ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ವಿರುದ್ಧ ಶ್ರೀಕಾಂತ್ ಕಿಡಿ

Last Updated 20 ಅಕ್ಟೋಬರ್ 2020, 19:53 IST
ಅಕ್ಷರ ಗಾತ್ರ

ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸೋಮವಾರ ಕೇದಾರ್ ಜಾಧವ್ ಅವರಿಗೆ ಆಡಲು ಅವಕಾಶ ಕೊಟ್ಟಿರುವ ಕುರಿತು ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಅವರು ಮಹೇಂದ್ರಸಿಂಗ್ ಧೋನಿ ಮೇಲೆ ಕಿಡಿ ಕಾರಿದ್ದಾರೆ.

’ತಂಡದ ಯುವ ಆಟಗಾರರಲ್ಲಿ ಧೋನಿಗೆ ಜಯಿಸುವ ತುಡಿತ (ಕಿಡಿ) ಕಾಣುತ್ತಿಲ್ಲವಂತೆ. ಆದರೆ ಕೇದಾರ್ ಜಾಧವ್ ಅವರಲ್ಲಿ ಯಾವ ಕಿಡಿಯನ್ನು ಧೋನಿ ಗಮನಿಸಿದರು‘ ಎಂದು 1983ರ ವಿಶ್ವಕಪ್ ತಂಡದ ಆಟಗಾರ ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ಚೆನ್ನೈ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡದಿರುವುದು ಸೋಲಿಗೆ ಕಾರಣ ಎಂಬ ಟೀಕೆಗಳಿಗೆ ಪ್ರತಿ್ಕ್ರಿಯಿಸಿದ್ದ ಧೋನಿ,‘ಆಡುವ ಹನ್ನೊಂದರ ಬಳಗದಲ್ಲಿ ಅನುಭವಿಗಳ ಬದಲು ಸ್ಥಾನ ನೀಡಲು, ಯುವ ಕ್ರಿಕೆಟಿಗರಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಕಂಡು ಬಂದಿಲ್ಲ. ಆದರೆ, ಈ ಫಲಿತಾಂಶವು ಯುವಕರಿಗೆ ಉಳಿದ ಪಂದ್ಯಗಳಲ್ಲಿ ಅವಕಾಶ ನೀಡುವಂತೆ ಮಾಡಿದೆ’ ಎಂದಿದ್ದರು.

ಈ ಬಗ್ಗೆ ಶ್ರೀಕಾಂತ್‌, ‘ಧೋನಿಯ ಈ ಹೇಳಿಕೆಯನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಅವರ ಮಾತುಗಳು ಅರ್ಥಹೀನವಾಗಿವೆ.ಮುಖ್ಯವಾಗಿ ಆಯ್ಕೆ ಪ್ರಕ್ರಿಯೆಯೇ ತಪ್ಪಾಗಿದೆ.ಯುವ ಆಟಗಾರ ಎನ್‌.ಜಗದೀಶನ್‌ ಅವರಿಗೆ ಪಂದ್ಯ ಗೆಲ್ಲಿಸಿಕೊಡುವ ತುಡಿತ ಹೊಂದಿಲ್ಲವೆನ್ನುವ ಧೋನಿಗೆ, ಕೇದಾರ್‌ ಜಾಧವ್ ಅವರಲ್ಲಿ ಆ ಗುಣ ಇದೆಯೇ? ಇದು ಹಾಸ್ಯಾಸ್ಪದ. ಧೋನಿ ಮಾಡಿರುವುದಾದರೂ ಏನು?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗದೀಶನ್‌ ಅವರು ಈ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಆಡಿದ್ದರು.

ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕರ್ಣ ಶರ್ಮಾ ಬದಲು ಪಿಯೂಷ್‌ ಚಾವ್ಲಾ ಅವರಿಗೆ ಸ್ಥಾನ ನೀಡಲಾಗಿತ್ತು.

ಇದನ್ನೂ ಪ್ರಶ್ನಿಸಿರುವ ಶ್ರೀಕಾಂತ್‌, ‘ಯುವಕರಿಗೆ ಒತ್ತಡವಿಲ್ಲದೆ ಆಡುವ ಅವಕಾಶ ಈಗ ಸಿಗಬಹುದು ಎಂದು ಧೋನಿ ಹೇಳುತ್ತಿದ್ದಾರೆ. ಇಷ್ಟು ಕಳಪೆ ಕಾರ್ಯವಿಧಾನ ನನಗೆ ಅರ್ಥವಾಗುತ್ತಿಲ್ಲ. ಕರಣ್‌ ಶರ್ಮಾ ಅವರು ಕೊನೆ ಪಕ್ಷ ವಿಕೆಟ್‌ಗಳನ್ನಾದರೂ ಪಡೆಯುತ್ತಿದ್ದರು. ಚಾವ್ಲಾ ಸುಮ್ಮನೆ ಬೌಲಿಂಗ್‌ ಮಾಡಿ ಬರುತ್ತಾರೆ. ಈಗಾಗಲೇ ಆಟ ಕೈ ಜಾರಿದೆ. ಧೋನಿ ಶ್ರೇಷ್ಠ ಕ್ರಿಕೆಟಿಗ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಅವರ ಮಾತನ್ನು ನಾನು ಒಪ್ಪಲಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT