ಶನಿವಾರ, ಅಫ್ಗಾನಿಸ್ತಾನ ಬ್ಯಾಟ್ ಮಾಡುತ್ತಿದ್ದಾಗ 29ನೇ ಓವರ್ ವೇಳೆ ಬೂಮ್ರಾ ಎಸೆತದಲ್ಲಿ ರಹಮತ್ ಶಾ ಅವರ ಪ್ಯಾಡ್ಗೆ ಚೆಂಡು ಬಡಿದಿತ್ತು. ಎಲ್ಬಿ ಈ ಮನವಿಯನ್ನು ತಿರಸ್ಕರಿಸಿದಾಗ ಕೊಹ್ಲಿ ಅಸಮಾಧಾನಗೊಂಡಿದ್ದರು. ಎಲ್ಬಿ ಅಪೀಲು ಮಾಡುವಾಗ ಅಂಪೈರ್ ಅಲೀಮ್ ದರ್ ಕಡೆ ಕೊಹ್ಲಿ ‘ಒತ್ತಡ ಹೇರುವ’ ರೀತಿ ಮುನ್ನುಗ್ಗಿದ್ದರು ಎಂದು ಐಸಿಸಿ ಹೇಳಿಕೆ ತಿಳಿಸಿದೆ.