<p><strong>ಧರ್ಮಶಾಲಾ:</strong> ಇಲ್ಲಿನ ರಮಣೀಯ ಕ್ರೀಡಾಂಗಣದ ಸುತ್ತಲಿನ ಹಿಮಾಲಯದ ಪರ್ವತಶ್ರೇಣಿಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗಲೆಲ್ಲ ಅದು ಹೊಂಬಣ್ಣದಿಂದ ಹೊಳೆಯುತ್ತದೆ. ಅಂತಹದ್ದೇ ಬಣ್ಣದ ಟ್ರೋಫಿಯನ್ನು ಎತ್ತಿಹಿಡಿಯುವ ಮೊದಲ ಹೆಜ್ಜೆಯಾಗಿ ಮಂಗಳವಾರ ಇಲ್ಲಿ ನಡೆಯಲಿರುವ ಕ್ವಾಲಿಫಯರ್–1ರಲ್ಲಿ ಗೆದ್ದು ಫೈನಲ್ ತಲುಪಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಹವಣಿಸುತ್ತಿವೆ.</p><p>ಆರ್ಸಿಬಿ, ಟೈಟನ್ಸ್– ಈ ಎರಡೂ ತಂಡಗಳು ಅಗ್ರ ಸರದಿಯಲ್ಲಿ ಬಲಿಷ್ಠ ಬ್ಯಾಟಿಂಗ್, ಆಕ್ರಮಣಕಾರಿ ಬೌಲಿಂಗ್, ಒತ್ತಡದ ಸನ್ನಿವೇಶದಲ್ಲಿ ಸಂಯಮದಿಂದ ಆಡಿ ಪಂದ್ಯದ ಗತಿಯನ್ನು ಬದಲಾಯಿಸುವ ಛಾತಿ, ತಂತ್ರಗಾರಿಕೆಯನ್ನು ತೋರಿವೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು (ತಲಾ 18 ಪಾಯಿಂಟ್ಸ್) ಪಡೆದಿವೆ. ಇದರಿಂದಾಗಿ ಈ ತಂಡಗಳಿಗೆ ಫೈನಲ್ ತಲುಪಲು ಎರಡು ಯತ್ನದ ಅವಕಾಶವೂ ದೊರೆತಿದೆ.</p><p>ಹಾಲಿ ಚಾಂಪಿಯನ್, ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡವು ಆರಂಭದಿಂದಲೇ ದೃಢಚಿತ್ತದಿಂದ ಆಡಿತು. ಹೋದ ವರ್ಷದ ಜೂನ್ 3ರಂದು ಹೊನಲು ಬೆಳಕಿನಲ್ಲಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಅಭಿಮಾನಿಗಳಿಗೆ ಉಣಬಡಿಸಿದ ಆಟವನ್ನು ಈ ವರ್ಷವೂ ಮುಂದುವರಿಸಿತು.</p><p>ತಮ್ಮ ಉತ್ತುಂಗದ ದಿನಗಳಲ್ಲಿ ಆಡುತ್ತಿದ್ದ ರೀತಿಯಲ್ಲೇ ಬ್ಯಾಟಿಂಗ್ ಮಾಡುತ್ತಿರುವ, ಮಿಂಚಿನ ಓಟ, ಚುರುಕಿನ ಫೀಲ್ಡಿಂಗ್ನಿಂದ ಯುವ ಆಟಗಾರರಿಗೆ ಮಾದರಿಯಾಗಿರುವ ವಿರಾಟ್ ಕೊಹ್ಲಿ ಅವರು ತಂಡದ ಪರ ಹೆಚ್ಚು ರನ್ (557) ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ, 4 ಅರ್ಧಶತಕಗಳಿವೆ. 