ಬೆಂಗಳೂರು: ಆಲ್ರೌಂಡ್ ಆಟವಾಡಿದ ಬಿ.ಯು. ಶಿವಕುಮಾರ್ (ಔಟಾಗದೆ 61 ಹಾಗೂ 17ಕ್ಕೆ1) ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಇಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಗಳಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ತಂಡವು 8 ವಿಕೆಟ್ಗಳಿಂದ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ಗೆದ್ದಿತು. ಟೂರ್ನಿಯಲ್ಲಿ ತಂಡಕ್ಕೆ ಇದು ನಾಲ್ಕನೇ ಜಯ.
ಟಾಸ್ ಗೆದ್ದ ಹುಬ್ಬಳ್ಳಿ ತಂಡದ ನಾಯಕ ಲುವನಿತ್ ಸಿಸೊಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಶಿವಮೊಗ್ಗ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 146 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡವು 17.2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 149 ರನ್ ಗಳಿಸಿತು. ಲುವನಿತ್ ಸಿಸೊಡಿಯಾ (62; 38ಎ, 4X6, 6X3) ಹಾಗೂ ಶಿವಕುಮಾರ್ ಮೊದಲ ವಿಕೆಟ್ ಜೊತೆಯಾಟದಲ್ಲಿ 107 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಶಿವಕುಮಾರ್ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.
ಅವರು ಬೌಲಿಂಗ್ನಲ್ಲಿಯೂ ಮಿಂಚಿದ್ದರು. ಶಿವಮೊಗ್ಗ ತಂಡಕ್ಕೆ ಶರತ್ ಬಿಆರ್ (36; 33ಎ) ಹಾಗೂ ಸ್ಟಾಲಿನ್ ಹೂವರ್ (38; 25ಎ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ 71 ರನ್ ಸೇರಿಸಿದ್ದ ಅವರ ಜೊತೆಯಾಟವನ್ನು ಶಿವಕುಮಾರ್ ಮುರಿದರು. ಹತ್ತನೇ ಓವರ್ನಲ್ಲಿ ಸ್ಟಾಲಿನ್ ಹೂವರ್ ವಿಕೆಟ್ ಪಡೆದ ಅವರು ಮಿಂಚಿದ್ದರು. ಸಿದ್ಧಾರ್ಥ್ (23) ಹಾಗೂ ಎಸ್. ಚೈತನ್ಯ (ಔಟಾಗದೆ 32) ಕೂಡ ಉಪಯುಕ್ತ ಕಾಣಿಕೆ ನೀಡಿದರು. ಆದರೆ, ಶಿವಮೊಗ್ಗ ತಂಡವು ಹುಬ್ಬಳ್ಳಿಗೆ ಕಠಿಣ ಗುರಿಯೊಡ್ಡುವಲ್ಲಿ ಸಫಲವಾಗಲಿಲ್ಲ.
ಸಂಕ್ಷಿಪ್ತ ಸ್ಕೋರು ಶಿವಮೊಗ್ಗ ಸ್ಟ್ರೈಕರ್ಸ್: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 146 (ಬಿ.ಆರ್. ಶರತ್ 36, ಸ್ಟಾಲಿನ್ ಹೂವರ್ 38, ಸಿದ್ಧಾರ್ಥ್ 23, ಎಸ್. ಚೈತನ್ಯ ಔಟಾಗದೆ 32, ವಿ. ಕೌಶಿಕ್ 29ಕ್ಕೆ2)