<p>ಶನಿವಾರ ಸಂಜೆಯ ಸೂರ್ಯ ಪಡುವಣದಲ್ಲಿ ಮರೆಯಾದ ನಂತರ ಚಿನ್ನಸ್ವಾಮಿ ಅಂಗಳದಲ್ಲಿ ಬೆಳಗುವ ಹೊನಲು ಬೆಳಕಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಅಧ್ಯಾಯ ಆರಂಭವಾಗಲಿದೆ. ಉದ್ಯಾನನಗರಿಯ ಕ್ರಿಕೆಟ್ ಚರಿತ್ರೆಯ ಪುಸ್ತಕದಲ್ಲಿ ಮತ್ತೊಂದು ಪುಟ ಸೇರ್ಪಡೆಗೊಳ್ಳಲಿದೆ. </p>.<p>ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ 19ನೇಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಸತತ 18 ಆವೃತ್ತಿಗಳಲ್ಲಿ ‘ಈ ಸಲ ಕಪ್ ನಮ್ದೇ’ ಎಂಬ ಕನಸಿನೊಂದಿಗೆ ಕಣಕ್ಕಿಳಿಯುತ್ತಿದ್ದ ಆರ್ಸಿಬಿ ಈ ಬಾರಿ ‘ಹಾಲಿ ಚಾಂಪಿಯನ್’ ಆಗಿ ಅಭಿಯಾನ ಆರಂಭಿಸಲಿದೆ. ರಜತ್ ಪಾಟೀದಾರ್ ನಾಯಕತ್ವ ವಹಿಸಿಕೊಂಡ ಮೊದಲ ವರ್ಷವೇ ಆರ್ಸಿಬಿ ಚಾಂಪಿಯನ್ ಆಗಿದ್ದು ವಿಶೇಷ.</p>.<p>ಹೋದ ವರ್ಷ ಸಾಬರಮತಿ ನದಿ ದಡದ ಅಹಮದಾಬಾದಿನಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ನಲ್ಲಿ ಆರ್ಸಿಬಿ ಗೆದ್ದಾಗ ‘ಸಿಲಿಕಾನ್ ಸಿಟಿ’ಯ ಬೀದಿಬೀದಿಗಳಲ್ಲಿ ಸಂಭ್ರಮ ಸುನಾಮಿಯಾಗಿತ್ತು. ಬೆಳಗಿನ ಜಾವದವರೆಗೂ ಜನರು ರಸ್ತೆಗಿಳಿದು ಕುಣಿದು ಕುಪ್ಪಳಿಸಿದ್ದರು. ಆದರೆ ಮರುದಿನ (ಜೂನ್ 4) ಮಧ್ಯಾಹ್ನ ಆರ್ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ಅಸುನೀಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಐತಿಹಾಸಿಕ ಕ್ರೀಡಾಂಗಣದಲ್ಲಿ ಒಂದೂ ಮಹತ್ವದ ಪಂದ್ಯ ನಡೆಯಲಿಲ್ಲ. ಇದೀಗ ಮತ್ತೆ ಈ ಅಂಗಳಕ್ಕೆ ಕ್ರಿಕೆಟ್ ಮರಳುತ್ತಿದೆ. ಸೋಲು–ಗೆಲುವಿನ ಲೆಕ್ಕಾಚಾರಗಳು ಗರಿಗೆದರಿವೆ. </p>.<p><strong>ವಿರಾಟ್ ಟಿ20 ಆಟದ ಗಮ್ಮತ್ತು</strong></p>.<p>ಬೆಂಗಳೂರು ಅಭಿಮಾನಿಗಳ ‘ಕಣ್ಮಣಿ‘ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಿಂದ ನಿವೃತ್ತರಾಗಿದ್ದಾರೆ. ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಚುಟುಕು ಮಾದರಿಯಲ್ಲಿಯೂ ಅವರ ಸಾಧನೆಗಳು ಹಲವಾರು. ಅದರಲ್ಲೂ ಐಪಿಎಲ್ನಲ್ಲಿ ಅವರದ್ದು ದಣಿವರಿಯದ ಓಟ. ಟಿ20 ಮಾದರಿಯಲ್ಲಿ ಕಲಾತ್ಮಕತೆ ಹಾಗೂ ಅಬ್ಬರ ಎರಡನ್ನೂ ಮೇಳೈಸಿದ ಬ್ಯಾಟಿಂಗ್ ಮಾಡುವ ಅವರ ಛಲಗಾರಿಕೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. </p>.<p>ಹೋದ ಬಾರಿ ಅವರು ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಆ ಟೂರ್ನಿಯ ಕೊನೆಯ ಪಂದ್ಯದಲ್ಲಿ (ಲಖನೌನಲ್ಲಿ ನಡೆದಿತ್ತು) ಸನ್ರೈಸರ್ಸ್ ತಂಡವು ಇಶಾನ್ (94; 48ಎಸೆತ) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ 231 ರನ್ಗಳ ಗುರಿಯೊಡ್ಡಿತ್ತು. ಆದರೆ, ವಿರಾಟ್ (43; 25ಎ) ಮತ್ತು ಫಿಲ್ ಸಾಲ್ಟ್ (62; 32ಎ) ಅಬ್ಬರದ ಆರಂಭ ನೀಡಿದ್ದರು. ತಂಡವು ಜಯಭೇರಿ ಬಾರಿಸಿತ್ತು. </p>.<p>ಈ ಬಾರಿಯ ದೇಶಿ ಟೂರ್ನಿಗಳಲ್ಲಿ ಅಮೋಘ ಆಟವಾಡಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್, ಬೀಸು ಹೊಡೆತಗಳ ಸರದಾರ ಟಿಮ್ ಡೇವಿಡ್, ‘ಫಿನಿಷರ್’ ಜಿತೇಶ್ ಶರ್ಮಾ ಮತ್ತು ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರು ತಂಡದ ಶಕ್ತಿಯಾಗಿದ್ದಾರೆ. ಆದರೆ ಬೌಲಿಂಗ್ನಲ್ಲಿ ಸ್ವಲ್ಪ ಚಿಂತೆ ಇದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಗಾಯದಿಂದ ದೀರ್ಘ ಕಾಲ ಕ್ರಿಕೆಟ್ನಿಂದ ದೂರವಿದ್ದರು. ಈಗಲೂ ಪೂರ್ಣ ಫಿಟ್ ಆಗಿರುವುದು ಖಚಿತವಿಲ್ಲ. ಎಡಗೈ ವೇಗಿ ಯಶ್ ದಯಾಳ್ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಹೊಸ ಹುಡುಗ ಮಂಗೇಶ್ ಯಾದವ್ ಅವರು ಅನುಭವಿ ಭುವನೇಶ್ವರ್ ಕುಮಾರ್ ಅವರೊಂದಿಗೆ ಬೌಲಿಂಗ್ ಹೊಣೆ ಹೊರಲು ಸಿದ್ಧರಾಗಿದ್ಧಾರೆ. ವಿಂಡೀಸ್ ಆಟಗಾರ ರೊಮೆರಿಯೊ ಶೆಫರ್ಡ್ ಅವರ ಮೇಲೆ ಜವಾಬ್ದಾರಿ ಇದೆ. </p>.<p>ಈ ಸಲ ಮಿನಿ ಹರಾಜಿನಲ್ಲಿ ಭಾರಿ ಮೊತ್ತ ಪಡೆದು ಆರ್ಸಿಬಿಗೆ ಬಂದಿರುವ ವೆಂಕಟೇಶ್ ಅಯ್ಯರ್ ಅವರ ಮೇಲೆ ನಿರೀಕ್ಷೆಯ ಭಾರ ಇದೆ. </p>.<p><strong>ರನ್ಗಳ ಹೊಳೆ ಹರಿಯುವುದೇ?</strong></p>.<p>ಸನ್ರೈಸರ್ಸ್ ಹೈದರಾಬಾದ್ ತಂಡವು ಕಳೆದ ಎರಡು ಋತುಗಳಿಂದ 250ಕ್ಕಿಂತ ಹೆಚ್ಚು ರನ್ಗಳ ಮೊತ್ತಗಳನ್ನು ಗಳಿಸುವುದನ್ನು ಹವ್ಯಾಸ ಮಾಡಿಕೊಂಡಿದೆ. 2024ರಲ್ಲಿ ಬೆಂಗಳೂರಿನಲ್ಲಿಯೇ 287 ರನ್ ಚಚ್ಚಿದ್ದ ತಂಡ ಇದು. ಈ ಸಲ ಟಿ20 ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 300 ರನ್ಗಳಿಗಿಂತ ಹೆಚ್ಚಿನ ಮೊತ್ತ ಪೇರಿಸುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. </p>.