‘ಸೂಪರ್ ಓವರ್’ನಲ್ಲಿ ಗೆದ್ದ ಟಸ್ಕರ್ಸ್

ಮೈಸೂರು: ಬಳ್ಳಾರಿ ಟಸ್ಕರ್ಸ್ ತಂಡ ಕೆಪಿಎಲ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ‘ಸೂಪರ್ ಓವರ್’ನಲ್ಲಿ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್ ಮಾಡಿದ ಲಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 151 ರನ್ ಗಳಿಸಿತು. ಟಸ್ಕರ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ ಇಷ್ಟೇ ಮೊತ್ತ ಗಳಿಸಿದ್ದರಿಂದ ಪಂದ್ಯ ‘ಟೈ’ಆಯಿತು. ಇದರಿಂದ ವಿಜೇತರನ್ನು ನಿರ್ಣಯಿಸಲು ‘ಸೂಪರ್ ಓವರ್’ ಮೊರೆ ಹೋಗಲಾಯಿತು.
ಸೂಪರ್ ಓವರ್ನಲ್ಲಿ ಟಸ್ಕರ್ಸ್ 21 ರನ್ ಗಳಿಸಿದರೆ, ಲಯನ್ಸ್ ಕೇವಲ 8 ರನ್ ಗಳಿಸಿತು. ಕೆಪಿಎಲ್ ಇತಿಹಾಸದಲ್ಲಿ ಪಂದ್ಯವೊಂದು ಸೂಪರ್ ಓವರ್ನಲ್ಲಿ ಕೊನೆಗೊಂಡದ್ದು ಇದೇ ಮೊದಲು.
ಸಂಕ್ಷಿಪ್ತ ಸ್ಕೋರ್: ಶಿವಮೊಗ್ಗ ಲಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 151 (ಅನಿರುದ್ಧ್ ಜೋಷಿ 47, ಆರ್.ಜೊನಾಥನ್ 45, ಅಧೋಕ್ಷ್ ಹೆಗ್ಡೆ 39); ಬಳ್ಳಾರಿ ಟಸ್ಕರ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 151 (ಸಿ.ಎ.ಕಾರ್ತಿಕ್ 47, ಸಿ.ಎಂ.ಗೌತಮ್ 57, ಆದಿತ್ಯ ರೆಡ್ಡಿ 33, ಅನಿರುದ್ಧ್ ಜೋಷಿ 26ಕ್ಕೆ 1)
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.