<p><strong>ಕೋಲ್ಕತ್ತ (ಪಿಟಿಐ)</strong>: ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಶನಿವಾರ ಈಡನ್ ಗಾರ್ಡನ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ.</p>.<p>ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತ ತಂಡವು ಈ ಪಂದ್ಯದಲ್ಲಿ ಜಯಿಸಿ ಪ್ಲೇ ಆಫ್ ಪ್ರವೇಶದ ಕನಸು ಜೀವಂತವಾಗಿಟ್ಟುಕೊಳ್ಳುವ ಛಲದಲ್ಲಿದೆ. ಇನ್ನೊಂದೆಡೆ ಶುಭಮನ್ ಗಿಲ್ ನಾಯಕತ್ವದ ಟೈಟನ್ಸ್ ಪಡೆಯುಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಕೊಳ್ಳುವತ್ತ ಚಿತ್ತ ನೆಟ್ಟಿದೆ.</p>.<p>ಹೋದ ವರ್ಷದ ಟೂರ್ನಿಯಲ್ಲಿ ಕೋಲ್ಕತ್ತ ತಂಡವು ಎಂಟನೇ ಸ್ಥಾನ ಪಡೆದಿತ್ತು. ಅದರಿಂದಾಗಿ ರಹಾನೆ ಬಹಳಷ್ಟು ಟೀಕೆಗೊಳಗಾಗಿದ್ದರು. ಆದರೂ ಅವರನ್ನು ಈ ವರ್ಷವೂ ನಾಯಕತ್ವದಲ್ಲಿ ಮುಂದುವರಿಸಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈ ಸಲ ಮೊದಲ ಆರು ಪಂದ್ಯಗಳಲ್ಲಿ ಐದರಲ್ಲಿ ತಂಡವು ಸೋತಿತ್ತು. ಒಂದು ಮಳೆಗೆ ರದ್ದಾಗಿತ್ತು.</p>.<p>ನಂತರ ನಾಲ್ಕು ಪಂದ್ಯ ಗೆದ್ದಿದ್ದ ಅಜಿಂಕ್ಯ ಬಳಗವು ಮೂರು ದಿನಗಳ ಹಿಂದೆ ರಾಯಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋತಿತ್ತು. ಒಟ್ಟು 9 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಅದರಿಂದಾಗಿ ಪ್ಲೇಆಫ್ ಹಾದಿ ಸುಲಭವೇನಿಲ್ಲ. ಉಳಿದಿರುವ ಮೂರು ಪಂದ್ಯಗಳಲ್ಲಿಯೂ ಉತ್ತಮ ರನ್ರೇಟ್ನೊಂದಿಗೆ ಜಯಿಸಬೇಕು. ನಂತರ ಬೇರೆ ತಂಡಗಳ ಗೆಲುವು, ಸೋಲಿನ ಲೆಕ್ಕಾಚಾರ ಮಾಡಬೇಕಿದೆ.</p>.<p>ಗಾಯಗೊಂಡಿರುವ ವರುಣ್ ಚಕ್ರವರ್ತಿ ಅವರು ಆರ್ಸಿಬಿ ಎದುರು ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರು ಮರಳುವುದು ಬಹುತೇಕ ಖಚಿತ ಎಂದು ಕೋಚ್ ಅಭಿಷೇಕ್ ನಾಯರ್ ಹೇಳಿದ್ದಾರೆ. ಅಂಗಕ್ರಿಷ್ ರಘುವಂಶಿ ಬಿಟ್ಟರೆ ಉಳಿದ ಬ್ಯಾಟರ್ಗಳು ಸ್ಥಿರವಾದ ಆಟವಾಡುತ್ತಿಲ್ಲ. ನಾಲ್ಕು ಅರ್ಧಶತಕಗಳೊಂದಿಗೆ 340 ರನ್ ಗಳಿಸಿದ್ದಾರೆ. ರಿಂಕು ಸಿಂಗ್ 286 ರನ್ ಗಳಿಸಿದ್ದಾರೆ.</p>.