<p><strong>ಮುಂಬೈ:</strong> ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಬೌನ್ಸರ್ ಎಸೆತದ ಮೂಲಕವೇ ವಿಭಿನ್ನತೆಗೆ ಕಾರಣರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ, ಈ ಕುರಿತು ಮಾತನಾಡಿದ್ದಾರೆ. </p><p>ಭಾನುವಾರ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ರನ್ಗಳ ಅಂತರದ ಜಯ ಗಳಿಸಿತು. </p><p>ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ನಾಲ್ಕು ಓವರ್ಗಳಲ್ಲಿ ಕೇವಲ 26 ರನ್ ಮಾತ್ರ ನೀಡಿದ್ದ ಕೃಣಾಲ್, ಸೂರ್ಯ ಕುಮಾರ್ ಯಾದವ್ ಅವರ ಅಮೂಲ್ಯ ವಿಕೆಟ್ ಕಬಳಿಸಿದರು. </p>.IPL Stats: ವಾಂಖೆಡೆಯ ಹೈಸ್ಕೋರಿಂಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್ಸಿಬಿಗೆ ಜಯ.IPL 2026: ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಆರ್ಸಿಬಿಯ ‘ಬೌನ್ಸರ್’ ಸ್ಪಿನ್ನರ್. <p>ಪಂದ್ಯದ ಬಳಿಕ ಈ ಕುರಿತು ಕೇಳಿದಾಗ, 'ನಾನು ಬೌನ್ಸರ್ ಎಸೆಯಲು ಯಾವುದೇ ಪೂರ್ವ ಯೋಜನೆ ಮಾಡಿಕೊಳ್ಳುವುದಿಲ್ಲ. ಆ ಕ್ಷಣದ ಭಾವನೆಗೆ ತಕ್ಕಂತೆ ಬೌಲಿಂಗ್ ಮಾಡುತ್ತೇನೆ. ಏಕೆಂದರೆ ಬ್ಯಾಟರ್ಗಿಂತಲೂ ಒಂದು ಹೆಜ್ಜೆ ಮುಂದಿರಲು ಬಯಸುತ್ತೇನೆ' ಎಂದಿದ್ದಾರೆ. </p><p>ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ಎಡಗೈ ಆಲ್ರೌಂಡರ್ ಕೃಣಾಲ್ಗೆ ಬ್ಯಾಟಿಂಗ್ನಲ್ಲಿ ಅವಕಾಶ ಕಡಿಮೆಯಾಗಿದೆ. ಆದರೆ ಹಾಲಿ ಚಾಂಪಿಯನ್ ಆರ್ಸಿಬಿ ತಂಡದಲ್ಲಿ ಪ್ರಮುಖ ಬೌಲಿಂಗ್ ಅಸ್ತ್ರವಾಗಿ ಮಾರ್ಪಾಟ್ಟಿದ್ದಾರೆ. </p><p>'ಬೌಲಿಂಗ್ ಚೆನ್ನಾಗಿ ಮೂಡಿ ಬರುತ್ತಿರುವುದಕ್ಕೆ ಸಂತಸವಿದೆ. ನಾನು ಬೌನ್ಸರ್ ಎಸೆಯಲು ಪ್ರಿ-ಪ್ಲ್ಯಾನ್ ಮಾಡುವದಿಲ್ಲ. ಸತತ ಎರಡು ಎಸೆತಗಳನ್ನು ಬೌನ್ಸರ್ ಮಾಡಬಹುದು ಅಥವಾ ಒಂದು ಹಾಗೂ ಆರನೇ ಎಸೆತವನ್ನು ಎಸೆಯಬಹುದು' ಎಂದಿದ್ದಾರೆ.