<p>ಪಂಜಾಬ್ ಕಿಂಗ್ಸ್ ತಂಡದ ನಾಯಕ, ಸ್ಪೋಟಕ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ಫೇವರಿಟ್ ತಿನಿಸು ತುಳುನಾಡಿನ ಪ್ರಸಿದ್ಧ ‘ನೀರ್ ದೋಸೆ’ ಅಂತೆ. ಹೌದು, ಸ್ವತಃ ಶ್ರೇಯಸ್ ಅಯ್ಯರ್ ಈ ವಿಷಯ ಬಹಿರಂಗಪಡಿಸಿದ್ದಾರೆ. </p><p>ಜಿಯೋ ಹಾಟ್ ಸ್ಟಾರ್ ಹಾಗೂ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಚುಟುಕು ಸಂದರ್ಶನದಲ್ಲಿ ಶ್ರೇಯಸ್, ತಮ್ಮ ವೈಯಕ್ತಿಕ ಜೀವನ ಹಾಗೂ ಐಪಿಎಲ್ಗೆ ಸಂಬಂಧಿಸಿದ ಹಲವು ಆಸಕ್ತಿಕರ ಸಂಗತಿ ಹಂಚಿಕೊಂಡಿದ್ದಾರೆ.</p><p><strong>ತುಳುನಾಡಿನ ಜತೆ ನಂಟು:</strong></p><p>ಶ್ರೇಯಸ್ ಅಯ್ಯರ್ ಅವರ ತಾಯಿ ರೋಹಿಣಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯವರು. ತಂದೆ ತಮಿಳುನಾಡಿನ ಮೂಲದವರು. ಉದ್ಯೋಗ ನಿಮಿತ್ತ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿದೆ.</p>.<p>ಮುಂದಿನ ಜೀವನಪೂರ್ತಿ ಸೇವಿಸಲು ಯಾವ ಇಷ್ಟದ ತಿನಿಸು ಆಯ್ಕೆ ಮಾಡುತ್ತೀರಿ ಎಂದು ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ, 'ನೀರ್ ದೋಸೆ' ಎಂದು ಉತ್ತರಿಸಿದ್ದಾರೆ. ತಮ್ಮ ತಾಯಿಯ ಕೈರುಚಿಯ ನೀರ್ ದೋಸೆ, ಶ್ರೇಯಸ್ ಅವರ ಇಷ್ಟದ ತಿನಿಸಾಗಿದ್ದು, ತುಳುನಾಡಿನ ಅಭಿಮಾನಿಗಳಿಗೆ ಖುಷಿ ಮೂಡಿಸಿದೆ.</p><p><strong>ಪಾಟಿದಾರ್ ಆಟಕ್ಕೆ ಅಯ್ಯರ್ ಫಿದಾ</strong></p><p>ಐಪಿಎಲ್ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿರುವ ಶ್ರೇಯಸ್ ಅಯ್ಯರ್, ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ಆಟ ಹಾಗೂ ನಾಯಕತ್ವದ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಂಜಾಬ್ ಕಿಂಗ್ಸ್ ತಂಡದ ನಾಯಕ, ಸ್ಪೋಟಕ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ಫೇವರಿಟ್ ತಿನಿಸು ತುಳುನಾಡಿನ ಪ್ರಸಿದ್ಧ ‘ನೀರ್ ದೋಸೆ’ ಅಂತೆ. ಹೌದು, ಸ್ವತಃ ಶ್ರೇಯಸ್ ಅಯ್ಯರ್ ಈ ವಿಷಯ ಬಹಿರಂಗಪಡಿಸಿದ್ದಾರೆ. </p><p>ಜಿಯೋ ಹಾಟ್ ಸ್ಟಾರ್ ಹಾಗೂ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಚುಟುಕು ಸಂದರ್ಶನದಲ್ಲಿ ಶ್ರೇಯಸ್, ತಮ್ಮ ವೈಯಕ್ತಿಕ ಜೀವನ ಹಾಗೂ ಐಪಿಎಲ್ಗೆ ಸಂಬಂಧಿಸಿದ ಹಲವು ಆಸಕ್ತಿಕರ ಸಂಗತಿ ಹಂಚಿಕೊಂಡಿದ್ದಾರೆ.</p><p><strong>ತುಳುನಾಡಿನ ಜತೆ ನಂಟು:</strong></p><p>ಶ್ರೇಯಸ್ ಅಯ್ಯರ್ ಅವರ ತಾಯಿ ರೋಹಿಣಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯವರು. ತಂದೆ ತಮಿಳುನಾಡಿನ ಮೂಲದವರು. ಉದ್ಯೋಗ ನಿಮಿತ್ತ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿದೆ.</p>.<p>ಮುಂದಿನ ಜೀವನಪೂರ್ತಿ ಸೇವಿಸಲು ಯಾವ ಇಷ್ಟದ ತಿನಿಸು ಆಯ್ಕೆ ಮಾಡುತ್ತೀರಿ ಎಂದು ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ, 'ನೀರ್ ದೋಸೆ' ಎಂದು ಉತ್ತರಿಸಿದ್ದಾರೆ. ತಮ್ಮ ತಾಯಿಯ ಕೈರುಚಿಯ ನೀರ್ ದೋಸೆ, ಶ್ರೇಯಸ್ ಅವರ ಇಷ್ಟದ ತಿನಿಸಾಗಿದ್ದು, ತುಳುನಾಡಿನ ಅಭಿಮಾನಿಗಳಿಗೆ ಖುಷಿ ಮೂಡಿಸಿದೆ.</p><p><strong>ಪಾಟಿದಾರ್ ಆಟಕ್ಕೆ ಅಯ್ಯರ್ ಫಿದಾ</strong></p><p>ಐಪಿಎಲ್ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿರುವ ಶ್ರೇಯಸ್ ಅಯ್ಯರ್, ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ಆಟ ಹಾಗೂ ನಾಯಕತ್ವದ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>