<p>ಅದಕ್ಕೆ ತಕ್ಕಂತೆ ತಂಡದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರು ಅಮೋಘ ಲಯದಲ್ಲಿದ್ದಾರೆ. ಈಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಶಾನ್ ಅವರ ಬೀಸಾಟ ರಂಗೇರಿತ್ತು. ಅಭಿಷೇಕ್ ಹೆಚ್ಚು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಫೈನಲ್ನಲ್ಲಿ ಅರ್ಧಶತಕ ಹೊಡೆದು ಮಿಂಚಿದ್ದರು. ಅವರೊಂದಿಗೆ ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಬ್ಯಾಟ್ ಬೀಸಲು ಸಿದ್ಧರಾಗಿದ್ದಾರೆ. ಆದರೆ ವೇಗಿ ಪ್ಯಾಟ್ ಕಮಿನ್ಸ್ ಫಿಟ್ ಆಗಿಲ್ಲ. ಆರ್ಸಿಬಿಯ ಮಾಜಿ ಆಟಗಾರ ಹರ್ಷಲ್ ಪಟೇಲ್ ಅವರು ಹೈದರಾಬಾದ್ ಬೌಲಿಂಗ್ ಸಾರಥ್ಯ ವಹಿಸಲಿದ್ದಾರೆ. ಒಟ್ಟಾರೆ ಉಭಯ ತಂಡಗಳೂ ಬ್ಯಾಟರ್ಗಳ ಭರಾಟೆಯ ಮೇಲೆ ಅವಲಂಬಿತವಾಗಿರುವುದ ಸ್ಪಷ್ಟವಾಗಿದೆ. ಆದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್, ಬೌಂಡರಿಗಳ ಮಳೆ ಸುರಿದರೆ ಅಚ್ಚರಿಯೇನಿಲ್ಲ. </p>.<h2>ತಂಡಗಳು</h2><p><strong>ರಾಯಲ್ ಚಾಲೆಂಜರ್ಸ್ ಬೆಂಗಳೂರು:</strong> ರಜತ್ ಪಾಟೀದಾರ್ (ನಾಯಕ), ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ಕೀಪರ್), ಕೃಣಾಲ್ ಪಾಂಡ್ಯ, ರೊಮೆರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೇಕಬ್ ಡಫಿ, ಜೋಶ್ ಹೇಜಲ್ವುಡ್, ರಸಿಕ್ ಸಲೀಮ್ ದಾರ್, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರಾ, ವಿಕಿ ಓಸ್ವಾಲ್, ಅಭಿನಂದನ್ ಸಿಂಗ್, ಜೇಕಬ್ ಬೇಥೆಲ್, ಜೋರ್ಡಾನ್ ಕಾಕ್ಸ್, ಸ್ವಪ್ನಿಲ್ ಸಿಂಗ್, ಕನಿಷ್ಕ ಚೌಹಾಣ್, ಸಾತ್ವಿಕ್ ದೇಸ್ವಾಲ್.</p><p><strong>ಸನ್ರೈಸರ್ಸ್ ಹೈದರಾಬಾದ್:</strong> ಇಶಾನ್ ಕಿಶನ್ (ನಾಯಕ/ವಿಕೆಟ್ಕೀಪರ್), ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಲಿಯಾಮ್ ಲಿವಿಂಗ್ಸ್ಟೋನ್, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಹರ್ಷ್ ದುಬೆ, ಇಶಾನ್ ಮಾಲಿಂಗ, ಶಿವಂ ಮಾವಿ, ಸ್ಮರಣ್ ರವಿಚಂದ್ರನ್, ಝೀಷನ್ ಅನ್ಸಾರಿ, ಸಲೀಲ್ ಅರೋರಾ, ಕಮಿಂದು ಮೆಂಡಿಸ್, ಬ್ರೈಡನ್ ಕಾರ್ಸ್, ಡೇವಿಡ್ ಪೈನ್, ಪ್ರಫುಲ್ ಹಿಂಗೆ, ಸಕೀಬ್ ಹುಸೇನ್, ಕ್ರೇನ್ಸ್ ಫುಲೆಟ್ರಾ, ಅಮಿತ್ ಕುಮಾರ್.</p>.