<p><strong>ಬೆಂಗಳೂರು</strong>: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಮೂರು ದಿನಗಳ ಹಿಂದಷ್ಟೇ ಘೋಷಿಸಿತ್ತು. </p>.<p>ಆದರೆ ಮಾರ್ಚ್ ಅಂತ್ಯದೊಳಗೆ ಐಪಿಎಲ್ ಶುರುವಾಗುವ ಮುಂಚೆ ಕಾಮಗಾರಿಗಳು ಪೂರ್ಣಗೊಳಿಸುವಲ್ಲಿ ಕೆಎಸ್ಸಿಎ ಹಿಂದುಳಿದಿದೆ. ಸಂಸ್ಥೆಯು ನೀಡಿದ ಕಾಲಮಿತಿಗೆ ಅನುಗುಣವಾಗಿ ಸದ್ಯ ನಡೆದಿರುವ ಕಾಮಗಾರಿಯು ತಲುಪಿರುವ ಹಂತ ತೃಪ್ತಿಕರವಾಗಿಲ್ಲ ಎಂದು ರಾಜ್ಯ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿಯು ಅಭಿಪ್ರಾಯಪಟ್ಟಿದೆ. </p>.<p>ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೆಎಸ್ಸಿಎ ಕ್ರಮವಾಗಿ ಪತ್ರಿಕಾ ಪ್ರಕಟಣೆ ಹಾಗೂ ಸುದ್ದಿಗೋಷ್ಟಿಯ ಮೂಲಕ ಐದು ಪಂದ್ಯಗಳು, ಒಂದು ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಘೋಷಿಸಿದ್ದವು. </p>.<p>ಹೋದ ವರ್ಷದ ಜೂನ್ 4ರಂದು ಆರ್ಸಿಬಿಯ ಚೊಚ್ಚಲ ಪ್ರಶಸ್ತಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಕ್ರೀಡಾಂಗಣದ ಬಳಿ 11 ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು.</p>.<p>ರಾಜ್ಯ ಸರ್ಕಾರವು ನೇಮಕ ಮಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಮತ್ತು ಮೂಲಸೌಲಭ್ಯಗಳ ನವೀಕರಣವನ್ನು ಶಿಫಾರಸುಗಳನ್ನು ಮಾಡಿತು. ಆಯೋಗದ ಶಿಫಾರಸುಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ ಮಹೇಶ್ವರರಾವ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿತು. </p>.<p>ರಾಜ್ಯ ಸರ್ಕಾರವು ಫೆಬ್ರುವರಿ 16ರಂದು ಹೊರಡಿಸಿದ್ದ ಆದೇಶದ ಪ್ರಕಾರ; ಶಿಫಾರಸುಗಳ ಅನುಷ್ಠಾನದ ಆಧಾರದ ಮೇಲೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನುಮತಿಯನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಸಮಿತಿಗೆ ಅಧಿಕಾರ ನೀಡಿದೆ. ಈ ಆದೇಶದ ಪ್ರತಿಯು ಪ್ರಜಾವಾಣಿಯ ಸಹೋದರ ಪತ್ರಿಕೆ ಡಿಎಚ್ಗೆ ಲಭ್ಯವಾಗಿದೆ.</p>.