<p><strong>ಬೆಂಗಳೂರು:</strong> ಕರ್ನಾಟಕ ತಂಡದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್ ದೇಶಿ ಕ್ರಿಕೆಟ್ಗೆ ವಿದಾಯ ಘೋಷಿಸಿದರು. </p>.<p>ಅಲ್ಪಕಾಲ ಆಡಿದರೂ ಸ್ಮರಣೀಯ ಇನಿಂಗ್ಸ್ಗಳನ್ನು ಕಟ್ಟಿಕೊಟ್ಟ ಆಟಗಾರ ಸಿದ್ಧಾರ್ಥ್. 2018ರಲ್ಲಿ ನಾಗಪುರದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ಎದುರು ಕರ್ನಾಟಕ ತಂಡದಲ್ಲಿ ಪದಾರ್ಪಣೆ ಮಾಡಿದರು. </p>.<p>31 ಪ್ರಥಮ ದರ್ಜೆಗಳಲ್ಲಿ ಆಡಿರುವ ಅವರು 2,103 ರನ್ ಗಳಿಸಿದ್ದಾರೆ. ಅದರಲ್ಲಿ ಐದು ಶತಕ ಮತ್ತು 13 ಅರ್ಧಶತಕಗಳು ಇವೆ. ಲಿಸ್ಟ್ ಎ ವಿಭಾಗದಲ್ಲಿ 28 ಪಂದ್ಯಗಳಿಂದ 925 ರನ್ ಸೇರಿಸಿದ್ದಾರೆ. ಅದರಲ್ಲಿ 1 ಶತಕ ಮತ್ತು 6 ಅರ್ಧಶತಕ ಗಳು ಇವೆ. ಸಾಂದರ್ಭಿಕ ವಿಕೆಟ್ ಕೀಪರ್ ಆಗಿಯೂ ಅವರು ಕೆಲವು ಪಂದ್ಯಗಳಲ್ಲಿ ಗಮನ ಸೆಳೆದಿದ್ದರು. </p>.<p>‘ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಜೀವ. ಅಲ್ಲಿಂದ ಇಲ್ಲಿಯವರೆಗೂ ಆಡಿರುವ ಕ್ರಿಕೆಟ್ ಅನ್ನು ತ್ಯಜಿಸುವ ನಿರ್ಧಾರ ತೆಗೆದುಕೊಳ್ಳುವುದು ಬಹಳ ಕಠಿಣ. ಹೋದ ವರ್ಷ ತಂಡದಲ್ಲಿ ಸ್ಥಾನ ಸಿಗಲಿಲ್ಲ. ನನ್ನ ಸ್ನೇಹಿತರು ಹಾಗೂ ರಾಹುಲ್ ಸರ್ (ದ್ರಾವಿಡ್) ಅವರೊಂದಿಗೆ ಸಮಾಲೋಚನೆ ನಡೆಸಿದೆ. ನಿರ್ಧಾರಕ್ಕೆ ಬಂದೆ’ ಎಂದು 33 ವರ್ಷದ ಬಲಗೈ ಆಟಗಾರ ಸಿದ್ಧಾರ್ಥ್ ತಮ್ಮ ವಿದಾಯದ ಕುರಿತು ಪ್ರತಿಕ್ರಿಯಿಸಿದರು. </p>.<p>ಸಿದ್ಧಾರ್ಥ್ ಅವರು 2023–24ರಲ್ಲಿ ಗೋವಾ ತಂಡಕ್ಕೆ ವಲಸೆ ಹೋಗಿದ್ದರು. 2025ರ ಜನವರಿಯಲ್ಲಿ ಅವರು ಕೊನೆಯ ಸಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. </p>.<p>ತರಬೇತುದಾರರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಅವರು ನಿರ್ಧರಿಸಿದ್ದಾರೆ. </p>.<p>‘ರಣಜಿ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುವ ಪ್ರತಿಭಾವಂತರಿಗೆ ಕೋಚ್ ಆಗಿ ಮಾರ್ಗದರ್ಶನ ನೀಡುವುದು ನನ್ನ ಗುರಿ’ ಎಂದರು. </p>.<p>ಸಿದ್ಧಾರ್ಥ್ ಅವರು 2023ರಲ್ಲಿ ನಮೀಬಿಯಾ ಪ್ರವಾಸ ಕೈಗೊಂಡಿದ್ದ ಕರ್ನಾಟಕ ತಂಡದಲ್ಲಿ ಅವರಿದ್ದರು. ‘ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿ ಜಯಿಸಿದ್ದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳು’ ಎಂದು ಅವರು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ತಂಡದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್ ದೇಶಿ ಕ್ರಿಕೆಟ್ಗೆ ವಿದಾಯ ಘೋಷಿಸಿದರು. </p>.