟ ನಡೆಯಿತು. ಏಕಾಗ್ರತೆ ಮತ್ತು ತಾಳ್ಮೆ ಮೇಳೈಸಿದ ಅರ್ಧಶತಕ ಗಳಿಸಿದರು. ನಮನ್ ಧೀರ್ ಅವರೊಂದಿಗೆ 82 ರನ್ ಸೇರಿಸಿದರು. 18ನೇ ಓವರ್ ಹಾಕಲು ಮರಳಿದ ಭುವಿ, ವರ್ಮಾ ಇನಿಂಗ್ಸ್ಗೆ ತೆರೆಯೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ</strong>: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿ ಸುವ ‘ಸಸ್ಪೆನ್ಸ್ ಥ್ರಿಲ್ಲರ್’ ಚಲನಚಿತ್ರದಂತಿದ್ದ<br>ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಭೇರಿ ಬಾರಿಸಿತು. ‘ಉದ್ಯಾನನಗರಿ’ಯಿಂದ ಇಲ್ಲಿಯ ಶಹೀದ್ ವೀರನಾರಾಯಣ ಕ್ರೀಡಾಂಗಣಕ್ಕೆ ಬಂದು ಸೇರಿದ್ದ ತನ್ನ ನೂರಾರು ಅಭಿಮಾನಿಗಳಿಗೆ ಭರ್ತಿ ಮನರಂಜನೆಯ ಜೊತೆಗೆ ಗೆಲುವಿನ ಕಾಣಿಕೆಯನ್ನೂ ನೀಡಿತು.</p><p>ಭಾನುವಾರ ಇಲ್ಲಿ ನಡೆದ ಐಪಿಎಲ್ ಪಂದ್ಯವು ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿತ್ತು. ಮುಂಬೈ ಇಂಡಿಯನ್ಸ್ ಎದುರು 2 ವಿಕೆಟ್ಗಳಿಂದ ಜಯಿಸಿದ ಹಾದಿ ಸಾಹಸಯಾತ್ರೆ ಯಂತಿತ್ತು. 167 ರನ್ಗಳ ಜಯದ ಗುರಿಯನ್ನು ಬೆನ್ನಟ್ಟಿದ್ದ ಹಾದಿಯಲ್ಲಿ ಆರ್ಸಿಬಿಯ ಪ್ರಮುಖ ಬ್ಯಾಟರ್ಗಳು ವಿಫಲರಾದರು. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ಟಿಮ್ ಡೇವಿಡ್ ಅವರು ಸೊನ್ನೆ ಸುತ್ತಿದ್ದು ತಂಡಕ್ಕೆ ಸಂಕಷ್ಟ ತಂದೊಡ್ಡಿತು. ಆದರೆ, ಕೃಣಾಲ್ ಪಾಂಡ್ಯ (73 ರನ್) ಅವರ ವೀರೋಚಿತ ಹೋರಾಟ ಎಲ್ಲರ ಮನಗೆದ್ದಿತು. ಎಡಗಾಲಿನ ಸ್ನಾಯುಸೆಳೆತದ ನೋವು ಅನುಭವಿಸುತ್ತ, ಬೀಳುತ್ತ, ಏಳುತ್ತ ಅವರು ಸಿಕ್ಸರ್ಗಳನ್ನು ಹೊಡೆದರು. ತಂಡದ ಗೆಲುವಿನ ಅವಕಾಶವನ್ನು ಜೀವಂತವಾಗಿಟ್ಟರು. ದೀಪಕ್ ಚಾಹರ್ (33ಕ್ಕೆ2) ಮತ್ತು ಕಾರ್ಬಿನ್ ಬಾಷ್ (26ಕ್ಕೆ4) ಅವರ ಕರಾರುವಾಕ್ ದಾಳಿಯ ನಡುವೆಯೂ ಕೃಣಾಲ್ ಆಟ ಚೇತೋಹಾರಿಯಾಗಿತ್ತು.