<p>ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಮೂರು ಹಂತಗಳಲ್ಲಿ ಶಿಫಾರಸುಗಳನ್ನು ಜಾರಿಗೆ ತರಲು ಕೆಎಸ್ಸಿಎ ಸಮಿತಿಯೊಂದಿಗೆ ಪರಸ್ಪರ ಒಪ್ಪಿಗೆ ನೀಡಿದೆ. ಮೊದಲ ಹಂತದ ಅನುಷ್ಠಾನಕ್ಕೆ ಮಾರ್ಚ್ 5 ಮತ್ತು ಮಾರ್ಚ್ 10ರಂದು ದಿನಾಂಕಗಳನ್ನು ನಿರ್ಧರಿಸಲಾಯಿತು. ಇದನ್ನು ಬೆಂಬಲಿಸುವ ದಾಖಲೆಗಳನ್ನು ಸಹ ಪತ್ರಿಕೆಯು ಪರಿಶೀಲಿಸಿದೆ. ‘ತಜ್ಞರ ಸಮಿತಿಯ ನಿರ್ದೇಶನಗಳನ್ನು ಕೆಎಸ್ಸಿಎ ಅನುಸರಿಸುತ್ತಿಲ್ಲ. ಮುಖ್ಯವಾಗಿ; ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ಖಾಲಿ ಜಾಗವನ್ನು ಗುರುತಿಸುವ ಶಿಫಾರಸಿಗೆ ಸಂಬಂಧಿಸಿದಂತೆ, ಕ್ರೀಡಾಂಗಣದ ಬಿ ಮೈದಾನವನ್ನು ಬಳಸುವ ಬಗ್ಗೆ ಕೆಎಸ್ಸಿಎ ಒಳಗೇ ಒಮ್ಮತದ ಕೊರತೆಯೂ ಇದೆ‘ ಎಂದು ಮೂಲವೊಂದು ಹೇಳಿದೆ. </p>.<p>ತುರ್ತು ನಿರ್ಗಮನ ಮಾರ್ಗ ಮತ್ತು ಜನರನ್ನು ಸ್ಥಳಾಂತರಿಸುವ ಹಾದಿಯ ಯೋಜನೆಯ ಕೊರತೆ, ವೈದ್ಯಕೀಯ ಚಿಕಿತ್ಸೆಯ ಸೌಲಭ್ಯದ ವಿವರಗಳು ಬಾಕಿ ಇರುವ ಕೆಲವು ಶಿಫಾರಸುಗಳಲ್ಲಿ ಸೇರಿವೆ ಎಂದು ಮೂಲಗಳು ತಿಳಿಸಿವೆ.</p>.<p>ಇದಲ್ಲದೆ, ಪತ್ರಿಕಾ ಪ್ರಕಟಣೆ ಮತ್ತು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯ ಬಗ್ಗೆ ಸರ್ಕಾರ ನೇಮಿಸಿದ ಸಮಿತಿಗೆ ಯಾವುದೇ ಮಾಹಿತಿ ನೀಡಿಲ್ಲ. ಸಮಿತಿಯ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಟಿ ನಡೆಸಿದ್ದರೆ ಸಾರ್ವಜನಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸುತ್ತಿತ್ತು ಎಂದೂ ಮೂಲಗಳು ಹೇಳಿವೆ.</p>.<p>‘ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ನಿರ್ಧಾರವು ಕೆಎಸ್ಸಿಎದ್ದಾಗಿದೆ. ದಿನಾಂಕಗಳನ್ನು ಅವರೇ ನಿರ್ಧರಿಸಿದ್ದರು. ಈಗ, ಅವರು ಶಿಫಾರಸುಗಳನ್ನು ಪಾಲಿಸಿಲ್ಲ ಅಥವಾ ವಿಸ್ತರಣೆಯನ್ನು ಕೋರುತ್ತಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.</p>.<p>ಈ ಬಗ್ಗೆ ಸಮಿತಿ ಅಧ್ಯಕ್ಷ ಮಹೇಶ್ವರ ರಾವ್ ಅವರನ್ನು ಪ್ರಶ್ನಿಸಿದಾಗ, ‘ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಶಿಫಾರಸುಗಳನ್ನು ನಿಗದಿತ ಗಡುವಿನೊಳಗೆ ಉತ್ತಮವಾಗಿ ಅನುಷ್ಠಾನಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಮಿತಿಯು ಕೆಎಸ್ಸಿಎ ತಂಡದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು. </p>.<p>ಈ ಕುರಿತು ಪ್ರತಿಕ್ರಿಯಿಸಿದ ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್, ‘ತಜ್ಞರ ಸಮಿತಿಯು ಏನಾದರೂ ವಿಳಂಬವಾಗಿರುವುದನ್ನು ಸೂಚಿಸಿದರೆ, ನಿಗದಿತ ಕಾಲಮಿತಿಯನ್ನು ಅನುಸರಿಸಲಾಗುವುದೆಂದು ನಮ್ಮ ಸಂಸ್ಥೆ ಭರವಸೆ ನೀಡುತ್ತದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಮೂರು ದಿನಗಳ ಹಿಂದಷ್ಟೇ ಘೋಷಿಸಿತ್ತು. </p>.