<p>ಅಲ್ಪಕಾಲ ಆಡಿದರೂ ಸ್ಮರಣೀಯ ಇನಿಂಗ್ಸ್ಗಳನ್ನು ಕಟ್ಟಿಕೊಟ್ಟ ಆಟಗಾರ ಸಿದ್ಧಾರ್ಥ್. 2018ರಲ್ಲಿ ನಾಗಪುರದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ಎದುರು ಕರ್ನಾಟಕ ತಂಡದಲ್ಲಿ ಪದಾರ್ಪಣೆ ಮಾಡಿದರು. </p>.<p>31 ಪ್ರಥಮ ದರ್ಜೆಗಳಲ್ಲಿ ಆಡಿರುವ ಅವರು 2,103 ರನ್ ಗಳಿಸಿದ್ದಾರೆ. ಅದರಲ್ಲಿ ಐದು ಶತಕ ಮತ್ತು 13 ಅರ್ಧಶತಕಗಳು ಇವೆ. ಲಿಸ್ಟ್ ಎ ವಿಭಾಗದಲ್ಲಿ 28 ಪಂದ್ಯಗಳಿಂದ 925 ರನ್ ಸೇರಿಸಿದ್ದಾರೆ. ಅದರಲ್ಲಿ 1 ಶತಕ ಮತ್ತು 6 ಅರ್ಧಶತಕ ಗಳು ಇವೆ. ಸಾಂದರ್ಭಿಕ ವಿಕೆಟ್ ಕೀಪರ್ ಆಗಿಯೂ ಅವರು ಕೆಲವು ಪಂದ್ಯಗಳಲ್ಲಿ ಗಮನ ಸೆಳೆದಿದ್ದರು. </p>.<p>‘ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಜೀವ. ಅಲ್ಲಿಂದ ಇಲ್ಲಿಯವರೆಗೂ ಆಡಿರುವ ಕ್ರಿಕೆಟ್ ಅನ್ನು ತ್ಯಜಿಸುವ ನಿರ್ಧಾರ ತೆಗೆದುಕೊಳ್ಳುವುದು ಬಹಳ ಕಠಿಣ. ಹೋದ ವರ್ಷ ತಂಡದಲ್ಲಿ ಸ್ಥಾನ ಸಿಗಲಿಲ್ಲ. ನನ್ನ ಸ್ನೇಹಿತರು ಹಾಗೂ ರಾಹುಲ್ ಸರ್ (ದ್ರಾವಿಡ್) ಅವರೊಂದಿಗೆ ಸಮಾಲೋಚನೆ ನಡೆಸಿದೆ. ನಿರ್ಧಾರಕ್ಕೆ ಬಂದೆ’ ಎಂದು 33 ವರ್ಷದ ಬಲಗೈ ಆಟಗಾರ ಸಿದ್ಧಾರ್ಥ್ ತಮ್ಮ ವಿದಾಯದ ಕುರಿತು ಪ್ರತಿಕ್ರಿಯಿಸಿದರು. </p>.<p>ಸಿದ್ಧಾರ್ಥ್ ಅವರು 2023–24ರಲ್ಲಿ ಗೋವಾ ತಂಡಕ್ಕೆ ವಲಸೆ ಹೋಗಿದ್ದರು. 2025ರ ಜನವರಿಯಲ್ಲಿ ಅವರು ಕೊನೆಯ ಸಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. </p>.<p>ತರಬೇತುದಾರರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಅವರು ನಿರ್ಧರಿಸಿದ್ದಾರೆ. </p>.<p>‘ರಣಜಿ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುವ ಪ್ರತಿಭಾವಂತರಿಗೆ ಕೋಚ್ ಆಗಿ ಮಾರ್ಗದರ್ಶನ ನೀಡುವುದು ನನ್ನ ಗುರಿ’ ಎಂದರು. </p>.<p>ಸಿದ್ಧಾರ್ಥ್ ಅವರು 2023ರಲ್ಲಿ ನಮೀಬಿಯಾ ಪ್ರವಾಸ ಕೈಗೊಂಡಿದ್ದ ಕರ್ನಾಟಕ ತಂಡದಲ್ಲಿ ಅವರಿದ್ದರು. ‘ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿ ಜಯಿಸಿದ್ದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳು’ ಎಂದು ಅವರು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>