<p>ಇನ್ನೊಂದೆಡೆ ಗಿಲ್ ಬಳಗವು ಪೂರ್ಣಪ್ರಮಾಣದ ಸಾಮರ್ಥ್ಯದೊಂದಿಗೆ ಸಜ್ಜಾಗಿದೆ. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಜೇಸನ್ ಹೋಲ್ಡರ್ ಅವರು ಸರಿಯಾದ ಸಮಯದಲ್ಲಿ ಲಯಕ್ಕೆ ಮರಳಿದ್ದಾರೆ. ತಂಡಕ್ಕೆ ಉತ್ತಮವಾದ ಕಾಣಿಕೆ ನೀಡುತ್ತಿದ್ದಾರೆ.</p>.<p>ಬ್ಯಾಟಿಂಗ್ನಲ್ಲಿ ಆರಂಭಿಕ ಜೋಡಿ ಗಿಲ್ ಮತ್ತು ಸಾಯಿ ಸುದರ್ಶನ್ ಅವರು ಕೂಡ ಉತ್ತಮ ಲಯದಲ್ಲಿದ್ದಾರೆ. ಸಾಯಿ ಒಂದು ಶತಕ ಹೊಡೆದಿದ್ದಾರೆ. ಜೋಸ್ ಬಟ್ಲರ್, ಅರ್ಷದ್ ಖಾನ್, ವಾಷಿಂಗ್ಟನ್ ಸುಂದರ್, ಸ್ಪಿನ್ನರ್ ರಶೀದ್ ಖಾನ್ ಕೂಡ ತಂಡದ ಜಯದಾಸೆಗೆ ಬಲ ತುಂಬಬಲ್ಲ ಸಮರ್ಥರು.</p>.<p>ಈ ಋತುವಿನಲ್ಲಿ ಈಡನ್ ಗಾರ್ಡನ್ ಪಿಚ್ ಬೌಲರ್ಗಳಿಗೆ ಹೆಚ್ಚು ನೆರವು ನೀಡಿದೆ. ಸ್ಪಿನ್ ಜೋಡಿ ಸುನಿಲ್ ನಾರಾಯಣ್, ವರುಣ್ ಮತ್ತು ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಅವರು ಇಲ್ಲಿ ತಮ್ಮ ಸಾಮರ್ಥ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-51-604149034</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ (ಪಿಟಿಐ)</strong>: ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಶನಿವಾರ ಈಡನ್ ಗಾರ್ಡನ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ.</p>.<p>ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತ ತಂಡವು ಈ ಪಂದ್ಯದಲ್ಲಿ ಜಯಿಸಿ ಪ್ಲೇ ಆಫ್ ಪ್ರವೇಶದ ಕನಸು ಜೀವಂತವಾಗಿಟ್ಟುಕೊಳ್ಳುವ ಛಲದಲ್ಲಿದೆ. ಇನ್ನೊಂದೆಡೆ ಶುಭಮನ್ ಗಿಲ್ ನಾಯಕತ್ವದ ಟೈಟನ್ಸ್ ಪಡೆಯುಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಕೊಳ್ಳುವತ್ತ ಚಿತ್ತ ನೆಟ್ಟಿದೆ.</p>.<p>ಹೋದ ವರ್ಷದ ಟೂರ್ನಿಯಲ್ಲಿ ಕೋಲ್ಕತ್ತ ತಂಡವು ಎಂಟನೇ ಸ್ಥಾನ ಪಡೆದಿತ್ತು. ಅದರಿಂದಾಗಿ ರಹಾನೆ ಬಹಳಷ್ಟು ಟೀಕೆಗೊಳಗಾಗಿದ್ದರು. ಆದರೂ ಅವರನ್ನು ಈ ವರ್ಷವೂ ನಾಯಕತ್ವದಲ್ಲಿ ಮುಂದುವರಿಸಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈ ಸಲ ಮೊದಲ ಆರು ಪಂದ್ಯಗಳಲ್ಲಿ ಐದರಲ್ಲಿ ತಂಡವು ಸೋತಿತ್ತು. ಒಂದು ಮಳೆಗೆ ರದ್ದಾಗಿತ್ತು.