ಬೆಂಗಳೂರು: ಮುತ್ತು ನಾಯಕ್ (23ಕ್ಕೆ4) ಮತ್ತು ಸುರೇಶ್ ಎಚ್.ಕರಣಿ (17ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಸೆಂಟ್ರಲ್ ಎಕ್ಸೈಸ್ ಆ್ಯಂಡ್ ಕಸ್ಟಮ್ಸ್ ತಂಡ ಕೆಎಸ್ಸಿಎ ಗುಂಪು–2, ಡಿವಿಷನ್–1 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೈಸೂರಿನ ಸೌತ್ ವೆಸ್ಟರ್ನ್ ರೈಲ್ವೆ ತಂಡದ ಎದುರು 9 ವಿಕೆಟ್ಗಳ ಜಯಭೇರಿ ಮೊಳಗಿಸಿದೆ.
ಮೊದಲು ಬ್ಯಾಟ್ ಮಾಡಿದ ಸೌತ್ ವೆಸ್ಟರ್ನ್ ರೈಲ್ವೆ, ಅಂಕಿತ್ (59) ಅರ್ಧಶತಕದ ನೆರವಿನಿಂದ 30.2 ಓವರ್ಗಳಲ್ಲಿ 117ರನ್ ಗಳಿಸಿತು.
ಈ ಮೊತ್ತ ಸೆಂಟ್ರಲ್ ಎಕ್ಸೈಸ್ ತಂಡಕ್ಕೆ ಸವಾಲೆನಿಸಲೇ ಇಲ್ಲ. ಬಿ.ಎ.ಮೋಹಿತ್ (ಔಟಾಗದೆ 60) ಮತ್ತು ಎಂ.ನಿದೀಶ್ (ಔಟಾಗದೆ 50) ಅಬ್ಬರದ ಆಟ ಆಡಿದ್ದರಿಂದ, ಈ ತಂಡ ಕೇವಲ ಒಂಬತ್ತು ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ಸೇರಿತು.