<h2>ಖಾಕಿ, ಖಾದಿಧಾರಿಗಳ ಓಡಾಟದ ಭರಾಟೆ</h2><p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ಟಿಕೆಟ್ ಖರೀದಿಗಾಗಿ ಜನರು ಮತ್ತು ಕೆಎಸ್ಸಿಎ ಸದಸ್ಯರ ಓಡಾಟ ಸರ್ವೇಸಾಮಾನ್ಯವಾಗಿರುತ್ತಿತ್ತು. ಆದರೆ ಈ ಸಲ ವಿಭಿನ್ನವಾಗಿದೆ. </p><p>ಪಂದ್ಯದ ಟಿಕೆಟ್ ಮಾರಾಟವನ್ನು ಆನ್ಲೈನ್ ಮೂಲಕ ಮಾಡಲಾಗುತ್ತಿದೆ. ಆದ್ದರಿಂದ ಜನರ ಓಡಾಟದ ಭರಾಟೆ ಅಷ್ಟಾಗಿ ಕಾಣುತ್ತಿಲ್ಲ. ಆದರೆ, ಕ್ರೀಡಾಂಗಣದಲ್ಲಿ ಎಲ್ಲೆಲ್ಲೂ ಪೊಲೀಸರು ಮತ್ತು ರಾಜಕಾರಣಿಗಳ ಆಪ್ತರು ಮತ್ತು ಅವರ ಕುಟುಂಬದ ಸದಸ್ಯರ ಓಡಾಟ ಜೋರಾಗಿದೆ. </p><p>ಹೋದ ವರ್ಷದ ಕಾಲ್ತುಳಿತ ಪ್ರಕರಣದ ನಂತರ ಕ್ರೀಡಾಂಗಣದಲ್ಲಿ ಹಲವು ನವೀಕರಣ ಕಾರ್ಯಗಳು ಆಗಿವೆ. ಭದ್ರತಾ ವ್ಯವಸ್ಥೆಗಳೂ ಉನ್ನತ ದರ್ಜೆಗೇರಿವೆ. ಶುಕ್ರವಾರ ಸಂಜೆ ಪೊಲೀಸರು, ಗೃಹರಕ್ಷಕದ ದಳ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಖಾಸಗಿ ರಕ್ಷಣಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ನಡುವೆ ಉಭಯ ತಂಡಗಳ ಅಭ್ಯಾಸವನ್ನು ನೋಡಲು ಕೆಲವರು ರಾಜಕೀಯ ಧುರೀಣರ ಹೆಸರು ಹೇಳಿಕೊಂಡು ಮೈದಾನ ಪ್ರವೇಶಿಸುವ ಪ್ರಯತ್ನ ಮಾಡಿದರು. ತಡೆಯಲು ಯತ್ನಿಸಿದ ಪೊಲೀಸರು, ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದ ದೃಶ್ಯಗಳೂ ಕಂಡುಬಂದವು. </p>.<h2>ಫಿಟ್ನೆಸ್ ಪರೀಕ್ಷೆಯಲ್ಲಿ ತುಷಾರ ವಿಫಲ</h2><p>ಬೆಂಗಳೂರು (ಪಿಟಿಐ): ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ ಐಪಿಎಲ್ನ ಉದ್ಘಾಟನಾ ಪಂದ್ಯಕ್ಕೆ ಮೊದಲೇ ಮತ್ತೊಂದು ಹಿನ್ನಡೆ ಕಂಡಿತು. ಶ್ರೀಲಂಕಾದ ವೇಗದ ನುವಾನ್ ತುಷಾರ ಫಿಟ್ನೆಸ್ ಕಾರಣದಿಂದ ಆರಂಭದ ಹಂತದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ.</p><p>ಶ್ರೀಲಂಕಾ ಕ್ರಿಕೆಟ್ (ಎಸ್ಎಸ್ಸಿ)ನ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ತೇರ್ಗಡೆಗೊಂಡಿಲ್ಲ. ಅವರಿಗೆ ಕ್ರಿಕೆಟ್ ಮಂಡಳಿ ನಿರಾಕ್ಷೇಪಣಾ ಪತ್ರ ನೀಡಿಲ್ಲ. ತುಷಾರ ಅವರು 29 ಪಾಯಿಂಟ್ಗಳಲ್ಲಿ ಕನಿಷ್ಠ 17 ಗಳಿಸಲು ವಿಫಲರಾಗಿದ್ದಾರೆ ಎಂದು ಇಎಸ್ಪಿಎನ್–ಕ್ರಿಕ್ಇನ್ಫೋ ವರದಿ ತಿಳಿಸಿದೆ.