<p><strong>ಚೆನ್ನೈ:</strong> 2026ರ ಐಪಿಎಲ್ ಟೂರ್ನಿಯ ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಕಳಪೆ ಬ್ಯಾಟಿಂಗ್ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕಳಪೆ ಬ್ಯಾಟಿಂಗ್ ಕುರಿತು ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಆಡಿರುವ 9 ಪಂದ್ಯಗಳಲ್ಲಿ 1 ಅರ್ಧಶತಕದೊಂದಿಗೆ 183 ರನ್ಗಳನ್ನು ಕಲೆಹಾಕಿದ್ದಾರೆ.</p><p>ಸೂರ್ಯ ಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಕುರಿತು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ಮಾತನಾಡಿ ‘ಸೂರ್ಯಕುಮಾರ್ ಯಾದವ್ ಅವರು ತಮ್ಮ ವೃತ್ತಿಜೀವನದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಯಕ್ಕೆ ಮರಳಲು ಹೆಚ್ಚು ಅಭ್ಯಾಸಿಸುವುದು ಬಿಟ್ಟು ಬೇರೆ ದಾರಿಯಿಲ್ಲ’ ಎಂದಿದ್ದಾರೆ. </p><p>‘ಸೂರ್ಯ ಕುಮಾರ್ ಯಾದವ್ 2025 ರ ಋತುವಿನಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಮಾತ್ರವಲ್ಲದೆ ಭಾರತವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ನಾಯಕನ ಪಾತ್ರವಹಿಸಿದರು. ಆದರೆ 2026ರ ಆವೃತಿಯಲ್ಲಿ ರನ್ ಭರ ಎದುರಿಸುತ್ತಿದ್ದಾರೆ. ಹಾರ್ಡ್ ಲೆಂತ್ ಎಸೆತಗಳೇ ಅವರಿಗೆ ಸವಾಲಾಗಿ ಪರಿಣಮಿಸಿವೆ’ ಎಂದಿದ್ದಾರೆ.</p><p>‘ಹೆಚ್ಚು ರನ್ಗಳಿಸಿದರೆ ಮಾತ್ರ, ಲಯವನ್ನು ಕಂಡುಕೊಳ್ಳಲು ಸಾಧ್ಯ. ಕೆಲವೊಮ್ಮೆ ನಾವು ಊಹಿಸಿದಂತೆ ಯಾವುದೂ ನಡೆಯುವುದಿಲ್ಲ. ಸೂರ್ಯ ಒಳ್ಳೆಯ ಹೊಡೆತಗಳತ್ತ ಯೋಚಿಸಬೇಕು. ಹೆಚ್ಚು ಅಭ್ಯಾಸ ಮಾಡುವುದರಿಂದ ಲಯಕ್ಕೆ ಮರಳಬಹುದು’ ಎಂದು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> 2026ರ ಐಪಿಎಲ್ ಟೂರ್ನಿಯ ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಕಳಪೆ ಬ್ಯಾಟಿಂಗ್ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕಳಪೆ ಬ್ಯಾಟಿಂಗ್ ಕುರಿತು ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಆಡಿರುವ 9 ಪಂದ್ಯಗಳಲ್ಲಿ 1 ಅರ್ಧಶತಕದೊಂದಿಗೆ 183 ರನ್ಗಳನ್ನು ಕಲೆಹಾಕಿದ್ದಾರೆ.</p><p>ಸೂರ್ಯ ಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಕುರಿತು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ಮಾತನಾಡಿ ‘ಸೂರ್ಯಕುಮಾರ್ ಯಾದವ್ ಅವರು ತಮ್ಮ ವೃತ್ತಿಜೀವನದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಯಕ್ಕೆ ಮರಳಲು ಹೆಚ್ಚು ಅಭ್ಯಾಸಿಸುವುದು ಬಿಟ್ಟು ಬೇರೆ ದಾರಿಯಿಲ್ಲ’ ಎಂದಿದ್ದಾರೆ. </p><p>‘ಸೂರ್ಯ ಕುಮಾರ್ ಯಾದವ್ 2025 ರ ಋತುವಿನಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಮಾತ್ರವಲ್ಲದೆ ಭಾರತವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ನಾಯಕನ ಪಾತ್ರವಹಿಸಿದರು. ಆದರೆ 2026ರ ಆವೃತಿಯಲ್ಲಿ ರನ್ ಭರ ಎದುರಿಸುತ್ತಿದ್ದಾರೆ. ಹಾರ್ಡ್ ಲೆಂತ್ ಎಸೆತಗಳೇ ಅವರಿಗೆ ಸವಾಲಾಗಿ ಪರಿಣಮಿಸಿವೆ’ ಎಂದಿದ್ದಾರೆ.</p><p>‘ಹೆಚ್ಚು ರನ್ಗಳಿಸಿದರೆ ಮಾತ್ರ, ಲಯವನ್ನು ಕಂಡುಕೊಳ್ಳಲು ಸಾಧ್ಯ. ಕೆಲವೊಮ್ಮೆ ನಾವು ಊಹಿಸಿದಂತೆ ಯಾವುದೂ ನಡೆಯುವುದಿಲ್ಲ. ಸೂರ್ಯ ಒಳ್ಳೆಯ ಹೊಡೆತಗಳತ್ತ ಯೋಚಿಸಬೇಕು. ಹೆಚ್ಚು ಅಭ್ಯಾಸ ಮಾಡುವುದರಿಂದ ಲಯಕ್ಕೆ ಮರಳಬಹುದು’ ಎಂದು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>