37 ವರ್ಷ ವಯಸ್ಸಿನ ಕೊಹ್ಲಿ ಅಕ್ರಮಣ ಮತ್ತು ಸಂಯಮದ ಹದವಾದ ಮಿಶ್ರಣದಂತಿದ್ದಾರೆ. ತಂಡಕ್ಕೆ ಉತ್ತಮ ಬುನಾದಿ ಹಾಕುತ್ತಿದ್ದಾರೆ. ‘ಚೇಸಿಂಗ್ ಮಾಸ್ಟರ್’ ಖ್ಯಾತಿಗೆ ತಕ್ಕಂತೆ ಆಡಿದ್ದಾರೆ.</p><p>ಫಿಲ್ ಸಾಲ್ಟ್ ಬೆರಳಿನ ಗಾಯದಿಂದ ಪೂರ್ಣವಾಗಿ ಗುಣಮುಖರಾಗದ ಕಾರಣ ಆಡುವ 11ರ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ. ಹೀಗಾಗಿ ವೆಂಕಟೇಶ ಅಯ್ಯರ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ರಜತ್ ನೇರವಾಗಿ ಏನೂ ಹೇಳಲಿಲ್ಲ. ಆಡುವ 11ರ ತಂಡವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದರು.</p><p>ಮಧ್ಯಮ ಕ್ರಮಾಂಕದಲ್ಲಿ ದೇವದತ್ತ ಪಡಿಕ್ಕಲ್ (433), ರಜತ್ ಪಾಟೀದಾರ್ (393) ಅವರೂ ಉಪಯುಕ್ತ ಕೊಡುಗೆ ನೀಡಿದ್ದಾರೆ. ನೀಳಕಾಯದ ಟಿಮ್ ಡೇವಿಡ್ ಫಿನಿಷರ್ ಆಗಿ ಆಟದ ಮಟ್ಟ ಎತ್ತರಿಸಿದ್ದಾರೆ. ಅಪರೂಪಕ್ಕೆ ಅಗ್ರ ಕ್ರಮಾಂಕ ವಿಫಲವಾದಾಗ ಕೃಣಾಲ್ ಪಾಂಡ್ಯ ನೆರವಿಗೆ ಬಂದಿದ್ದಾರೆ. ಅಷ್ಟೇ ಅಲ್ಲ, ಮುಂಬೈ ಇಂಡಿಯನ್ಸ್ ವಿರುದ್ಧ ಅಂತಿಮ ಓವರಿನಲ್ಲಿ ಭುವನೇಶ್ವರ್ ಕುಮಾರ್ ಹೊಡೆದ ಸಿಕ್ಸರ್ ಮರೆಯುವಂತಿಲ್ಲ.</p><p>ವಾಸ್ತವದಲ್ಲಿ, 36 ವರ್ಷ ವಯಸ್ಸಿನ ಭುವನೇಶ್ವರ್ ಅವರು ಈ ಋತುವಿನಲ್ಲಿ 24 ವಿಕೆಟ್ಗಳನ್ನು ಕಬಳಿಸಿ ಆರ್ಸಿಬಿಯ ‘ಅತಿ ಮೌಲ್ಯಯುತ ಆಟಗಾರ’ ಎನಿಸಿದ್ದಾರೆ. ಎದುರಾಳಿ ತಂಡಗಳ ಅಗ್ರ ಕ್ರಮಾಂಕಕ್ಕೆ ಸಿಂಹಸ್ವಪ್ನವಾಗಿದ್ದಾರೆ. ಸರಳ ಆದರೆ ಪರಿಣಾಮಕಾರಿ ದಾಳಿಯಿಂದ ಬ್ಯಾಟರ್ಗಳನ್ನು ಕಂಗೆಡಿಸಿದ್ದಾರೆ. ಅವರಿಗೆ ಜೋಶ್ ಹೇಝಲ್ವುಡ್ ಉತ್ತಮ ಬೆಂಬಲ ನೀಡಿ ದ್ದಾರೆ. ಪವರ್ಪ್ಲೇ ಅವಧಿಯಲ್ಲಿ ಇವರಿಬ್ಬರು ಎದುರಾಳಿಗಳನ್ನು ಕಟ್ಟಿಹಾಕಿದ್ದಾರೆ. ಅನುಭವಿ ಸ್ಪಿನ್ನರ್ ಕೃಣಾಲ್ ಪಾಂಡ್ಯ ದಾಳಿಗೆ ಬಲ ನೀಡಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಬೌಲಿಂಗ್ ವಿಭಾಗ ಆರ್ಸಿಬಿಯ ದೌರ್ಬಲ್ಯವಾಗಿತ್ತು.</p><p><strong>ಕಡೆಗಣಿಸಲಾಗದ ಟೈಟನ್ಸ್: </strong>ಟೈಟನ್ಸ್ ಸಹ ಇಂಥದ್ದೇ ಬಲ ಹೊಂದಿದೆ. ಅಗ್ರ ಸರದಿಯಲ್ಲಿ ಸಾಯಿ ಸುದರ್ಶನ್ ಅವರ ಅಮೋಘ ಆಟ ಈ ಋತುವಿನಲ್ಲೂ ಮುಂದುವರಿದಿದೆ. ಅವರು 638 ರನ್ ಕಲೆಹಾಕಿದರೆ, ಅವರ ಜೊತೆ ಇನಿಂಗ್ಸ್ ಆರಂಭಿಸುತ್ತಿರುವ ನಾಯಕ ಶುಭಮನ್ ಗಿಲ್ (616) ಕಾಣಿಕೆ ಕಮ್ಮಿಯೇನಿಲ್ಲ. ಆರಂಭದಲ್ಲಿ ಸ್ವಲ್ಪ ನಿಧಾನ ಎನಿಸಿದರೂ ನಂತರ ಆಕ್ರಮಣಕಾರಿಯಾಗಿ ಆಡಿ ರನ್ವೇಗ ಹೆಚ್ಚಿಸಬಲ್ಲರು. ಮೂರನೇ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಅವರೂ ಬೀಸಾಟವಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.</p><p>ಬೌಲಿಂಗ್ ವಿಭಾಗದಲ್ಲಿ ಟೈಟನ್ಸ್ ತಂಡದ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಕಗಿಸೊ ರಬಾಡ (24 ವಿಕೆಟ್), ಮೊಹಮ್ಮದ್ ಸಿರಾಜ್ (17) ಮತ್ತು ಪ್ರಸಿದ್ಧ ಕೃಷ್ಣ (14) ಅವರು ಛಾಪು ಮೂಡಿಸಿದ್ದಾರೆ. ಅನುಭವಿ ಸ್ಪಿನ್ನರ್ ರಶೀದ್ ಖಾನ್ (19) ತಡವಾಗಿ ಮೋಡಿ ಕಂಡುಕೊಂಡಿದ್ದಾರೆ. ‘ಫಾರ್ಮ್ ಅಲ್ಪಕಾಲದ್ದು, ‘ಕ್ಲಾಸ್’ ದೀರ್ಘಕಾಲದ್ದು’ ಎಂಬುದಕ್ಕೆ ಅನ್ವರ್ಥವಾಗಿದ್ದಾರೆ. ಜೇಸನ್ ಹೋಲ್ಡರ್ ಎರಡೂ ವಿಭಾಗಗಳಲ್ಲಿ ಉಪಯುಕ್ತ ಆಟಗಾರ. ಆದರೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್ಗಳ ಲಯ ಸ್ಥಿರವಾಗಿಲ್ಲ. ಅಗ್ರ ಸರದಿ ಕೈಕೊಟ್ಟಲ್ಲಿ ತಂಡ ತೊಂದರೆಗೆ ಸಿಲುಕಿದ ನಿದರ್ಶನಗಳಿವೆ. ಇದೇ ಅಂಶವನ್ನು ಆರ್ಸಿಬಿ ಬಂಡವಾಳ ಮಾಡಿಕೊಳ್ಳಲು ಹೊರಟಿದೆ.</p><p>ಎಚ್ಪಿಸಿಎ ಕ್ರೀಡಾಂಗಣವು ಈ ಋತುವಿನಲ್ಲಿ ಬ್ಯಾಟರ್ಗಳ ಪಾಲಿಗೆ ಸ್ವರ್ಗವಾಗಿದೆ. ಆರು ಪಂದ್ಯಗಳ ಪೈಕಿ ಐದು ಬಾರಿ ತಂಡಗಳು 200ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿವೆ. ಕನಿಷ್ಠ ಮೊತ್ತ 8 ವಿಕೆಟ್ಗೆ 199. ಹೀಗಾಗಿ ಮಂಗಳವಾರದ ಪಂದ್ಯದಲ್ಲಿಯೂ ರನ್ಹೊಳೆ ಹರಿಯುವ ನಿರೀಕ್ಷೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಶಾಲಾ:</strong> ಇಲ್ಲಿನ ರಮಣೀಯ ಕ್ರೀಡಾಂಗಣದ ಸುತ್ತಲಿನ ಹಿಮಾಲಯದ ಪರ್ವತಶ್ರೇಣಿಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗಲೆಲ್ಲ ಅದು ಹೊಂಬಣ್ಣದಿಂದ ಹೊಳೆಯುತ್ತದೆ. ಅಂತಹದ್ದೇ ಬಣ್ಣದ ಟ್ರೋಫಿಯನ್ನು ಎತ್ತಿಹಿಡಿಯುವ ಮೊದಲ ಹೆಜ್ಜೆಯಾಗಿ ಮಂಗಳವಾರ ಇಲ್ಲಿ ನಡೆಯಲಿರುವ ಕ್ವಾಲಿಫಯರ್–1ರಲ್ಲಿ ಗೆದ್ದು ಫೈನಲ್ ತಲುಪಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಹವಣಿಸುತ್ತಿವೆ.</p><p>ಆರ್ಸಿಬಿ, ಟೈಟನ್ಸ್– ಈ ಎರಡೂ ತಂಡಗಳು ಅಗ್ರ ಸರದಿಯಲ್ಲಿ ಬಲಿಷ್ಠ ಬ್ಯಾಟಿಂಗ್, ಆಕ್ರಮಣಕಾರಿ ಬೌಲಿಂಗ್, ಒತ್ತಡದ ಸನ್ನಿವೇಶದಲ್ಲಿ ಸಂಯಮದಿಂದ ಆಡಿ ಪಂದ್ಯದ ಗತಿಯನ್ನು ಬದಲಾಯಿಸುವ ಛಾತಿ, ತಂತ್ರಗಾರಿಕೆಯನ್ನು ತೋರಿವೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು (ತಲಾ 18 ಪಾಯಿಂಟ್ಸ್) ಪಡೆದಿವೆ. ಇದರಿಂದಾಗಿ ಈ ತಂಡಗಳಿಗೆ ಫೈನಲ್ ತಲುಪಲು ಎರಡು ಯತ್ನದ ಅವಕಾಶವೂ ದೊರೆತಿದೆ.</p><p>ಹಾಲಿ ಚಾಂಪಿಯನ್, ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡವು ಆರಂಭದಿಂದಲೇ ದೃಢಚಿತ್ತದಿಂದ ಆಡಿತು. ಹೋದ ವರ್ಷದ ಜೂನ್ 3ರಂದು ಹೊನಲು ಬೆಳಕಿನಲ್ಲಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಅಭಿಮಾನಿಗಳಿಗೆ ಉಣಬಡಿಸಿದ ಆಟವನ್ನು ಈ ವರ್ಷವೂ ಮುಂದುವರಿಸಿತು.</p><p>ತಮ್ಮ ಉತ್ತುಂಗದ ದಿನಗಳಲ್ಲಿ ಆಡುತ್ತಿದ್ದ ರೀತಿಯಲ್ಲೇ ಬ್ಯಾಟಿಂಗ್ ಮಾಡುತ್ತಿರುವ, ಮಿಂಚಿನ ಓಟ, ಚುರುಕಿನ ಫೀಲ್ಡಿಂಗ್ನಿಂದ ಯುವ ಆಟಗಾರರಿಗೆ ಮಾದರಿಯಾಗಿರುವ ವಿರಾಟ್ ಕೊಹ್ಲಿ ಅವರು ತಂಡದ ಪರ ಹೆಚ್ಚು ರನ್ (557) ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ, 4 ಅರ್ಧಶತಕಗಳಿವೆ. 