’ಈಗಾಗಲೇ ಹತ್ತು ರಾಜ್ಯ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಜೀವ ಸುರಕ್ಷಾ ವಲಯವನ್ನು ನಿರ್ವಹಿಸಿಕೊಂಡು, ಎರಡು ವಾರಗಳ ಅವಧಿಯಲ್ಲಿ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ಆಯೋಜಿಸಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ. ಅದು ಮುಗಿದ ಕೂಡಲೇ ರಣಜಿ ಟ್ರೋಫಿ ಟೂರ್ನಿಗೆ ಚಾಲನೆ ನೀಡಬಹುದಾಗಿದೆ. ಹತ್ತರಲ್ಲಿ ಆರು ಸಂಸ್ಥೆಗಳಾದರೂ ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿದೆ‘ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯೊಂದರ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.