</p><p>ಆದರೆ, 18ನೇ ಓವರ್ನಲ್ಲಿ ಅಲ್ಲಾಹ ಘಜನಫರ್ ಎಸೆತವನ್ನು ಕೃಣಾಲ್ ಸಿಕ್ಸರ್ ಗೆತ್ತುವ ಪ್ರಯತ್ನ ಮಾಡಿದರು. ಬೌಂಡರಿ ಲೈನಲ್ನಲ್ಲಿ ತಿಲಕ್ ವರ್ಮಾ ಸಾಹಸದಿಂದ ಹಿಡಿದ ಕ್ಯಾಚ್ಗೆ ಕ್ಯಾಚ್ಗೆ ಕೃಣಾಲ್ ಡಗ್ಔಟ್ ಸೇರಬೇಕಾಯಿತು.</p><p>ಕೊನೆಯ ಎರಡು ಓವರ್ಗಳಲ್ಲಿ 18 ರನ್ ಅಗತ್ಯವಿತ್ತು. ಆಗ ಜಸ್ಪ್ರೀತ್ ಬೂಮ್ರಾ 19ನೇ ಓವರ್ನಲ್ಲಿ ಕೇವಲ ಮೂರು ರನ್ ಬಿಟ್ಟುಕೊಟ್ಟರು. ಆರ್ಸಿಬಿಗೆ ಕೊನೆಯ ಓವರ್ ನಲ್ಲಿ 15 ರನ್ ಬೇಕಿತ್ತು. ಯುವ ಆಟಗಾರ ರಾಜ್ ಬಾವಾ ಈ ಓವರ್ ಬೌಲಿಂಗ್ ಮಾಡಿ ದರು. ಅವರು 3 ವೈಡ್,1 ನೋಬಾಲ್ ಹಾಕಿದರು. ಹೀಗಾಗಿ ಆರ್ಸಿಬಿಗೆ ಹೆಚ್ಚುವರಿ ರನ್ ಸಿಕ್ಕವು. ಇದೇ ಓವರ್ನಲ್ಲಿ ರೊಮಾರಿಯೊ ಶೆಫರ್ಡ್ ಔಟಾದಾಗ ಮುಂಬೈ ತಂಡದಲ್ಲಿ ಜಯದ ಆಸೆ ಚಿಗುರಿತ್ತು.</p><p>ಕ್ರೀಸ್ನಲ್ಲಿ ಜೊತೆಗೂಡಿದ ಭುವನೇಶ್ವರ್ ಕುಮಾರ್ ಮತ್ತು ರಸಿಕ್ ದಾರ್ ಅವರು ದಿಟ್ಟ ಆಟವಾಡಿದರು. ಓವರ್ನ ನಾಲ್ಕನೇ ಎಸೆತವನ್ನು ಸಿಕ್ಸರ್ಗೆ ತ್ತಿದ ಭುವಿ, ಐದನೇಯದ್ದರಲ್ಲಿ ಒಂದು ರನ್ ಓಡಿದರು. ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿದ್ದ ಸಂದರ್ಭದಲ್ಲಿ ರಸಿಕ್ ಚುರುಕುತನ ಮೆರೆದು ಗೆಲುವಿನ ಸಂಭ್ರಮ ಅಚರಿಸಿದರು. ಆರ್ಸಿಬಿ ಅಂಕಪಟ್ಟಿ ಯಲ್ಲಿ ಅಗ್ರಸ್ಥಾನ ಕ್ಕೇರಿತು. ಮುಂಬೈ ಪ್ಲೇಆಫ್ ರೇಸ್ನಿಂದ ಹೊರಬಿತ್ತು.</p><p><strong>ಭುವಿ ಬಿರುಗಾಳಿ: ಟಾಸ್ ಗೆದ್ದ ಬೆಂಗಳೂರು ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಡಿತು. ವೇಗಿ ಭುವನೇಶ್ವರ್ ಕುಮಾರ್ (4–0–23–4) ತಮ್ಮ ಅಮೋಘ ಬೌಲಿಂಗ್ ಮೂಲಕ ಮುಂಬೈ ತಂಡವನ್ನು 20 ಓವರ್ಗಳಲ್ಲಿ 7 ವಿಕೆಟ್ಗೆ 166 ರನ್ಗಳಿಗೆ ಕಟ್ಟಿಹಾಕಿದರು. ತಿಲಕ್ ವರ್ಮಾ (57; 42ಎ) ಮತ್ತು ನಮನ್ ಧೀರ್ (47; 32ಎ) ಅವರ ಆಟ ದಿಂದಾಗಿ ಈ ಮೊತ್ತ ಕಲೆಹಾಕಲು ಸಾಧ್ಯವಾಯಿತು.