ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನೋಡಿದಾಗ ರಾಜಕೀಯ ಕಗ್ಗಂಟು ಸುಲಭವಾಗಿ ಬಗೆಹರಿಯುವ ಲಕ್ಷಣ ಕಾಣುವುದಿಲ್ಲ. ರಾಜ್ಯಪಾಲರು ಯಾವುದೇ ನಿರ್ಣಯ ನೀಡಿದರೂ ಅದು ಅಲ್ಪಕಾಲೀನ ಆಗುವ ಸಂಭವವೇ ಹೆಚ್ಚು. ಅಪರೇಷನ್ ಕಮಲ- ಕೈ, ಪಂಚತಾರಾ ಹೋಟೆಲ್- ರೆಸಾರ್ಟ್ ವಾಸ್ತವ್ಯ, ಕುದುರೆ ವ್ಯಾಪಾರ ಮುಂತಾದ ತೊಂಬತ್ತರ ದಶಕದ ಕೆಲವು ಕಹಿ ಘಟನೆಗಳು (ರಾಮಕೃಷ್ಣ ಹೆಗಡೆಯವರ ಮೇಲೆ ದಾಳಿ) ಪುನರಾವರ್ತನೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.