ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್, ‘ನಾವು ಚೆನ್ನಾಗಿ ಹೋರಾಟ ನಡೆಸಿದೆವು. ನಾವು ಸರಿಯಾಗಿ ಆಡುತ್ತಿದ್ದೆವು. ಚೆನ್ನಾಗಿ ಬ್ಯಾಟಿಂಗ್ ಮಾಡದ ಹೊರತಾಗಿಯೂ ಬೌಲರ್ಗಳು ಪಂದ್ಯವನ್ನು ನಮ್ಮ ಹಿಡಿತದಲ್ಲೇ ಇರುವಂತೆ ನೋಡಿಕೊಂಡಿದ್ದರು. ಆದರೆ ಕೊನೆಯಲ್ಲಿ ಎಂಸ್ ಧೋನಿ ಫಲಿತಾಂಶವನ್ನು ಬದಲಾಯಿಸಿದರು. ಅವರು ಎಷ್ಟು ಶಾಂತಚಿತ್ತರಾಗಿರುತ್ತಾರೆ, ಪಂದ್ಯವನ್ನು ಹೇಗೆ ಗೆಲ್ಲಿಸಿಕೊಡುತ್ತಾರೆ ಎಂಬುದು ನಮಗೆಲ್ಲ ಗೊತ್ತಿತ್ತು’ ಎಂದು ಹೇಳಿದ್ದಾರೆ.