</p><p>'ಇದರಿಂದ ನಾನು ಯಾವ ಎಸೆತವನ್ನು ಬೌನ್ಸರ್ ಮಾಡುತ್ತೇನೆಂದು ಬ್ಯಾಟರ್ಗೆ ತಿಳಿಯುವುದು ಸ್ವಲ್ವ ಕಷ್ಟಕರವಾಗಿದೆ. ನಾನು ಬೌನ್ಸರ್ ಎಸೆಯುವಾಗ ಶೇ 100ರಷ್ಟು ಬದ್ಧನಾಗಿರುತ್ತೇನೆ. ಹಾಗಾಗಿ ಹೆಚ್ಚು ನಿಖರತೆ ಕಾಪಾಡಲು ನೆರವಾಗಿದೆ' ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಬೌನ್ಸರ್ ಎಸೆತದ ಮೂಲಕವೇ ವಿಭಿನ್ನತೆಗೆ ಕಾರಣರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ, ಈ ಕುರಿತು ಮಾತನಾಡಿದ್ದಾರೆ. </p><p>ಭಾನುವಾರ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ರನ್ಗಳ ಅಂತರದ ಜಯ ಗಳಿಸಿತು. </p><p>ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ನಾಲ್ಕು ಓವರ್ಗಳಲ್ಲಿ ಕೇವಲ 26 ರನ್ ಮಾತ್ರ ನೀಡಿದ್ದ ಕೃಣಾಲ್, ಸೂರ್ಯ ಕುಮಾರ್ ಯಾದವ್ ಅವರ ಅಮೂಲ್ಯ ವಿಕೆಟ್ ಕಬಳಿಸಿದರು. </p>.IPL Stats: ವಾಂಖೆಡೆಯ ಹೈಸ್ಕೋರಿಂಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್ಸಿಬಿಗೆ ಜಯ.IPL 2026: ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಆರ್ಸಿಬಿಯ ‘ಬೌನ್ಸರ್’ ಸ್ಪಿನ್ನರ್. <p>ಪಂದ್ಯದ ಬಳಿಕ ಈ ಕುರಿತು ಕೇಳಿದಾಗ, 'ನಾನು ಬೌನ್ಸರ್ ಎಸೆಯಲು ಯಾವುದೇ ಪೂರ್ವ ಯೋಜನೆ ಮಾಡಿಕೊಳ್ಳುವುದಿಲ್ಲ. ಆ ಕ್ಷಣದ ಭಾವನೆಗೆ ತಕ್ಕಂತೆ ಬೌಲಿಂಗ್ ಮಾಡುತ್ತೇನೆ. ಏಕೆಂದರೆ ಬ್ಯಾಟರ್ಗಿಂತಲೂ ಒಂದು ಹೆಜ್ಜೆ ಮುಂದಿರಲು ಬಯಸುತ್ತೇನೆ' ಎಂದಿದ್ದಾರೆ. </p><p>ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ಎಡಗೈ ಆಲ್ರೌಂಡರ್ ಕೃಣಾಲ್ಗೆ ಬ್ಯಾಟಿಂಗ್ನಲ್ಲಿ ಅವಕಾಶ ಕಡಿಮೆಯಾಗಿದೆ. ಆದರೆ ಹಾಲಿ ಚಾಂಪಿಯನ್ ಆರ್ಸಿಬಿ ತಂಡದಲ್ಲಿ ಪ್ರಮುಖ ಬೌಲಿಂಗ್ ಅಸ್ತ್ರವಾಗಿ ಮಾರ್ಪಾಟ್ಟಿದ್ದಾರೆ. </p><p>'ಬೌಲಿಂಗ್ ಚೆನ್ನಾಗಿ ಮೂಡಿ ಬರುತ್ತಿರುವುದಕ್ಕೆ ಸಂತಸವಿದೆ. ನಾನು ಬೌನ್ಸರ್ ಎಸೆಯಲು ಪ್ರಿ-ಪ್ಲ್ಯಾನ್ ಮಾಡುವದಿಲ್ಲ. ಸತತ ಎರಡು ಎಸೆತಗಳನ್ನು ಬೌನ್ಸರ್ ಮಾಡಬಹುದು ಅಥವಾ ಒಂದು ಹಾಗೂ ಆರನೇ ಎಸೆತವನ್ನು ಎಸೆಯಬಹುದು' ಎಂದಿದ್ದಾರೆ.</p><p>'ಇದರಿಂದ ನಾನು ಯಾವ ಎಸೆತವನ್ನು ಬೌನ್ಸರ್ ಮಾಡುತ್ತೇನೆಂದು ಬ್ಯಾಟರ್ಗೆ ತಿಳಿಯುವುದು ಸ್ವಲ್ವ ಕಷ್ಟಕರವಾಗಿದೆ. ನಾನು ಬೌನ್ಸರ್ ಎಸೆಯುವಾಗ ಶೇ 100ರಷ್ಟು ಬದ್ಧನಾಗಿರುತ್ತೇನೆ. ಹಾಗಾಗಿ ಹೆಚ್ಚು ನಿಖರತೆ ಕಾಪಾಡಲು ನೆರವಾಗಿದೆ' ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>