</p><p>ಈ ಹಿಂದಿನ ಆವೃತ್ತಿಯಲ್ಲಿ ಅವರು ಒಂದು ಪಂದ್ಯ ಮಾತ್ರ ಆಡಿದರು. ಎಲ್ಎಸ್ಜಿ ವಿರುದ್ಧ ಪಂದ್ಯದಲ್ಲಿ 4 ಓವರುಗಳಲ್ಲಿ 26 ರನ್ನಿಗೆ 1 ವಿಕೆಟ್ ಪಡೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶನಿವಾರ ಸಂಜೆಯ ಸೂರ್ಯ ಪಡುವಣದಲ್ಲಿ ಮರೆಯಾದ ನಂತರ ಚಿನ್ನಸ್ವಾಮಿ ಅಂಗಳದಲ್ಲಿ ಬೆಳಗುವ ಹೊನಲು ಬೆಳಕಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಅಧ್ಯಾಯ ಆರಂಭವಾಗಲಿದೆ. ಉದ್ಯಾನನಗರಿಯ ಕ್ರಿಕೆಟ್ ಚರಿತ್ರೆಯ ಪುಸ್ತಕದಲ್ಲಿ ಮತ್ತೊಂದು ಪುಟ ಸೇರ್ಪಡೆಗೊಳ್ಳಲಿದೆ. </p>.<p>ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ 19ನೇಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಸತತ 18 ಆವೃತ್ತಿಗಳಲ್ಲಿ ‘ಈ ಸಲ ಕಪ್ ನಮ್ದೇ’ ಎಂಬ ಕನಸಿನೊಂದಿಗೆ ಕಣಕ್ಕಿಳಿಯುತ್ತಿದ್ದ ಆರ್ಸಿಬಿ ಈ ಬಾರಿ ‘ಹಾಲಿ ಚಾಂಪಿಯನ್’ ಆಗಿ ಅಭಿಯಾನ ಆರಂಭಿಸಲಿದೆ. ರಜತ್ ಪಾಟೀದಾರ್ ನಾಯಕತ್ವ ವಹಿಸಿಕೊಂಡ ಮೊದಲ ವರ್ಷವೇ ಆರ್ಸಿಬಿ ಚಾಂಪಿಯನ್ ಆಗಿದ್ದು ವಿಶೇಷ.</p>.<p>ಹೋದ ವರ್ಷ ಸಾಬರಮತಿ ನದಿ ದಡದ ಅಹಮದಾಬಾದಿನಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ನಲ್ಲಿ ಆರ್ಸಿಬಿ ಗೆದ್ದಾಗ ‘ಸಿಲಿಕಾನ್ ಸಿಟಿ’ಯ ಬೀದಿಬೀದಿಗಳಲ್ಲಿ ಸಂಭ್ರಮ ಸುನಾಮಿಯಾಗಿತ್ತು. ಬೆಳಗಿನ ಜಾವದವರೆಗೂ ಜನರು ರಸ್ತೆಗಿಳಿದು ಕುಣಿದು ಕುಪ್ಪಳಿಸಿದ್ದರು. ಆದರೆ ಮರುದಿನ (ಜೂನ್ 4) ಮಧ್ಯಾಹ್ನ ಆರ್ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ಅಸುನೀಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಐತಿಹಾಸಿಕ ಕ್ರೀಡಾಂಗಣದಲ್ಲಿ ಒಂದೂ ಮಹತ್ವದ ಪಂದ್ಯ ನಡೆಯಲಿಲ್ಲ. ಇದೀಗ ಮತ್ತೆ ಈ ಅಂಗಳಕ್ಕೆ ಕ್ರಿಕೆಟ್ ಮರಳುತ್ತಿದೆ. ಸೋಲು–ಗೆಲುವಿನ ಲೆಕ್ಕಾಚಾರಗಳು ಗರಿಗೆದರಿವೆ. </p>.<p><strong>ವಿರಾಟ್ ಟಿ20 ಆಟದ ಗಮ್ಮತ್ತು</strong></p>.<p>ಬೆಂಗಳೂರು ಅಭಿಮಾನಿಗಳ ‘ಕಣ್ಮಣಿ‘ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಿಂದ ನಿವೃತ್ತರಾಗಿದ್ದಾರೆ. ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಚುಟುಕು ಮಾದರಿಯಲ್ಲಿಯೂ ಅವರ ಸಾಧನೆಗಳು ಹಲವಾರು. ಅದರಲ್ಲೂ ಐಪಿಎಲ್ನಲ್ಲಿ ಅವರದ್ದು ದಣಿವರಿಯದ ಓಟ. ಟಿ20 ಮಾದರಿಯಲ್ಲಿ ಕಲಾತ್ಮಕತೆ ಹಾಗೂ ಅಬ್ಬರ ಎರಡನ್ನೂ ಮೇಳೈಸಿದ ಬ್ಯಾಟಿಂಗ್ ಮಾಡುವ ಅವರ ಛಲಗಾರಿಕೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. </p>.