<p>ಆದರೆ ಮಾರ್ಚ್ ಅಂತ್ಯದೊಳಗೆ ಐಪಿಎಲ್ ಶುರುವಾಗುವ ಮುಂಚೆ ಕಾಮಗಾರಿಗಳು ಪೂರ್ಣಗೊಳಿಸುವಲ್ಲಿ ಕೆಎಸ್ಸಿಎ ಹಿಂದುಳಿದಿದೆ. ಸಂಸ್ಥೆಯು ನೀಡಿದ ಕಾಲಮಿತಿಗೆ ಅನುಗುಣವಾಗಿ ಸದ್ಯ ನಡೆದಿರುವ ಕಾಮಗಾರಿಯು ತಲುಪಿರುವ ಹಂತ ತೃಪ್ತಿಕರವಾಗಿಲ್ಲ ಎಂದು ರಾಜ್ಯ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿಯು ಅಭಿಪ್ರಾಯಪಟ್ಟಿದೆ. </p>.<p>ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೆಎಸ್ಸಿಎ ಕ್ರಮವಾಗಿ ಪತ್ರಿಕಾ ಪ್ರಕಟಣೆ ಹಾಗೂ ಸುದ್ದಿಗೋಷ್ಟಿಯ ಮೂಲಕ ಐದು ಪಂದ್ಯಗಳು, ಒಂದು ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಘೋಷಿಸಿದ್ದವು. </p>.<p>ಹೋದ ವರ್ಷದ ಜೂನ್ 4ರಂದು ಆರ್ಸಿಬಿಯ ಚೊಚ್ಚಲ ಪ್ರಶಸ್ತಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಕ್ರೀಡಾಂಗಣದ ಬಳಿ 11 ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು.</p>.<p>ರಾಜ್ಯ ಸರ್ಕಾರವು ನೇಮಕ ಮಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಮತ್ತು ಮೂಲಸೌಲಭ್ಯಗಳ ನವೀಕರಣವನ್ನು ಶಿಫಾರಸುಗಳನ್ನು ಮಾಡಿತು. ಆಯೋಗದ ಶಿಫಾರಸುಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ ಮಹೇಶ್ವರರಾವ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿತು. </p>.<p>ರಾಜ್ಯ ಸರ್ಕಾರವು ಫೆಬ್ರುವರಿ 16ರಂದು ಹೊರಡಿಸಿದ್ದ ಆದೇಶದ ಪ್ರಕಾರ; ಶಿಫಾರಸುಗಳ ಅನುಷ್ಠಾನದ ಆಧಾರದ ಮೇಲೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನುಮತಿಯನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಸಮಿತಿಗೆ ಅಧಿಕಾರ ನೀಡಿದೆ. ಈ ಆದೇಶದ ಪ್ರತಿಯು ಪ್ರಜಾವಾಣಿಯ ಸಹೋದರ ಪತ್ರಿಕೆ ಡಿಎಚ್ಗೆ ಲಭ್ಯವಾಗಿದೆ.</p>.<p>ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಮೂರು ಹಂತಗಳಲ್ಲಿ ಶಿಫಾರಸುಗಳನ್ನು ಜಾರಿಗೆ ತರಲು ಕೆಎಸ್ಸಿಎ ಸಮಿತಿಯೊಂದಿಗೆ ಪರಸ್ಪರ ಒಪ್ಪಿಗೆ ನೀಡಿದೆ. ಮೊದಲ ಹಂತದ ಅನುಷ್ಠಾನಕ್ಕೆ ಮಾರ್ಚ್ 5 ಮತ್ತು ಮಾರ್ಚ್ 10ರಂದು ದಿನಾಂಕಗಳನ್ನು ನಿರ್ಧರಿಸಲಾಯಿತು. ಇದನ್ನು ಬೆಂಬಲಿಸುವ ದಾಖಲೆಗಳನ್ನು ಸಹ ಪತ್ರಿಕೆಯು ಪರಿಶೀಲಿಸಿದೆ. ‘ತಜ್ಞರ ಸಮಿತಿಯ ನಿರ್ದೇಶನಗಳನ್ನು ಕೆಎಸ್ಸಿಎ ಅನುಸರಿಸುತ್ತಿಲ್ಲ. ಮುಖ್ಯವಾಗಿ; ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ಖಾಲಿ ಜಾಗವನ್ನು ಗುರುತಿಸುವ ಶಿಫಾರಸಿಗೆ ಸಂಬಂಧಿಸಿದಂತೆ, ಕ್ರೀಡಾಂಗಣದ ಬಿ ಮೈದಾನವನ್ನು ಬಳಸುವ ಬಗ್ಗೆ ಕೆಎಸ್ಸಿಎ ಒಳಗೇ ಒಮ್ಮತದ ಕೊರತೆಯೂ ಇದೆ‘ ಎಂದು ಮೂಲವೊಂದು ಹೇಳಿದೆ. </p>.<p>ತುರ್ತು ನಿರ್ಗಮನ ಮಾರ್ಗ ಮತ್ತು ಜನರನ್ನು ಸ್ಥಳಾಂತರಿಸುವ ಹಾದಿಯ ಯೋಜನೆಯ ಕೊರತೆ, ವೈದ್ಯಕೀಯ ಚಿಕಿತ್ಸೆಯ ಸೌಲಭ್ಯದ ವಿವರಗಳು ಬಾಕಿ ಇರುವ ಕೆಲವು ಶಿಫಾರಸುಗಳಲ್ಲಿ ಸೇರಿವೆ ಎಂದು ಮೂಲಗಳು ತಿಳಿಸಿವೆ.</p>.<p>ಇದಲ್ಲದೆ, ಪತ್ರಿಕಾ ಪ್ರಕಟಣೆ ಮತ್ತು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯ ಬಗ್ಗೆ ಸರ್ಕಾರ ನೇಮಿಸಿದ ಸಮಿತಿಗೆ ಯಾವುದೇ ಮಾಹಿತಿ ನೀಡಿಲ್ಲ. ಸಮಿತಿಯ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಟಿ ನಡೆಸಿದ್ದರೆ ಸಾರ್ವಜನಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸುತ್ತಿತ್ತು ಎಂದೂ ಮೂಲಗಳು ಹೇಳಿವೆ.</p>.<p>‘ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ನಿರ್ಧಾರವು ಕೆಎಸ್ಸಿಎದ್ದಾಗಿದೆ. ದಿನಾಂಕಗಳನ್ನು ಅವರೇ ನಿರ್ಧರಿಸಿದ್ದರು. ಈಗ, ಅವರು ಶಿಫಾರಸುಗಳನ್ನು ಪಾಲಿಸಿಲ್ಲ ಅಥವಾ ವಿಸ್ತರಣೆಯನ್ನು ಕೋರುತ್ತಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.</p>.<p>ಈ ಬಗ್ಗೆ ಸಮಿತಿ ಅಧ್ಯಕ್ಷ ಮಹೇಶ್ವರ ರಾವ್ ಅವರನ್ನು ಪ್ರಶ್ನಿಸಿದಾಗ, ‘ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಶಿಫಾರಸುಗಳನ್ನು ನಿಗದಿತ ಗಡುವಿನೊಳಗೆ ಉತ್ತಮವಾಗಿ ಅನುಷ್ಠಾನಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಮಿತಿಯು ಕೆಎಸ್ಸಿಎ ತಂಡದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು. </p>.<p>ಈ ಕುರಿತು ಪ್ರತಿಕ್ರಿಯಿಸಿದ ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್, ‘ತಜ್ಞರ ಸಮಿತಿಯು ಏನಾದರೂ ವಿಳಂಬವಾಗಿರುವುದನ್ನು ಸೂಚಿಸಿದರೆ, ನಿಗದಿತ ಕಾಲಮಿತಿಯನ್ನು ಅನುಸರಿಸಲಾಗುವುದೆಂದು ನಮ್ಮ ಸಂಸ್ಥೆ ಭರವಸೆ ನೀಡುತ್ತದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>