ಶಾಲೆಯ ಮುಖ್ಯ ಶಿಕ್ಷಕ ಅಣ್ಣಯ್ಯ ಮಾತನಾಡಿ, ‘ಶಾಲೆಯನ್ನು ಮಧ್ಯದಲ್ಲಿ ತೊರೆದಿರುವ ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಲು ಪೋಷಕರು, ನೆರೆಹೊರೆಯವರು, ಶಾಲಾಭಿವೃದ್ಧಿ ಸಮಿತಿಯ ಸಹಕಾರ ಅಗತ್ಯವಾಗಿದೆ. ತಮ್ಮ ವಾಸಸ್ಥಳದ ಅಕ್ಕಪಕ್ಕದಲ್ಲಿ ಶಾಲೆಬಿಟ್ಟ ಯಾವುದೇ ಮಗುವಿದ್ದರೂ ತಪ್ಪದೇ ಶಾಲೆಗೆ ಸೇರಿಸಲು ನೆರವಾಗಬೇಕು’ ಎಂದರು.