<p>ಹೋದ ಬಾರಿ ಅವರು ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಆ ಟೂರ್ನಿಯ ಕೊನೆಯ ಪಂದ್ಯದಲ್ಲಿ (ಲಖನೌನಲ್ಲಿ ನಡೆದಿತ್ತು) ಸನ್ರೈಸರ್ಸ್ ತಂಡವು ಇಶಾನ್ (94; 48ಎಸೆತ) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ 231 ರನ್ಗಳ ಗುರಿಯೊಡ್ಡಿತ್ತು. ಆದರೆ, ವಿರಾಟ್ (43; 25ಎ) ಮತ್ತು ಫಿಲ್ ಸಾಲ್ಟ್ (62; 32ಎ) ಅಬ್ಬರದ ಆರಂಭ ನೀಡಿದ್ದರು. ತಂಡವು ಜಯಭೇರಿ ಬಾರಿಸಿತ್ತು. </p>.<p>ಈ ಬಾರಿಯ ದೇಶಿ ಟೂರ್ನಿಗಳಲ್ಲಿ ಅಮೋಘ ಆಟವಾಡಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್, ಬೀಸು ಹೊಡೆತಗಳ ಸರದಾರ ಟಿಮ್ ಡೇವಿಡ್, ‘ಫಿನಿಷರ್’ ಜಿತೇಶ್ ಶರ್ಮಾ ಮತ್ತು ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರು ತಂಡದ ಶಕ್ತಿಯಾಗಿದ್ದಾರೆ. ಆದರೆ ಬೌಲಿಂಗ್ನಲ್ಲಿ ಸ್ವಲ್ಪ ಚಿಂತೆ ಇದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಗಾಯದಿಂದ ದೀರ್ಘ ಕಾಲ ಕ್ರಿಕೆಟ್ನಿಂದ ದೂರವಿದ್ದರು. ಈಗಲೂ ಪೂರ್ಣ ಫಿಟ್ ಆಗಿರುವುದು ಖಚಿತವಿಲ್ಲ. ಎಡಗೈ ವೇಗಿ ಯಶ್ ದಯಾಳ್ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಹೊಸ ಹುಡುಗ ಮಂಗೇಶ್ ಯಾದವ್ ಅವರು ಅನುಭವಿ ಭುವನೇಶ್ವರ್ ಕುಮಾರ್ ಅವರೊಂದಿಗೆ ಬೌಲಿಂಗ್ ಹೊಣೆ ಹೊರಲು ಸಿದ್ಧರಾಗಿದ್ಧಾರೆ. ವಿಂಡೀಸ್ ಆಟಗಾರ ರೊಮೆರಿಯೊ ಶೆಫರ್ಡ್ ಅವರ ಮೇಲೆ ಜವಾಬ್ದಾರಿ ಇದೆ. </p>.<p>ಈ ಸಲ ಮಿನಿ ಹರಾಜಿನಲ್ಲಿ ಭಾರಿ ಮೊತ್ತ ಪಡೆದು ಆರ್ಸಿಬಿಗೆ ಬಂದಿರುವ ವೆಂಕಟೇಶ್ ಅಯ್ಯರ್ ಅವರ ಮೇಲೆ ನಿರೀಕ್ಷೆಯ ಭಾರ ಇದೆ. </p>.<p><strong>ರನ್ಗಳ ಹೊಳೆ ಹರಿಯುವುದೇ?</strong></p>.<p>ಸನ್ರೈಸರ್ಸ್ ಹೈದರಾಬಾದ್ ತಂಡವು ಕಳೆದ ಎರಡು ಋತುಗಳಿಂದ 250ಕ್ಕಿಂತ ಹೆಚ್ಚು ರನ್ಗಳ ಮೊತ್ತಗಳನ್ನು ಗಳಿಸುವುದನ್ನು ಹವ್ಯಾಸ ಮಾಡಿಕೊಂಡಿದೆ. 2024ರಲ್ಲಿ ಬೆಂಗಳೂರಿನಲ್ಲಿಯೇ 287 ರನ್ ಚಚ್ಚಿದ್ದ ತಂಡ ಇದು. ಈ ಸಲ ಟಿ20 ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 300 ರನ್ಗಳಿಗಿಂತ ಹೆಚ್ಚಿನ ಮೊತ್ತ ಪೇರಿಸುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. </p>.