ನವದೆಹಲಿ: ಬೀದಿಬದಿಯ ಮಕ್ಕಳಿಗಾಗಿ ಆಯೋಜಿಸಲಾಗುವ ವಿಶ್ವಕಪ್ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ರಾಯಭಾರಿಯಾಗಿ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ನೇಮಕಗೊಂಡಿದ್ದಾರೆ.
ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತು ಐಪಿಎಲ್ ಫ್ರಾಂಚೈಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಈ ಹಿಂದೆ ರಾಯಭಾರಿಯಾಗಿ ಆಯ್ಕೆ ಮಾಡಲಾಗಿತ್ತು.
‘ಭಾರತದಲ್ಲಿ ಅಂದಾಜು 20 ಲಕ್ಷ ಬೀದಿ ಮಕ್ಕಳು ಇದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಪ್ರತಿಭೆಯನ್ನು ಬೆಳಕಿಗೆ ತರಬೇಕಾಗಿದೆ. ಇಂಥ ಮಕ್ಕಳ ವಿಶ್ವಕಪ್ ಟೂರ್ನಿಗೆ ರಾಯಭಾರಿಯಾಗುವುದೆಂದರೆ ಖುಷಿಯ ವಿಷಯ. ಅವರಿಗೆ ಸಾರ್ವಜನಿಕರೂ ಬೆಂಬಲ ನೀಡಬೇಕು’ ಎಂದು ಮಿಥಾಲಿ ಹೇಳಿದರು.