</strong></p><p>ಭುವಿ ಹಾಕಿದ ಮೊದಲ ಎಸೆತದಲ್ಲಿಯೇ ವಿಕೆಟ್ ಲಭಿಸುವ ಅವಕಾಶವೊಂದು ಇತ್ತು. ರಿಯಾನ್ ರಿಕೆಲ್ಟನ್ ಹೊಡೆದ ಚೆಂಡು ಗಾಳಿಯಲ್ಲಿ ಸಾಗಿತು. ಅದನ್ನು ಕ್ಯಾಚ್ ಮಾಡಲು ಮಿಡ್ಆಫ್ನಲ್ಲಿದ್ದ ರಜತ್ ಪಾಟೀದಾರ್ ಅವರು ಪಟ್ಟ ಪ್ರಯತ್ನ ಫಲಿಸಲಿಲ್ಲ. ಆದರೆ ಅದೇ ಓವರ್ನ ಕೊನೆಯ ಎಸೆತದಲ್ಲಿ ರಿಕೆಲ್ಟನ್ ಅವರು ರಜತ್ ಅವರಿಗೆ ಅದೇ ಜಾಗದಲ್ಲಿ ಸುಲಭ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಇದರೊಂದಿಗೆ ಭುವಿಯ ಬೇಟೆ ಆರಂಭವಾಯಿತು.</p><p>ತಮ್ಮ ಎರಡನೇ ಓವರ್ನಲ್ಲಿ ಅವರು ಹಾಕಿದ ನಕಲ್ ಬಾಲ್ಗೆ ರೋಹಿತ್ ಶರ್ಮಾ (22; 10ಎ) ದಂಡ ತೆತ್ತರು. ಆಫ್ಸ್ಟಂಪ್ ಹೊರಗಿದ್ದ ಚೆಂಡನ್ನು ಕೆಣಕಿದರು. ವಿಕೆಟ್ಕೀಪರ್ ಜಿತೇಶ್ ಶರ್ಮಾ ತಮ್ಮ ಬಲಕ್ಕೆ ನೆಗೆದು ಪಡೆದ ಆಕರ್ಷಕ ಕ್ಯಾಚ್ಗೆ ರೋಹಿತ್ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ ಫಿಟ್ ಇರದ ಕಾರಣ ನಾಯಕತ್ವ ವಹಿಸಿರುವ ಸೂರ್ಯಕುಮಾರ್ ಯಾದವ್ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚಿತ್ತರು. ಭುವಿ ಸಂಭ್ರಮಿಸಿದರು.</p><p>ಪವರ್ಪ್ಲೇ ನಂತರ ಕಾಶ್ಮೀರದ ಹುಡುಗ ರಸಿಕ್ ಸಲಾಮ್ ಎಸೆತದಲ್ಲಿ ತಿಲಕ್ ವರ್ಮಾ ಕೊಟ್ಟ ಸುಲಭ ಕ್ಯಾಚ್ ಅನ್ನು ಸುಯಶ್ ಶರ್ಮಾ ಕೈಚೆಲ್ಲಿದರು. 17ನೇ ಓವರ್ನವರೆಗೂ ವರ್ಮಾ ಅವರ ಆಟ ನಡೆಯಿತು. ಏಕಾಗ್ರತೆ ಮತ್ತು ತಾಳ್ಮೆ ಮೇಳೈಸಿದ ಅರ್ಧಶತಕ ಗಳಿಸಿದರು. ನಮನ್ ಧೀರ್ ಅವರೊಂದಿಗೆ 82 ರನ್ ಸೇರಿಸಿದರು. 18ನೇ ಓವರ್ ಹಾಕಲು ಮರಳಿದ ಭುವಿ, ವರ್ಮಾ ಇನಿಂಗ್ಸ್ಗೆ ತೆರೆಯೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>