37 ವರ್ಷ ವಯಸ್ಸಿನ ಕೊಹ್ಲಿ ಅಕ್ರಮಣ ಮತ್ತು ಸಂಯಮದ ಹದವಾದ ಮಿಶ್ರಣದಂತಿದ್ದಾರೆ. ತಂಡಕ್ಕೆ ಉತ್ತಮ ಬುನಾದಿ ಹಾಕುತ್ತಿದ್ದಾರೆ. ‘ಚೇಸಿಂಗ್ ಮಾಸ್ಟರ್’ ಖ್ಯಾತಿಗೆ ತಕ್ಕಂತೆ ಆಡಿದ್ದಾರೆ.</p><p>ಫಿಲ್ ಸಾಲ್ಟ್ ಬೆರಳಿನ ಗಾಯದಿಂದ ಪೂರ್ಣವಾಗಿ ಗುಣಮುಖರಾಗದ ಕಾರಣ ಆಡುವ 11ರ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ. ಹೀಗಾಗಿ ವೆಂಕಟೇಶ ಅಯ್ಯರ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ರಜತ್ ನೇರವಾಗಿ ಏನೂ ಹೇಳಲಿಲ್ಲ. ಆಡುವ 11ರ ತಂಡವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದರು.</p><p>ಮಧ್ಯಮ ಕ್ರಮಾಂಕದಲ್ಲಿ ದೇವದತ್ತ ಪಡಿಕ್ಕಲ್ (433), ರಜತ್ ಪಾಟೀದಾರ್ (393) ಅವರೂ ಉಪಯುಕ್ತ ಕೊಡುಗೆ ನೀಡಿದ್ದಾರೆ. ನೀಳಕಾಯದ ಟಿಮ್ ಡೇವಿಡ್ ಫಿನಿಷರ್ ಆಗಿ ಆಟದ ಮಟ್ಟ ಎತ್ತರಿಸಿದ್ದಾರೆ. ಅಪರೂಪಕ್ಕೆ ಅಗ್ರ ಕ್ರಮಾಂಕ ವಿಫಲವಾದಾಗ ಕೃಣಾಲ್ ಪಾಂಡ್ಯ ನೆರವಿಗೆ ಬಂದಿದ್ದಾರೆ. ಅಷ್ಟೇ ಅಲ್ಲ, ಮುಂಬೈ ಇಂಡಿಯನ್ಸ್ ವಿರುದ್ಧ ಅಂತಿಮ ಓವರಿನಲ್ಲಿ ಭುವನೇಶ್ವರ್ ಕುಮಾರ್ ಹೊಡೆದ ಸಿಕ್ಸರ್ ಮರೆಯುವಂತಿಲ್ಲ.</p><p>ವಾಸ್ತವದಲ್ಲಿ, 36 ವರ್ಷ ವಯಸ್ಸಿನ ಭುವನೇಶ್ವರ್ ಅವರು ಈ ಋತುವಿನಲ್ಲಿ 24 ವಿಕೆಟ್ಗಳನ್ನು ಕಬಳಿಸಿ ಆರ್ಸಿಬಿಯ ‘ಅತಿ ಮೌಲ್ಯಯುತ ಆಟಗಾರ’ ಎನಿಸಿದ್ದಾರೆ. ಎದುರಾಳಿ ತಂಡಗಳ ಅಗ್ರ ಕ್ರಮಾಂಕಕ್ಕೆ ಸಿಂಹಸ್ವಪ್ನವಾಗಿದ್ದಾರೆ. ಸರಳ ಆದರೆ ಪರಿಣಾಮಕಾರಿ ದಾಳಿಯಿಂದ ಬ್ಯಾಟರ್ಗಳನ್ನು ಕಂಗೆಡಿಸಿದ್ದಾರೆ. ಅವರಿಗೆ ಜೋಶ್ ಹೇಝಲ್ವುಡ್ ಉತ್ತಮ ಬೆಂಬಲ ನೀಡಿ ದ್ದಾರೆ. ಪವರ್ಪ್ಲೇ ಅವಧಿಯಲ್ಲಿ ಇವರಿಬ್ಬರು ಎದುರಾಳಿಗಳನ್ನು ಕಟ್ಟಿಹಾಕಿದ್ದಾರೆ. ಅನುಭವಿ ಸ್ಪಿನ್ನರ್ ಕೃಣಾಲ್ ಪಾಂಡ್ಯ ದಾಳಿಗೆ ಬಲ ನೀಡಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಬೌಲಿಂಗ್ ವಿಭಾಗ ಆರ್ಸಿಬಿಯ ದೌರ್ಬಲ್ಯವಾಗಿತ್ತು.