ಬೆಂಗಳೂರು: ಮಂಗಳವಾರ ರಾತ್ರಿ ಮಳೆಯ ಆಟದ ನಡುವೆ ನಡೆದ ಪಂದ್ಯದಲ್ಲಿ ಬೆಂಗಳೂರುಬ್ಲಾಸ್ಟರ್ಸ್ ತಂಡವು ಶಿವಮೊಗ್ಗ ಲಯನ್ಸ್ಗೆ ಸವಾಲಿನ ಗುರಿ ನೀಡಿತು.
ಟಾಸ್ ಗೆದ್ದ ಶಿವಮೊಗ್ಗ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್ ಆರಂಭಿಸಿದ ಬೆಂಗಳೂರು ತಂಡವು 16 ಓವರ್ಗಳಲ್ಲಿ 3 ವಿಕೆಟ್ಗಳಿಗೆ 116 ರನ್ ಗಳಿಸಿತು. ಈ ಇನಿಂಗ್ಸ್ ನಡುವೆ ಎರಡು ಬಾರಿ ರಭಸದ ಮಳೆ ಸುರಿಯಿತು. ಅದರಿಂದಾಗಿ ಕೆಲಹೊತ್ತು ಆಟ ನಿಂತಿತ್ತು. ಮಳೆ ನಿಂತ ಸುಮಾರಿಗೆ ಪಿಚ್ ಮತ್ತು ಮೈದಾನದ ತಪಾಸಣೆ ನಡೆಸಿದ ರೆಫರಿ ಶಾವೀರ್ ತಾರಪುರ್, ಅಂಪೈರ್ಗಳಾದ ಎಂ.ಜಿ. ಸುದರ್ಶನ್ ಮತ್ತು ಅಭಿಜೀತ್ ಬೆಂಗೇರಿ ಶಿವಮೊಗ್ಗ ತಂಡಕ್ಕೆ ಪರಿಷ್ಕೃತ ಗುರಿ ನೀಡಿದರು.
ವಿ. ಜಯದೇವನ್ ನಿಯಮದನ್ವಯ ಶಿವಮೊಗ್ಗ ತಂಡವು ಗೆಲ್ಲಲು 12 ಓವರ್ಗಳಲ್ಲಿ 106 ರನ್ ಗಳಿಸಬೇಕಾಯಿತು.
ಬೆಂಗಳೂರು ತಂಡದ ಬಿ.ಆರ್. ಶರತ್ (42; 23ಎಸೆತ, 6ಬೌಂಡರಿ, 2ಸಿಕ್ಸರ್) ಮತ್ತು ರೋಹನ್ ಕದಂ (25; 31ಎಸೆತ, 2ಬೌಂಡರಿ) ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 63 ರನ್ ಸೇರಿಸಿದರು.
ಬೆಂಗಳೂರು ತಂಡದ ಈ ಮೊದ ಲಿನ ಎರಡೂ ಪಂದ್ಯಗಳು ಮಳೆಗೆ ಆಹುತಿಯಾಗಿದ್ದವು. ಶಿವಮೊಗ್ಗ ತಾನು ಆಡಿರುವ ಎರಡು ಪಂದ್ಯಗಳನ್ನೂ ಗೆದ್ದಿದೆ.