ಸೂರತ್: ವೈಯಕ್ತಿಕ ಶತಕದಿಂದ ವಂಚಿತರಾದರೂ ಶ್ರೇಯಸ್ ಗೋಪಾಲ್ ಕರ್ನಾಟಕಕ್ಕೆ ಗೌರವ ತಂದುಕೊಟ್ಟರು. ಇಲ್ಲಿನ ಲಾಲಾಭಾಯಿ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಎಲೀಟ್ ‘ಎ’ ಗುಂಪಿನ ಪಂದ್ಯದಲ್ಲಿ ಗೋಪಾಲ್ (93; 115 ಎಸೆತ; 5 ಬೌಂಡರಿ) ಮತ್ತು ದೇವದತ್ತ ಪಡಿಕ್ಕಲ್ (74; 130 ಎ, 10 ಬೌಂ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ವಿನಯಕುಮಾರ್ ಬಳಗ ಇನಿಂಗ್ಸ್ ಮುನ್ನಡೆ ಗಳಿಸಿತು.