‘ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೊ ರಬಾಡ ಮತ್ತು ಆರ್. ಅಶ್ವಿನ್ ಅವರಂತಹ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡುವುದು ತುಂಬ ಬೇಸರದ ಸಂಗತಿ. ಹರಾಜು ನಿಯಮಗಳು ಹೀಗಿರುವುದರಿಂದ ಪಾಲಿಸಬೇಕಾಗುತ್ತದೆ. ಒಂದು ತಂಡವನ್ನು ಬಲಿಷ್ಠವಾಗಿ ಕಟ್ಟುವುದು ಬಹಳ ದೊಡ್ಡ ಕೆಲಸ. ಯುವ ಆಟಗಾರರನ್ನು ಹುಡುಕಿ ತಂದು ಪ್ರೋತ್ಸಾಹಿಸಿ ಅವಕಾಶ ಕೊಡಲಾಗುತ್ತವೆ. ಅವರು ಉತ್ತಮವಾಗಿ ಆಡಿ ರಾಷ್ಟ್ರೀಯ ತಂಡದಲ್ಲಿಯೂ ಸ್ಥಾನ ಪಡೆಯುತ್ತಾರೆ. ಆದರೆ ಮೂರು ವರ್ಷಗಳ ನಂತರ ಅವರನ್ನು ಬಿಟ್ಟುಕೊಡಬೇಕಾದಾಗ ನೋವಾಗುತ್ತದೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ಸಹಮಾಲೀಕರಾದ ಪಾರ್ಥ್ ಜಿಂದಾಲ್ ಹೇಳಿದ್ದಾರೆ.