</p><p><strong>ಕಡೆಗಣಿಸಲಾಗದ ಟೈಟನ್ಸ್: </strong>ಟೈಟನ್ಸ್ ಸಹ ಇಂಥದ್ದೇ ಬಲ ಹೊಂದಿದೆ. ಅಗ್ರ ಸರದಿಯಲ್ಲಿ ಸಾಯಿ ಸುದರ್ಶನ್ ಅವರ ಅಮೋಘ ಆಟ ಈ ಋತುವಿನಲ್ಲೂ ಮುಂದುವರಿದಿದೆ. ಅವರು 638 ರನ್ ಕಲೆಹಾಕಿದರೆ, ಅವರ ಜೊತೆ ಇನಿಂಗ್ಸ್ ಆರಂಭಿಸುತ್ತಿರುವ ನಾಯಕ ಶುಭಮನ್ ಗಿಲ್ (616) ಕಾಣಿಕೆ ಕಮ್ಮಿಯೇನಿಲ್ಲ. ಆರಂಭದಲ್ಲಿ ಸ್ವಲ್ಪ ನಿಧಾನ ಎನಿಸಿದರೂ ನಂತರ ಆಕ್ರಮಣಕಾರಿಯಾಗಿ ಆಡಿ ರನ್ವೇಗ ಹೆಚ್ಚಿಸಬಲ್ಲರು. ಮೂರನೇ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಅವರೂ ಬೀಸಾಟವಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.</p><p>ಬೌಲಿಂಗ್ ವಿಭಾಗದಲ್ಲಿ ಟೈಟನ್ಸ್ ತಂಡದ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಕಗಿಸೊ ರಬಾಡ (24 ವಿಕೆಟ್), ಮೊಹಮ್ಮದ್ ಸಿರಾಜ್ (17) ಮತ್ತು ಪ್ರಸಿದ್ಧ ಕೃಷ್ಣ (14) ಅವರು ಛಾಪು ಮೂಡಿಸಿದ್ದಾರೆ. ಅನುಭವಿ ಸ್ಪಿನ್ನರ್ ರಶೀದ್ ಖಾನ್ (19) ತಡವಾಗಿ ಮೋಡಿ ಕಂಡುಕೊಂಡಿದ್ದಾರೆ. ‘ಫಾರ್ಮ್ ಅಲ್ಪಕಾಲದ್ದು, ‘ಕ್ಲಾಸ್’ ದೀರ್ಘಕಾಲದ್ದು’ ಎಂಬುದಕ್ಕೆ ಅನ್ವರ್ಥವಾಗಿದ್ದಾರೆ. ಜೇಸನ್ ಹೋಲ್ಡರ್ ಎರಡೂ ವಿಭಾಗಗಳಲ್ಲಿ ಉಪಯುಕ್ತ ಆಟಗಾರ. ಆದರೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್ಗಳ ಲಯ ಸ್ಥಿರವಾಗಿಲ್ಲ. ಅಗ್ರ ಸರದಿ ಕೈಕೊಟ್ಟಲ್ಲಿ ತಂಡ ತೊಂದರೆಗೆ ಸಿಲುಕಿದ ನಿದರ್ಶನಗಳಿವೆ. ಇದೇ ಅಂಶವನ್ನು ಆರ್ಸಿಬಿ ಬಂಡವಾಳ ಮಾಡಿಕೊಳ್ಳಲು ಹೊರಟಿದೆ.</p><p>ಎಚ್ಪಿಸಿಎ ಕ್ರೀಡಾಂಗಣವು ಈ ಋತುವಿನಲ್ಲಿ ಬ್ಯಾಟರ್ಗಳ ಪಾಲಿಗೆ ಸ್ವರ್ಗವಾಗಿದೆ. ಆರು ಪಂದ್ಯಗಳ ಪೈಕಿ ಐದು ಬಾರಿ ತಂಡಗಳು 200ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿವೆ. ಕನಿಷ್ಠ ಮೊತ್ತ 8 ವಿಕೆಟ್ಗೆ 199. ಹೀಗಾಗಿ ಮಂಗಳವಾರದ ಪಂದ್ಯದಲ್ಲಿಯೂ ರನ್ಹೊಳೆ ಹರಿಯುವ ನಿರೀಕ್ಷೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>