<p>ಅದಕ್ಕೆ ತಕ್ಕಂತೆ ತಂಡದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರು ಅಮೋಘ ಲಯದಲ್ಲಿದ್ದಾರೆ. ಈಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಶಾನ್ ಅವರ ಬೀಸಾಟ ರಂಗೇರಿತ್ತು. ಅಭಿಷೇಕ್ ಹೆಚ್ಚು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಫೈನಲ್ನಲ್ಲಿ ಅರ್ಧಶತಕ ಹೊಡೆದು ಮಿಂಚಿದ್ದರು. ಅವರೊಂದಿಗೆ ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಬ್ಯಾಟ್ ಬೀಸಲು ಸಿದ್ಧರಾಗಿದ್ದಾರೆ. ಆದರೆ ವೇಗಿ ಪ್ಯಾಟ್ ಕಮಿನ್ಸ್ ಫಿಟ್ ಆಗಿಲ್ಲ. ಆರ್ಸಿಬಿಯ ಮಾಜಿ ಆಟಗಾರ ಹರ್ಷಲ್ ಪಟೇಲ್ ಅವರು ಹೈದರಾಬಾದ್ ಬೌಲಿಂಗ್ ಸಾರಥ್ಯ ವಹಿಸಲಿದ್ದಾರೆ. ಒಟ್ಟಾರೆ ಉಭಯ ತಂಡಗಳೂ ಬ್ಯಾಟರ್ಗಳ ಭರಾಟೆಯ ಮೇಲೆ ಅವಲಂಬಿತವಾಗಿರುವುದ ಸ್ಪಷ್ಟವಾಗಿದೆ. ಆದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್, ಬೌಂಡರಿಗಳ ಮಳೆ ಸುರಿದರೆ ಅಚ್ಚರಿಯೇನಿಲ್ಲ. </p>.<h2>ತಂಡಗಳು</h2><p><strong>ರಾಯಲ್ ಚಾಲೆಂಜರ್ಸ್ ಬೆಂಗಳೂರು:</strong> ರಜತ್ ಪಾಟೀದಾರ್ (ನಾಯಕ), ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ಕೀಪರ್), ಕೃಣಾಲ್ ಪಾಂಡ್ಯ, ರೊಮೆರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೇಕಬ್ ಡಫಿ, ಜೋಶ್ ಹೇಜಲ್ವುಡ್, ರಸಿಕ್ ಸಲೀಮ್ ದಾರ್, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರಾ, ವಿಕಿ ಓಸ್ವಾಲ್, ಅಭಿನಂದನ್ ಸಿಂಗ್, ಜೇಕಬ್ ಬೇಥೆಲ್, ಜೋರ್ಡಾನ್ ಕಾಕ್ಸ್, ಸ್ವಪ್ನಿಲ್ ಸಿಂಗ್, ಕನಿಷ್ಕ ಚೌಹಾಣ್, ಸಾತ್ವಿಕ್ ದೇಸ್ವಾಲ್.</p><p><strong>ಸನ್ರೈಸರ್ಸ್ ಹೈದರಾಬಾದ್:</strong> ಇಶಾನ್ ಕಿಶನ್ (ನಾಯಕ/ವಿಕೆಟ್ಕೀಪರ್), ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಲಿಯಾಮ್ ಲಿವಿಂಗ್ಸ್ಟೋನ್, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಹರ್ಷ್ ದುಬೆ, ಇಶಾನ್ ಮಾಲಿಂಗ, ಶಿವಂ ಮಾವಿ, ಸ್ಮರಣ್ ರವಿಚಂದ್ರನ್, ಝೀಷನ್ ಅನ್ಸಾರಿ, ಸಲೀಲ್ ಅರೋರಾ, ಕಮಿಂದು ಮೆಂಡಿಸ್, ಬ್ರೈಡನ್ ಕಾರ್ಸ್, ಡೇವಿಡ್ ಪೈನ್, ಪ್ರಫುಲ್ ಹಿಂಗೆ, ಸಕೀಬ್ ಹುಸೇನ್, ಕ್ರೇನ್ಸ್ ಫುಲೆಟ್ರಾ, ಅಮಿತ್ ಕುಮಾರ್.</p>.<h2>ಖಾಕಿ, ಖಾದಿಧಾರಿಗಳ ಓಡಾಟದ ಭರಾಟೆ</h2><p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ಟಿಕೆಟ್ ಖರೀದಿಗಾಗಿ ಜನರು ಮತ್ತು ಕೆಎಸ್ಸಿಎ ಸದಸ್ಯರ ಓಡಾಟ ಸರ್ವೇಸಾಮಾನ್ಯವಾಗಿರುತ್ತಿತ್ತು. ಆದರೆ ಈ ಸಲ ವಿಭಿನ್ನವಾಗಿದೆ. </p><p>ಪಂದ್ಯದ ಟಿಕೆಟ್ ಮಾರಾಟವನ್ನು ಆನ್ಲೈನ್ ಮೂಲಕ ಮಾಡಲಾಗುತ್ತಿದೆ. ಆದ್ದರಿಂದ ಜನರ ಓಡಾಟದ ಭರಾಟೆ ಅಷ್ಟಾಗಿ ಕಾಣುತ್ತಿಲ್ಲ. ಆದರೆ, ಕ್ರೀಡಾಂಗಣದಲ್ಲಿ ಎಲ್ಲೆಲ್ಲೂ ಪೊಲೀಸರು ಮತ್ತು ರಾಜಕಾರಣಿಗಳ ಆಪ್ತರು ಮತ್ತು ಅವರ ಕುಟುಂಬದ ಸದಸ್ಯರ ಓಡಾಟ ಜೋರಾಗಿದೆ. </p><p>ಹೋದ ವರ್ಷದ ಕಾಲ್ತುಳಿತ ಪ್ರಕರಣದ ನಂತರ ಕ್ರೀಡಾಂಗಣದಲ್ಲಿ ಹಲವು ನವೀಕರಣ ಕಾರ್ಯಗಳು ಆಗಿವೆ. ಭದ್ರತಾ ವ್ಯವಸ್ಥೆಗಳೂ ಉನ್ನತ ದರ್ಜೆಗೇರಿವೆ. ಶುಕ್ರವಾರ ಸಂಜೆ ಪೊಲೀಸರು, ಗೃಹರಕ್ಷಕದ ದಳ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಖಾಸಗಿ ರಕ್ಷಣಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ನಡುವೆ ಉಭಯ ತಂಡಗಳ ಅಭ್ಯಾಸವನ್ನು ನೋಡಲು ಕೆಲವರು ರಾಜಕೀಯ ಧುರೀಣರ ಹೆಸರು ಹೇಳಿಕೊಂಡು ಮೈದಾನ ಪ್ರವೇಶಿಸುವ ಪ್ರಯತ್ನ ಮಾಡಿದರು. ತಡೆಯಲು ಯತ್ನಿಸಿದ ಪೊಲೀಸರು, ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದ ದೃಶ್ಯಗಳೂ ಕಂಡುಬಂದವು. </p>.<h2>ಫಿಟ್ನೆಸ್ ಪರೀಕ್ಷೆಯಲ್ಲಿ ತುಷಾರ ವಿಫಲ</h2><p>ಬೆಂಗಳೂರು (ಪಿಟಿಐ): ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ ಐಪಿಎಲ್ನ ಉದ್ಘಾಟನಾ ಪಂದ್ಯಕ್ಕೆ ಮೊದಲೇ ಮತ್ತೊಂದು ಹಿನ್ನಡೆ ಕಂಡಿತು. ಶ್ರೀಲಂಕಾದ ವೇಗದ ನುವಾನ್ ತುಷಾರ ಫಿಟ್ನೆಸ್ ಕಾರಣದಿಂದ ಆರಂಭದ ಹಂತದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ.</p><p>ಶ್ರೀಲಂಕಾ ಕ್ರಿಕೆಟ್ (ಎಸ್ಎಸ್ಸಿ)ನ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ತೇರ್ಗಡೆಗೊಂಡಿಲ್ಲ. ಅವರಿಗೆ ಕ್ರಿಕೆಟ್ ಮಂಡಳಿ ನಿರಾಕ್ಷೇಪಣಾ ಪತ್ರ ನೀಡಿಲ್ಲ. ತುಷಾರ ಅವರು 29 ಪಾಯಿಂಟ್ಗಳಲ್ಲಿ ಕನಿಷ್ಠ 17 ಗಳಿಸಲು ವಿಫಲರಾಗಿದ್ದಾರೆ ಎಂದು ಇಎಸ್ಪಿಎನ್–ಕ್ರಿಕ್ಇನ್ಫೋ ವರದಿ ತಿಳಿಸಿದೆ.</p><p>ಈ ಹಿಂದಿನ ಆವೃತ್ತಿಯಲ್ಲಿ ಅವರು ಒಂದು ಪಂದ್ಯ ಮಾತ್ರ ಆಡಿದರು. ಎಲ್ಎಸ್ಜಿ ವಿರುದ್ಧ ಪಂದ್ಯದಲ್ಲಿ 4 ಓವರುಗಳಲ್ಲಿ 26 ರನ್ನಿಗೆ 1 ವಿಕೆಟ್ ಪಡೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>