‘ಸೀಮಿತ ಓವರ್ಗಳ ಪಂದ್ಯಗಳ ಮಿಡಲ್ ಓವರ್ಗಳಲ್ಲಿ ವಿಕೆಟ್ ಗಳಿಸುವ ಮೂಲಕ ಚಾಹಲ್ ಹಾಗೂ ಕುಲದೀಪ್ ಯಾದವ್ ಅವರು ಭಾರತ ತಂಡದಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸ್ಪಿನ್ನರ್ಗಳಾಗಿದ್ದಾರೆ. ಚಾಹಲ್ ಪಿಚ್ನ ಮರ್ಮ ಅರಿತು ಬೌಲ್ ಮಾಡಬೇಕು. ‘ವೈಡ್ ಆಫ್ ದ ಕ್ರೀಸ್’ ಬಳಸಬಹುದು. ಸಪಾಟಾದ ಪಿಚ್ ಆಗಿದ್ದರೆ ಸ್ಪಂಪ್ನ ನೇರಕ್ಕೆ ಚೆಂಡು ಎಸೆಯಬಹುದು’ ಎಂದು ಸದ್ಯ ಪಾಕಿಸ್ತಾನ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಮುಷ್ತಾಕ್ ಹೇಳಿದ್ದಾರೆ.