ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಕಾರ್ಯದರ್ಶಿ ಸ್ಥಾನಕ್ಕೆ ಮೆನನ್ ಸ್ಪರ್ಧೆ

Last Updated 27 ಸೆಪ್ಟೆಂಬರ್ 2019, 19:13 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್‌ ಮೆನನ್ ಅವರು ಸ್ಪರ್ಧಿಸುವುದು ಖಚಿತವಾಗಿದೆ.

ಅಕ್ಟೋಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಹಿರಿಯ ಕ್ರಿಕೆಟಿಗ ಮತ್ತು ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಅವರ ಪರವಾದ ತಂಡವು ತನ್ನ ಅಭ್ಯರ್ಥಿಗಳನ್ನು ಶುಕ್ರವಾರ ಪ್ರಕಟಿಸಿದೆ. ಈ ಮೊದಲು ಕಾರ್ಯದರ್ಶಿ ಸ್ಥಾನಕ್ಕೆ ಕೆಎಸ್‌ಎಲ್‌ಟಿಎ ಕಾರ್ಯದರ್ಶಿ ಸಿ.ಎಸ್‌. ಸುಂದರರಾಜು ಸ್ಪರ್ಧಿಸುವರೆಂದು ಹೇಳಲಾಗಿತ್ತು. ಆದರೆ ಈಗ ಅವರು ಕಣದಲ್ಲಿಲ್ಲ. ಹೋದ ಎರಡೂವರೆ ವರ್ಷಗಳಿಂದ ಕೆಎಸ್‌ಸಿಎ ಜಂಟಿ ಕಾರ್ಯದರ್ಶಿಯಾಗಿದ್ದ ಸಂತೋಷ್ ಮೆನನ್ ಈ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಖಜಾಂಚಿ ಸ್ಥಾನದ ಸ್ಪರ್ಧಿಯಾಗಿರುವ ವಿನಯ್ ಮೃತ್ಯುಂಜಯ್ ಸಂದೇಶ ಕಳಿಸಿದ್ದಾರೆ. ಹಿರಿಯ ಅಂಪೈರ್ ಶಾವೀರ್ ತಾರಾಪುರ್‌ ಜಂಟಿ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಆಕಾಂಕ್ಷಿಗಳ ಪಟ್ಟಿ: ರೋಜರ್ ಬಿನ್ನಿ (ಅಧ್ಯಕ್ಷ), ಸಂತೋಷ್ ಮೆನನ್ (ಕಾರ್ಯದರ್ಶಿ), ವಿನಯ್ ಮೃತ್ಯುಂಜಯ್ (ಖಜಾಂಚಿ), ಜೆ. ಅಭಿರಾಮ್ (ಉಪಾಧ್ಯಕ್ಷ), ಶಾವೀರ್ ತಾರಾಪುರ್‌ (ಜಂಟಿ ಕಾರ್ಯದರ್ಶಿ), ಶಾಂತಾ ರಂಗಸ್ವಾಮಿ, ಶಾಂತಿ ಸ್ವರೂಪ್ (ಆಜೀವ ಸದಸ್ಯರು), ತಿಲಕನಾಯ್ಡು, ಜೈಸಿಂಗ್, ಕೋಟಾ ಕೋದಂಡರಾಮ (ಸಾಂಸ್ಥಿಕ ಪ್ರತಿನಿಧಿ ವಿಭಾಗ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT