<p><strong>ನವದೆಹಲಿ</strong>: ಐಪಿಎಲ್ನ ಹಾಲಿ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ವಿಕೆಟ್ ಕೀಪರ್– ಬ್ಯಾಟರ್ ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಲಾಗಿದೆ. </p><p>10 ತಂಡಗಳ ಟೂರ್ನಿಯಲ್ಲಿ ಲಖನೌ ತಂಡವು ಕೊನೆಯ ಸ್ಥಾನದೊಂದಿಗೆ ಈ ಬಾರಿಯ ಅಭಿಯಾನ ಮುಗಿಸಿದೆ. ಆಡಿದ 14 ಪಂದ್ಯಗಳ ಪೈಕಿ ನಾಲ್ಕರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎಡಗೈ ಬ್ಯಾಟರ್ ಪಂತ್ 14 ಇನ್ನಿಂಗ್ಸ್ಗಳಲ್ಲಿ 28.36ರ ಸರಾಸರಿಯಲ್ಲಿ ಕೇವಲ 312 ರನ್ಗಳನ್ನು ಗಳಿಸಿದ್ದಾರೆ. </p><p>2025ರ ಋತುವಿಗೆ ಮುನ್ನ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ದಾಖಲೆಯ ₹27 ಕೋಟಿ ಮೊತ್ತಕ್ಕೆ ಲಖನೌ ತಂಡವು ಖರೀದಿಸಿತ್ತು. ನಂತರ ಅವರು ಎರಡು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಕಳೆದ ಆವೃತ್ತಿಯಲ್ಲಿ ತಂಡವು ಏಳನೇ ಸ್ಥಾನ ಗಳಿಸಿತ್ತು.</p><p>‘ನಾಯಕತ್ವದ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪಂತ್ ಕೋರಿದ್ದಾರೆ. ಅವರ ಮನವಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗೌರವದಿಂದ ಸ್ವೀಕರಿಸಲಾಗಿದೆ’ ಎಂದು ಫ್ರಾಂಚೈಸಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.</p>.<div><blockquote>ಇಂಥ ನಿರ್ಧಾರಗಳು ಎಂದಿಗೂ ಸುಲಭವಲ್ಲ. ನಾಯಕನಾಗಿ ಎಲ್ಲಾ ರೀತಿಯ ಸಹಕಾರ ನೀಡಿದ ಪಂತ್ ಅವರಿಗೆ ಕೃತಜ್ಞರಾಗಿರುತ್ತೇವೆ. ಈಗ ನಮ್ಮ ಗಮನವು ತಂಡದ ಪುನರ್ರಚನೆಯ ಮೇಲಿದೆ.</blockquote><span class="attribution">– ಟಾಮ್ ಮೂಡಿ, ಎಲ್ಎಸ್ಜಿ ಕ್ರಿಕೆಟ್ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಐಪಿಎಲ್ನ ಹಾಲಿ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ವಿಕೆಟ್ ಕೀಪರ್– ಬ್ಯಾಟರ್ ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಲಾಗಿದೆ. </p><p>10 ತಂಡಗಳ ಟೂರ್ನಿಯಲ್ಲಿ ಲಖನೌ ತಂಡವು ಕೊನೆಯ ಸ್ಥಾನದೊಂದಿಗೆ ಈ ಬಾರಿಯ ಅಭಿಯಾನ ಮುಗಿಸಿದೆ. ಆಡಿದ 14 ಪಂದ್ಯಗಳ ಪೈಕಿ ನಾಲ್ಕರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎಡಗೈ ಬ್ಯಾಟರ್ ಪಂತ್ 14 ಇನ್ನಿಂಗ್ಸ್ಗಳಲ್ಲಿ 28.36ರ ಸರಾಸರಿಯಲ್ಲಿ ಕೇವಲ 312 ರನ್ಗಳನ್ನು ಗಳಿಸಿದ್ದಾರೆ. </p><p>2025ರ ಋತುವಿಗೆ ಮುನ್ನ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ದಾಖಲೆಯ ₹27 ಕೋಟಿ ಮೊತ್ತಕ್ಕೆ ಲಖನೌ ತಂಡವು ಖರೀದಿಸಿತ್ತು. ನಂತರ ಅವರು ಎರಡು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಕಳೆದ ಆವೃತ್ತಿಯಲ್ಲಿ ತಂಡವು ಏಳನೇ ಸ್ಥಾನ ಗಳಿಸಿತ್ತು.</p><p>‘ನಾಯಕತ್ವದ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪಂತ್ ಕೋರಿದ್ದಾರೆ. ಅವರ ಮನವಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗೌರವದಿಂದ ಸ್ವೀಕರಿಸಲಾಗಿದೆ’ ಎಂದು ಫ್ರಾಂಚೈಸಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.</p>.<div><blockquote>ಇಂಥ ನಿರ್ಧಾರಗಳು ಎಂದಿಗೂ ಸುಲಭವಲ್ಲ. ನಾಯಕನಾಗಿ ಎಲ್ಲಾ ರೀತಿಯ ಸಹಕಾರ ನೀಡಿದ ಪಂತ್ ಅವರಿಗೆ ಕೃತಜ್ಞರಾಗಿರುತ್ತೇವೆ. ಈಗ ನಮ್ಮ ಗಮನವು ತಂಡದ ಪುನರ್ರಚನೆಯ ಮೇಲಿದೆ.</blockquote><span class="attribution">– ಟಾಮ್ ಮೂಡಿ, ಎಲ್ಎಸ್ಜಿ ಕ್ರಿಕೆಟ್ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>