‘ಮಾನವೀಯ ದೃಷ್ಟಿಕೋನದಿಂದ ನೋಡಿದಾಗ, ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಉತ್ತಮ ನಿರ್ಧಾರ. ಅಲ್ಲಿಂದ ಹೊರಟು ಸ್ವದೇಶಕ್ಕೆ ಸೇರುವುದು ನಮಗೂ ಕಠಿಣ ಸವಾಲಾಗಿತ್ತು. ಭಾರತದಿಂದ ಆಸ್ಟ್ರೇಲಿಯಾಕ್ಕೆ ವಿಮಾನಯಾನ ನಿರ್ಬಂಧಿಸಲಾಗಿತ್ತು. ಆದರೂ ಲಭ್ಯವಿರುವ ಮಾರ್ಗಗಳ ಮೂಲಕ ನಮ್ಮನ್ನು ಸುರಕ್ಷಿತವಾಗಿ ತವರಿಗೆ ಕಳಿಸುವಲ್ಲಿ ಅಲ್ಲಿಯ ಆಡಳಿತ ಮತ್ತು ಆಯೋಜಕರು ತುಂಬ ಶ್ರಮಿಸಿದ್ದಾರೆ. ಚೆನ್ನಾಗಿಯೂ ನಿರ್ವಹಿಸಿದ್ದಾರೆ. ಭಾರತವು ಕ್ರಿಕೆಟ್ ಆಟವನ್ನು ಅಪಾರವಾಗಿ ಪ್ರೀತಿಸುವ ದೇಶ‘ ಎಂದು ವಾರ್ನರ್ ಹೇಳಿದ್ದಾರೆ.