‘ಎದುರಾಳಿ ಆಟಗಾರನನ್ನು ವಿಚಲಿತಗೊಳಿಸಲು ಬೌಲರ್ಗಳು ಬೌನ್ಸರ್ ಪ್ರಯೋಗಿಸುವುದು ಸಾಮಾನ್ಯ. ಒಂದೊಮ್ಮೆ ಚೆಂಡು ಬ್ಯಾಟ್ಸ್ಮನ್ನ ತಲೆಗೆ ಬಡಿದು ಆತ ನೋವಿನಿಂದ ನರಳುತ್ತಿದ್ದರೆ ಬೌಲರ್ಗಳು ಕೂಡಲೇ ಆತನ ಬಳಿ ಹೋಗಿ ಸೌಜನ್ಯಕ್ಕಾದರೂ ಏನಾಯಿತೆಂದು ವಿಚಾರಿಸಬೇಕು. ಅದು ಕ್ರೀಡಾಪಟುವಿನ ಧರ್ಮ. ಆದರೆ ಜೋಫ್ರಾ ಹಾಗೆ ಮಾಡಲಿಲ್ಲ. ತನಗೆ ಸಂಬಂಧವಿಲ್ಲದಂತೆಯೇ ವರ್ತಿಸಿದರು. ಅವರ ಆ ನಡವಳಿಕೆ ನನಗೆ ಬೇಸರ ತರಿಸಿತು’ ಎಂದು ಅಖ್ತರ್ ಭಾನುವಾರ ಟ್ವೀಟ್ ಮಾಡಿದ್ದಾರೆ.