</p>.<p>ನಂತರ ನಾಲ್ಕು ಪಂದ್ಯ ಗೆದ್ದಿದ್ದ ಅಜಿಂಕ್ಯ ಬಳಗವು ಮೂರು ದಿನಗಳ ಹಿಂದೆ ರಾಯಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋತಿತ್ತು. ಒಟ್ಟು 9 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಅದರಿಂದಾಗಿ ಪ್ಲೇಆಫ್ ಹಾದಿ ಸುಲಭವೇನಿಲ್ಲ. ಉಳಿದಿರುವ ಮೂರು ಪಂದ್ಯಗಳಲ್ಲಿಯೂ ಉತ್ತಮ ರನ್ರೇಟ್ನೊಂದಿಗೆ ಜಯಿಸಬೇಕು. ನಂತರ ಬೇರೆ ತಂಡಗಳ ಗೆಲುವು, ಸೋಲಿನ ಲೆಕ್ಕಾಚಾರ ಮಾಡಬೇಕಿದೆ.</p>.<p>ಗಾಯಗೊಂಡಿರುವ ವರುಣ್ ಚಕ್ರವರ್ತಿ ಅವರು ಆರ್ಸಿಬಿ ಎದುರು ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರು ಮರಳುವುದು ಬಹುತೇಕ ಖಚಿತ ಎಂದು ಕೋಚ್ ಅಭಿಷೇಕ್ ನಾಯರ್ ಹೇಳಿದ್ದಾರೆ. ಅಂಗಕ್ರಿಷ್ ರಘುವಂಶಿ ಬಿಟ್ಟರೆ ಉಳಿದ ಬ್ಯಾಟರ್ಗಳು ಸ್ಥಿರವಾದ ಆಟವಾಡುತ್ತಿಲ್ಲ. ನಾಲ್ಕು ಅರ್ಧಶತಕಗಳೊಂದಿಗೆ 340 ರನ್ ಗಳಿಸಿದ್ದಾರೆ. ರಿಂಕು ಸಿಂಗ್ 286 ರನ್ ಗಳಿಸಿದ್ದಾರೆ.</p>.<p>ಇನ್ನೊಂದೆಡೆ ಗಿಲ್ ಬಳಗವು ಪೂರ್ಣಪ್ರಮಾಣದ ಸಾಮರ್ಥ್ಯದೊಂದಿಗೆ ಸಜ್ಜಾಗಿದೆ. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಜೇಸನ್ ಹೋಲ್ಡರ್ ಅವರು ಸರಿಯಾದ ಸಮಯದಲ್ಲಿ ಲಯಕ್ಕೆ ಮರಳಿದ್ದಾರೆ. ತಂಡಕ್ಕೆ ಉತ್ತಮವಾದ ಕಾಣಿಕೆ ನೀಡುತ್ತಿದ್ದಾರೆ.</p>.<p>ಬ್ಯಾಟಿಂಗ್ನಲ್ಲಿ ಆರಂಭಿಕ ಜೋಡಿ ಗಿಲ್ ಮತ್ತು ಸಾಯಿ ಸುದರ್ಶನ್ ಅವರು ಕೂಡ ಉತ್ತಮ ಲಯದಲ್ಲಿದ್ದಾರೆ. ಸಾಯಿ ಒಂದು ಶತಕ ಹೊಡೆದಿದ್ದಾರೆ. ಜೋಸ್ ಬಟ್ಲರ್, ಅರ್ಷದ್ ಖಾನ್, ವಾಷಿಂಗ್ಟನ್ ಸುಂದರ್, ಸ್ಪಿನ್ನರ್ ರಶೀದ್ ಖಾನ್ ಕೂಡ ತಂಡದ ಜಯದಾಸೆಗೆ ಬಲ ತುಂಬಬಲ್ಲ ಸಮರ್ಥರು.</p>.<p>ಈ ಋತುವಿನಲ್ಲಿ ಈಡನ್ ಗಾರ್ಡನ್ ಪಿಚ್ ಬೌಲರ್ಗಳಿಗೆ ಹೆಚ್ಚು ನೆರವು ನೀಡಿದೆ. ಸ್ಪಿನ್ ಜೋಡಿ ಸುನಿಲ್ ನಾರಾಯಣ್, ವರುಣ್ ಮತ್ತು ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಅವರು ಇಲ್ಲಿ ತಮ್ಮ ಸಾಮರ್ಥ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-51-604149034</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>